ಶಾಸಕರು ಪ್ರತಿ ವಾರ ನಡೆಸುವ ಜನ ಸ್ಪಂದನ ಸಭೆಯಿಂದ ಮತ್ತೊಂದು ಯಶಸ್ಸು. ಪಿಂಚಣೆದಾರರ ಹಲವು ದಿನದಿಂದ ಬಾಕಿ ಇದ್ದ ಹಣವನ್ನು ಬಿಡುಗೊಳಿಸಲು ಶ್ರಮಿಸಿ ಕೊನೆಗೂ ಯಶ್ವಸಿಯಾಗಿ ಆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಶಾಸಕ ದಿನಕರ ಶಟ್ಟಿ ಹೊನ್ನಾವರದ 396 ಫಲಾನುಭವಿಗಳಿಗೆ ನೆರವಾಗಿದ್ದಾರೆ.
ಪ್ರತಿ ತಿಂಗಳು ಸರ್ಕಾರ ಕಷ್ಟದಲ್ಲಿದ್ದವರಿಗೆ ನೆರವಾಗಲು ಪಿಂಚಣೆ ರೂಪದಲ್ಲಿ ವಿತರಣೆಯಾಗುತ್ತಿದ್ದ ಹಣ ಕೆಲವು ತಿಂಗಳಿನಿಂದ ಹಲವರಿಗೆ ವಿತರಣೆ ಆಗುತ್ತಿರಲಿಲ್ಲ. ಈ ಹಣ ಅವರ ದಿನನಿತ್ಯದ ಖರ್ಚು ಭರಿಸಲು ಸಹಕಾರಿಯಾಗುತ್ತಿತು. ಪ್ರತಿ ತಿಂಗಳು ಅಂಚೆ ಕಛೇರಿಯಿಂದ ಬರುತ್ತಿದ್ದ ಹಣ ಬಂದಿಲ್ಲವಾದರಿಂದ ಸಂಕಷ್ಟ ಅನುಭವಿಸುತ್ತಿದ್ದರು. ಹೊನ್ನಾವರದಲ್ಲಿ ಶನಿವಾರ ಶಾಸಕರು ಸಮಸ್ಯೆ ಆಲಿಸುತ್ತಿರುವಾಗ ಒರ್ವ ಈ ಸೌಲಭ್ಯದ ವಂಚಿತರು ತಮಗೆ ಸಿಗುತ್ತಿಲ್ಲ ಸಮಸ್ಯೆಯಾಗುತ್ತಿದೆ ದಯಮಾಡಿ ಸರಿಪಡಿಸುವಂತೆ ಮನವಿಯನ್ನು ಮಾಡಿಕೊಂಡಿದ್ದರು. ಮನವಿಯನ್ನು ಸ್ವೀಕರಿಸಿ ಬೆಂಗಳೂರಿಗೆ ಹೋದಾಗ ಕುಮುಟಾದ ಪಿನ್ ನಂಬರ್ ನೊಂದಾವಣೆ ಆಗಿರುವುದು ಗಮನಕ್ಕೆ ಬಂದಿತು. ಇದನ್ನು ಗಮನಿಸಿದ ಶಾಸಕರು ತಾಲೂಕಿನ ಒಟ್ಟು 396 ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿರುದನ್ನು ತಿಳಿದು ಆ ಎಲ್ಲವನ್ನು ಸರಿಪಡಿಸಿದ್ದಾರೆ. ಅಷ್ಟೆ ಅಲ್ಲದೇ ಸಮಸ್ಯೆಯ ನಂತರ ಬಿಡುಗಡೆಯಾಗಬೇಕಿದ್ದ ಒಟ್ಟು ಮೊತ್ತವನ್ನು ಇನ್ನೆನ್ನು ಕೆಲವೇ ದಿನದಲ್ಲಿ ಬಿಡುಗಡೆಯಾಗಲಿದೆ ಎಂದು ತಹಶೀಲ್ದಾರ ಕಚೇರಿಯಲ್ಲಿ ಶಾಸಕ ದಿನಕರ ಶೆಟ್ಟಿ ಮಾಹಿತಿ ನೀಡಿದರು. ಪ್ರತಿ ಶುಕ್ರವಾರ ಕುಮುಟಾ ಹಾಗೂ ಶನಿವಾರ ಹೊನ್ನಾವರದಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಅವರ ಸಮಸ್ಯೆಯನ್ನು ಅರಿತು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದು ಇದುವರೆಗೆ ಹಲವಾರು ಸಮಸ್ಯೆ ಬಗೆಹರಿದಿದೆ. ತಾಲೂಕಿನಲ್ಲಿ ಒಳಚರಂಡಿ ಕಾಮಗಾರಿ ಅಸಮರ್ಪಕತೆಯ ಕುರಿತು ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ .ನಾಡದೋಣಿಯವರಿಗೆ ವಿತರಿಸಲಾಗುತ್ತಿದ್ದ ಸೀಮೆ ಎಣ್ಣೆ ವಿತರಣೆ ಕೆಲವು ದಿನದಿಂದ ಸ್ಥಗಿತವಾಗಿತ್ತು ಆ ಸಮಸ್ಯೆಯೂ ಪರಿಹಾರವಾಗಿದೆ. ಹೊನ್ನಾವರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರನ್ನು ಪೂರೈಸುವ ಶರಾವತಿ ಕುಡಿಯುವ ನೀರಿನ ಯೋಜನೆಯ ಕುರಿತು ಮಾತನಾಡಿ ತಾಲೂಕಿನ 9 ಗ್ರಾಮಗಳಿಗೆ ನೀರನ್ನು ಹಂಚುವುದಕ್ಕೆ ಬೇಕಾಗುವ 56 ಕೋಟಿಗೂ ಅಧಿಕ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 122 ಕೋಟಿ ವೆಚ್ಚದ ಯೋಜನೆಯ ಅನುಷ್ಠಾನಕ್ಕೆ ಅತಿದೊಡ್ಡ ತೊಡಕಾಗಿದ್ದ ಅರಣ್ಯಭುಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ ದೊರೆಯುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕ ಬಿಜೆಪಿ ಮಂಡಲಾಧ್ಯಕ್ಷ ಅಧ್ಯಕ್ಷ ಸುಬ್ರಾಯ ನಾಯ್ಕ, ಎಂ.ಜಿ.ನಾಯ್ಕ, ಉಮೇಶ ನಾಯ್ಕ, ಶ್ರೀಕಾಂತ ಮೊಗೇರ, ಟಿ.ಎಸ್.ಹೆಗಡೆ ಜಿ.ಕೇ.ಶೇಟ್, ಬಾಲಚಂದ್ರ ನಾಯ್ಕ, ಎಂ.ಎಸ್.ಹೆಗಡೆ ಶಶಿಕಲಾ ಆಚಾರಿ ಮುಂತಾದವರು ಉಪಸ್ಥಿತರಿದ್ದರು.
Leave a Comment