• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕುಮುಟಾ ಶಾಸಕ ದಿನಕರ ಶೆಟ್ಟಿಯಿಂದ ಪಿಂಚಣೆ ಸಮಸ್ಯೆಗೆ ಸ್ಪಂದನೆ

November 3, 2018 by Vishwanath Shetty Leave a Comment

watermarked IMG 20181103 121344079

ಶಾಸಕರು ಪ್ರತಿ ವಾರ ನಡೆಸುವ ಜನ ಸ್ಪಂದನ ಸಭೆಯಿಂದ ಮತ್ತೊಂದು ಯಶಸ್ಸು. ಪಿಂಚಣೆದಾರರ ಹಲವು ದಿನದಿಂದ ಬಾಕಿ ಇದ್ದ ಹಣವನ್ನು ಬಿಡುಗೊಳಿಸಲು ಶ್ರಮಿಸಿ ಕೊನೆಗೂ ಯಶ್ವಸಿಯಾಗಿ ಆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಶಾಸಕ ದಿನಕರ ಶಟ್ಟಿ ಹೊನ್ನಾವರದ 396 ಫಲಾನುಭವಿಗಳಿಗೆ ನೆರವಾಗಿದ್ದಾರೆ.

ಪ್ರತಿ ತಿಂಗಳು ಸರ್ಕಾರ ಕಷ್ಟದಲ್ಲಿದ್ದವರಿಗೆ ನೆರವಾಗಲು ಪಿಂಚಣೆ ರೂಪದಲ್ಲಿ ವಿತರಣೆಯಾಗುತ್ತಿದ್ದ ಹಣ ಕೆಲವು ತಿಂಗಳಿನಿಂದ ಹಲವರಿಗೆ ವಿತರಣೆ ಆಗುತ್ತಿರಲಿಲ್ಲ. ಈ ಹಣ ಅವರ ದಿನನಿತ್ಯದ ಖರ್ಚು ಭರಿಸಲು ಸಹಕಾರಿಯಾಗುತ್ತಿತು. ಪ್ರತಿ ತಿಂಗಳು ಅಂಚೆ ಕಛೇರಿಯಿಂದ ಬರುತ್ತಿದ್ದ ಹಣ ಬಂದಿಲ್ಲವಾದರಿಂದ ಸಂಕಷ್ಟ ಅನುಭವಿಸುತ್ತಿದ್ದರು. ಹೊನ್ನಾವರದಲ್ಲಿ ಶನಿವಾರ ಶಾಸಕರು ಸಮಸ್ಯೆ ಆಲಿಸುತ್ತಿರುವಾಗ ಒರ್ವ ಈ ಸೌಲಭ್ಯದ ವಂಚಿತರು ತಮಗೆ ಸಿಗುತ್ತಿಲ್ಲ ಸಮಸ್ಯೆಯಾಗುತ್ತಿದೆ ದಯಮಾಡಿ ಸರಿಪಡಿಸುವಂತೆ ಮನವಿಯನ್ನು ಮಾಡಿಕೊಂಡಿದ್ದರು. ಮನವಿಯನ್ನು ಸ್ವೀಕರಿಸಿ ಬೆಂಗಳೂರಿಗೆ ಹೋದಾಗ ಕುಮುಟಾದ ಪಿನ್ ನಂಬರ್ ನೊಂದಾವಣೆ ಆಗಿರುವುದು ಗಮನಕ್ಕೆ ಬಂದಿತು. ಇದನ್ನು ಗಮನಿಸಿದ ಶಾಸಕರು ತಾಲೂಕಿನ ಒಟ್ಟು 396 ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿರುದನ್ನು ತಿಳಿದು ಆ ಎಲ್ಲವನ್ನು ಸರಿಪಡಿಸಿದ್ದಾರೆ. ಅಷ್ಟೆ ಅಲ್ಲದೇ ಸಮಸ್ಯೆಯ ನಂತರ ಬಿಡುಗಡೆಯಾಗಬೇಕಿದ್ದ ಒಟ್ಟು ಮೊತ್ತವನ್ನು ಇನ್ನೆನ್ನು ಕೆಲವೇ ದಿನದಲ್ಲಿ ಬಿಡುಗಡೆಯಾಗಲಿದೆ ಎಂದು ತಹಶೀಲ್ದಾರ ಕಚೇರಿಯಲ್ಲಿ ಶಾಸಕ ದಿನಕರ ಶೆಟ್ಟಿ ಮಾಹಿತಿ ನೀಡಿದರು. ಪ್ರತಿ ಶುಕ್ರವಾರ ಕುಮುಟಾ ಹಾಗೂ ಶನಿವಾರ ಹೊನ್ನಾವರದಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಅವರ ಸಮಸ್ಯೆಯನ್ನು ಅರಿತು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದು ಇದುವರೆಗೆ ಹಲವಾರು ಸಮಸ್ಯೆ ಬಗೆಹರಿದಿದೆ. ತಾಲೂಕಿನಲ್ಲಿ ಒಳಚರಂಡಿ ಕಾಮಗಾರಿ ಅಸಮರ್ಪಕತೆಯ ಕುರಿತು ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ .ನಾಡದೋಣಿಯವರಿಗೆ ವಿತರಿಸಲಾಗುತ್ತಿದ್ದ ಸೀಮೆ ಎಣ್ಣೆ ವಿತರಣೆ ಕೆಲವು ದಿನದಿಂದ ಸ್ಥಗಿತವಾಗಿತ್ತು ಆ ಸಮಸ್ಯೆಯೂ ಪರಿಹಾರವಾಗಿದೆ. ಹೊನ್ನಾವರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರನ್ನು ಪೂರೈಸುವ ಶರಾವತಿ ಕುಡಿಯುವ ನೀರಿನ ಯೋಜನೆಯ ಕುರಿತು ಮಾತನಾಡಿ ತಾಲೂಕಿನ 9 ಗ್ರಾಮಗಳಿಗೆ ನೀರನ್ನು ಹಂಚುವುದಕ್ಕೆ ಬೇಕಾಗುವ 56 ಕೋಟಿಗೂ ಅಧಿಕ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 122 ಕೋಟಿ ವೆಚ್ಚದ ಯೋಜನೆಯ ಅನುಷ್ಠಾನಕ್ಕೆ ಅತಿದೊಡ್ಡ ತೊಡಕಾಗಿದ್ದ ಅರಣ್ಯಭುಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ ದೊರೆಯುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಬಿಜೆಪಿ ಮಂಡಲಾಧ್ಯಕ್ಷ ಅಧ್ಯಕ್ಷ ಸುಬ್ರಾಯ ನಾಯ್ಕ, ಎಂ.ಜಿ.ನಾಯ್ಕ, ಉಮೇಶ ನಾಯ್ಕ, ಶ್ರೀಕಾಂತ ಮೊಗೇರ, ಟಿ.ಎಸ್.ಹೆಗಡೆ ಜಿ.ಕೇ.ಶೇಟ್, ಬಾಲಚಂದ್ರ ನಾಯ್ಕ, ಎಂ.ಎಸ್.ಹೆಗಡೆ ಶಶಿಕಲಾ ಆಚಾರಿ ಮುಂತಾದವರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಕುಮುಟಾ ಶಾಸಕ, ಜನ ಸ್ಪಂದನ ಸಭೆ, ದಿನಕರ ಶೆಟ್ಟಿ, ದಿನನಿತ್ಯದ ಖರ್ಚು ಭರಿಸಲು, ಪಿಂಚಣೆ ಸಮಸ್ಯೆಗೆ, ಪ್ರಾಮಾಣಿಕ ಪ್ರಯತ್ನ, ಸ್ಪಂದನೆ, ಹೊನ್ನಾವರದ 396 ಫಲಾನುಭವಿ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...