ಹೊನ್ನಾವರ . ನೆಹರು ಯುವ ಕೇಂದ್ರ ಕಾರವಾರ ,ಯುವ ಕಾರ್ಯ ಕ್ರೀಡಾ ಸಚಿವಾಲಯ ,ತಾಲೂಕ ಯುವ ಒಕ್ಕೂಟ ಹೊನ್ನಾವರ .ಡಾ|| ಬಿ.ಆರ್ ಅಂಬೇಡ್ಕರ ಹಳ್ಳೇರ ಯುವಕ ಸಂಘ ಕೆಳಗಿನ ಮೂಡ್ಕಣ ಇವರ ಸಂಯುಕ್ತ ಆಶ್ರಯದಲ್ಲಿ ಅಳ್ಳಂಕಿಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕ ಮಟ್ಟದ ಕ್ರೀಡಾ ಕೂಟ ನಡೆಯಿತು.
ತಾಲೂ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ಪ್ರಾಸ್ತಾವಿಕ ಮಾತನಾಡಿ ನೆಹರು ಯುವ ಕೇಂದ್ರ ಗ್ರಾಮೀಣ ಯುವ ಜನತೆಯನ್ನು ರಾಷ್ಟÀ ನಿರ್ಮಾಣ ಪ್ರಕ್ರೀಯೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ವ್ಯಕ್ತಿತ್ವ ಮತ್ತು ಕೌಶಲ್ಯ ಅಭಿವೃದ್ದಿಗೆ ಅವಕಾಶ ಒದಗಿಸುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ನೆರೆ ಹೊರೆ ಯುವ ಸಂಸದ್, ಹಾಗೂ ಸ್ವಚ್ಚತಾ ಹೀ ಸೇವಾ, ಭೃಷ್ಟಾಚಾರ ನಿರ್ಮೂಲನೆ ಜಾಗೃತಿ ಕಾರ್ಯಕ್ರಮ, ಹಾಗೂ ಇನ್ನಿತರ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಯುವಕರಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತದೆ.ಎಂದು ಹೇಳಿದರು. ತಾ.ಪಂ ಸದಸ್ಯರಾದ ಲೋಕೇಶ ಡಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಯುವಕರಲ್ಲಿ ಸಧೃಡ ಕಾರ್ಯ, ಕೌಶಲ್ಯ ಮತ್ತು ಸೃಜನಶೀಲತೆಯಿಂದ ಇರಲು ಕ್ರೀಡೆ ಒಂದು ಉತ್ತಮ ಯುವಕರು ಕ್ರೀಡೆಯಲ್ಲಿ ಹೆಚ್ಚಿನ ರೀತಿಯಲ್ಲಿ ತೋಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಕಾಲೇಜಿನ ಪ್ರಾಂಶುಪಾಲರಾದ ಡಾ|| ಜಿ.ಎಸ್.ಹೆಗಡೆ ಮಾತನಾಡಿ ಯುವಕರಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಯಲು ಕ್ರೀಡೆ ಅವಶ್ಯಕ ಮತ್ತು ಇಂತಹ ಕಾರ್ಯಕ್ರಮ ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಲಿ ಎಂದು ಹೇಳಿದರು
.ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷರಾದ ರಾಜೇಶ್ವರಿ ಎಂ.ನಾಯ್ಕ, ಗ್ರಾ.ಪಂ ಉಪಾಧ್ಯಕ್ಷರಾದ ಸುರೇಶ ಜಿ.ನಾಯ್ಕ. ಗಜಾನನ ಹೆಗಡೆ, ಸುಬ್ಬಿ ಹಳ್ಳೇರ, ಯುವಕ ಸಂಘದ ಅಧ್ಯಕ್ಷರಾದ ಸಂತೋಷ ಹಳ್ಳೇರ ಉಪಸ್ಥಿತರಿದ್ದರು. ರಾಜು ಹಳ್ಳೇರ ಕಾರ್ಯಕ್ರಮ ನಿರೂಪಿಸಿದರು. ಸುಬ್ರಮಣ್ಯ ಹಳ್ಳೇರ ಸ್ವಾಗತಿಸಿದರು. ನಂತರ ಯುವಕ,ಉದ್ದ ಜಿಗಿತ, ಗುಂಡು ಎಸೆತ.100 ಮೀಟರ್ ಓಟ, ವಾಲಿಬಾಲ್. ಕಬಡ್ಡಿ, ಯುವತಿಯರಿಗೆ ಥ್ರೋ ಬಾಲ್ ಸ್ಪರ್ಧೆ ಎರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
Leave a Comment