ಹೊನ್ನಾವರ ,ನಾಗಮಂಗಲ ತಾಲ್ಲೂಕು ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯೊಳಗಿನ ಬಾಲಕರ ವಿಭಾಗದ ಪೋಲ್ ವಾಲ್ಟ್ ಸ್ಫರ್ಧೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಪ್ರಶಾಂತ ಬೀರು ಗೌಡ ದ್ವಿತೀಯ ಸ್ಥಾನ ಪೆಡದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಸತತ 2ನೇ ಬಾರಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳು ಆಯ್ಕೆಯಾಗುವಂತೆ ಮಾರ್ಗದರ್ಶನ ನೀಡಿದ ಎಸ್.ಎನ್. ಹೆಗಡೆಯವರನ್ನು ಮತ್ತು ವಿದ್ಯಾರ್ಥಿ ಪ್ರಶಾಂತ ಬೀರು ಗೌಡ ಇವರನ್ನು ಶಿಕ್ಷಕ ವೃಂದದವರು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಹೆಬ್ಬಾರ್ , ಉಪ ನಿರ್ದೇಶಕರಾದ ಎನ್.ಜಿ.ನಾಯಕ , ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ್ ಪದಕಿ, ಮುಖ್ಯಾಧ್ಯಪಕರಾದ ಎಲ್.ಎಮ್.ಹೆಗಡೆ ಕರ್ಕಿ ಸಿ.ಆರ್.ಪಿ. ಸುರೇಶ ಶೆಟ್ಟಿ ,ಊರಿನ ನಾಗರಿಕರು, ಶಾಲೆಯ ಪೂರ್ವ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
Leave a Comment