ಹಳಿಯಾಳ:- ಹಳಿಯಾಳದ ಸಾರ್ವಜನಿಕ ತಾಲೂಕಾ ಆಸ್ಪತ್ರೇಯಲ್ಲಿ ತಜ್ಞವೈದ್ಯರುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಪಾದಿಸಿರುವ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಸಂಘಟನೆಯವರು ತಾಲೂಕಾ ವೈದ್ಯಾಧಿಕಾರಿ ಡಾ|| ರಮೇಶ ಕದಂರನ್ನು ಕೂಡಲೇ ವರ್ಗಾವಣೆ ಮಾಡಿ ಉತ್ತಮ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ತಾಲೂಕ ಪಂಚಾಯತ ಅಧಿಕಾರಿ ರಮೇಶ ಕುರಿಯವರ ಅವರಿಗೆ ಮನವಿ ಮೂಲಕ ಆಗ್ರಹಿಸಿರುವ ಸಮೀತಿಯವರು ತಾಲೂಕಾ ಆಸ್ಪತ್ರೆಯಲ್ಲಿನ ಹಲವಾರು ಸಮಸ್ಯೆಗಳ ಕುರಿತು ದೂರು ನೀಡಿದ್ದಾರೆ.
ಮನವಿಯಲ್ಲಿ ಹಳಿಯಾಳ ತಾಲೂಕಾ ಆಸ್ಪತ್ರೇಯ ಎ.ಎಮ್.ಓ ಡಾ||ರಮೇಶ ಕದಂ ಅವರನ್ನು ಈ ಹಿಂದೆ ಭೇಟಿ ಮಾಡಿ, ಈ ಆಸ್ಪತ್ರೆಯ ಎಲ್ಲಾ ತಜ್ಞವೈದ್ಯರು ಕೆಲಸಕ್ಕೆ ಬೆಳಿಗ್ಗೆ 10 ರಿಂದ ಸಾಯಂಕಾಲ 4.30 ರ ರವರೆಗೆ ತಮ್ಮ ಕಾರ್ಯ ನಿರ್ವಹಿಸುವ ಸಮಯದಲ್ಲಿ ಹಾಜರಿರುವುದಿಲ್ಲ ಕಾರಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದ್ದರು ಈವರೆಗೆ ಏನು ಬದಲಾವಣೆ ಆಗಿಲ್ಲಾ. ತಜ್ಞವೈದ್ಯರುಗಳು ತಮಗೆ ಇಷ್ಟ ಬಂದ ಹಾಗೆ ಸಮಯ ಬದಲಾವಣೆ ಮಾಡಿಕೊಂಡಿದ್ದು 10 ರಿಂದ 2, 2 ರಿಂದ 8, ಹೀಗೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಮತ್ತು ಎ.ಬಿ.ಸಿ ಅಂತಾ ಸಮಯವನ್ನು ಕೂಡಾ ಅವರುಗಳೆ ಬದಲಾಯಿಸಿಕೊಂಡಿರುತ್ತಾರೆ.
ಒಟ್ಟೂ ವೈದ್ಯರು 09 ಆಯುಷ 2, ಎಂ.ಬಿ.ಬಿ.ಎಸ್ 1, ವಿಶೇಷ ತಜ್ಞರು ಇದ್ದರು ಆಯುಷ 2 ವಿಶೇಷ ತಜ್ಞರು 2 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದ ಬಗ್ಗೆ ಕಂಡು ಬಂದಿರುತ್ತದೆ, ಇದರಿಂದ ತಜ್ಞ ವೈದ್ಯರು ತಮ್ಮ ಕೆಲಸದ ಸಮಯದಲ್ಲಿ ನಿರ್ಲಕ್ಷತೆಯನ್ನು ಕೈಗೊಳ್ಳುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ ಎಂದು ಆರೋಪಿಸಿರುವ ಸಂಘಟನೆಯವರು ಡಾ|| ರಮೇಶ ಕದಂ ಎ.ಎಮ್.ಓ ಆದ ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲಾ ಮತ್ತು ಸರಿಯಾದ ಸಮಯಕ್ಕೆ ತಜ್ಞವೈದ್ಯರು ಸಿಗದೆ ರೋಗಿಗಳು ಕಷ್ಟವನ್ನು ಅನುಭವಿಸುವ ಪರಿಸ್ಥಿತಿ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.
ಆದ್ದರಿಂದ ಎಲ್ಲಾ ತಜ್ಞವೈದ್ಯರು ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಸರಿಯಾಗಿ ಹಾಜರಿರಲೂ ಹಾಗೂ ಎ.ಎಮ್.ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ|| ರಮೇಶ ಕದಂ ರವರನ್ನು ವರ್ಗಾಯಿಸಬೇಕಾಗಿ ವಿನಂತಿಸುತ್ತೇವೆ. ಒಂದಾನು ವೇಳೆ 15 ದಿನಗಳ ಒಳಗಡೆ ಬೇಡಿಕೆ ಈಡೇರದಿದ್ದರೆ ಸಂಘಟನೆಯಿಂದ ಊಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಮನವಿ ಸಲ್ಲಿಸುವಾಗ ಸಂಘಟನೆ ಜಿಲ್ಲಾಧ್ಯಕ್ಷ ವಿಬಿ ರಾಮಚಂದ್ರ, ತಾಲೂಕಾ ಅಧ್ಯಕ್ಷ ಶಿವಾಜಿ ಹನುಮಂತ ಮಂಗೇಶ್ಕರ, ಪದಾಧಿಕಾರಿಗಳಾದ ಸತ್ತಾರ ಬೆಲಗೇರಿ, ಅಶೋಕ ಕೇಸ್ರೇಕರ, ಉಮೇಶ ಕೊರವರ, ರಾಜು ತಾಂಜ್ರೆ, ಮೀನಾಕ್ಷಿ ಈರ್ಲಾ, ರವಿ ಈರ್ಲಾ ಮೊದಲಾದವರು ಇದ್ದರು.
Leave a Comment