• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರಣ್ಯ ಲೂಟಿಯಲ್ಲಿ ಶಾಮಿಲಾದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮೀತಿ (ಚಂದ್ರಕಾಂತ ಕಾದ್ರೋಳ್ಳಿ) ಬಣದಿಂದ ಅರೆಬೆತ್ತಲೆ ಪಾದಯಾತ್ರೆ

January 31, 2019 by Yogaraj SK Leave a Comment

dalita sangarsha samiti - sambrani are bettale padayatre

ಹಳಿಯಾಳ:- ಹಳಿಯಾಳ ಅರಣ್ಯ ಇಲಾಖೆಯ ಸಾಂಬ್ರಾಣ ವಲಯದ ಬಿಟಗಳಲ್ಲಿ ಅರಣ್ಯ ಇಲಾಖೆಯ ಹಲವು ಸಿಬ್ಬಂದಿಗಳು ಶಾಮಿಲಾಗಿ ಅರಣ್ಯ ಲೂಟಿಯಲ್ಲಿ ತೊಡಗಿದ್ದು ಇವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ(ಚಂದ್ರಕಾಂತ ಕಾದ್ರೋಳ್ಳಿ ಬಣ) ಸಂಘಟನೆಯವರು ಸಾಂಬ್ರಾಣ ಯಿಂದ ಹಳಿಯಾಳದ ವರೆಗೆ ಅರೆಬೆತ್ತಲೆ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದರು.
ಬುಧವಾರ ತಾಲೂಕಿನ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಲ್ಲಿ ಆರ್‍ಎಫ್‍ಓ ದೀಪಕ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಅಲ್ಲಿಂದ ಅರೆ ಬೆತ್ತಲೆ ಪಾದಯಾತ್ರೆಯ ಮೂಲಕ ಸುಮಾರು 12 ಕೀಮಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಹಳಿಯಾಳ ಅರಣ್ಯ ಇಲಾಖೆಯ ಪಟ್ಟಣದಲ್ಲಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಆಗಮಿಸಿ ಅರಣ್ಯಾಧಿಕಾರಿ ಯತೀಶಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ನಾರನೊಳ್ಳಿ, ಗುಂಡೊಳ್ಳಿ, ಸಾಂಬ್ರಾಣ ಬೀಟಗಳಿಗೆ ಸಂಬಂಧಿಸಿದಂತೆ ಅರಣ್ಯದಲ್ಲಿ ಸಾಕಷ್ಟು ಮರಗಳನ್ನು ಕಡಿದು ಅರಣ್ಯ ಲೂಟಿ ಮಾಡಿದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಕಟ್ಟಿಗೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸಿಕ್ಕಿದ್ದರೂ ಸಹ ಈ ಸಾಂಬ್ರಾಣ ವಲಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಿವೈ ಆರ್‍ಎಫ್‍ಓ ಸಾಂಬ್ರಾಣ ವಲಯ ಹಾಗೂ ಅರಣ್ಯ ರಕ್ಷಕಿ ಶೋಭಾ ತೋಳೆ ಹಾಗೂ ಅರಣ್ಯ ವಿಕ್ಷಕ ಶಿವಾಜಿ ರಾವುತ ಇವರ ಮೇಲೆ ಕ್ರಮ ಕೈಗೊಳ್ಳದೆ ಸಾಂಬ್ರಾಣ ವಲಯ ಆರ್‍ಎಫ್ ಓ ದೀಪಕ ನಾಯ್ಕ ಹಾಗೂ ಎಸಿಎಫ್ ಸಂತೋಷ ಕೆಂಚಪ್ಪನವರ ಅವರು ತಮ್ಮ ಇಲಾಖೆಯ ಅಧಿಕಾರಿಗಳನ್ನು ಬಚಾವ ಮಾಡಲು ಪ್ರಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದು ಈ ಬಗ್ಗೆಯು ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಆಗ್ರಹಿಸಲಾಗಿದೆ.
ಅಲ್ಲದೇ ಈಗಾಗಲೇ ಇಲಾಖೆಯಿಂದ ಅಮಾನತ್ತಿಲ್ಲಿರುವ ಸಾಂಬ್ರಾಣ ಉಪ ವಲಯ ಅರಣ್ಯಾಧಿಕಾರಿ ಉಮೇಶ ಎನ್ನುವಾತ ಗುಂಡೊಳ್ಳಿ ಭಾಗಕ್ಕೆ ಬಂದಾಗಿನಿಂದ ನೀಲವಾಣ , ಕುಂಬಾರಕೊಪ್ಪ, ನಾರನೊಳ್ಳಿ ಭಾಗದಲ್ಲಿ ಸಾಕಷ್ಟು ಅರಣ್ಯ ಲೂಟಿ ನಡೆದಿದ್ದು ಇತ್ತೀಚೆಗೆ ಕುಂಬಾರಕೊಪ್ಪ ಶಾಲೆಯ ಎದುರಿಗೆ 11 ಸಾಗವಾಣ ಹಾಗೂ 17 ಅಶೋಕ ಗಿಡಗಳನ್ನು ಕಡಿದು ಸಾಗಾಣೆ ಮಾಡಿದ್ದು ಸಾಗವಾಣ ಕಟ್ಟಿಗೆ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ ಎಂದಿರುವ ಪ್ರತಿಭಟನಾಕಾರರು ಈ ಭಾಗದಲ್ಲಿ ಕೆಲವು ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಾಮಿಲಾಗಿ ಸಾಕಷ್ಟು ಅರಣ್ಯ ಲೂಟಿಯಲ್ಲಿ ತೊಡಗಿದ್ದಾರೆಂದು ಸುಮಾರು 4 ಪುಟಗಳಲ್ಲಿ ವಿವರವಾಗಿ ಆರೋಪಗಳನ್ನು ಮಾಡಿದ್ದಾರೆ.
ಅಲ್ಲದೇ ಫೆಬ್ರವರಿ ತಿಂಗಳ 15ನೇ ತಾರಿಖಿನ ಒಳಗೆ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸದೆ ಇದ್ದಲ್ಲಿ ಹಳಿಯಾಳದ ಅರಣ್ಯ ಇಲಾಖೆ ಕಚೇರಿಯಿಂದ ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ವರೆಗೆ ಅರೆಬೆತ್ತಲೆ ಪಾದಯಾತ್ರೆ ಆ ಬಳಿಕ ಬೆಂಗಳೂರಿನ ಅರಣ್ಯ ಭವನದ ಎದುರು ಅಹೋರಾತ್ರಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಸುಮನ ಗಿರಿಶ, ಕಲ್ಲಪ್ಪಾ ಕಾದ್ರೊಳ್ಳಿ, ರಾಜು ಮೇತ್ರಿ, ಬಸವರಾಜ ಕಾದ್ರೊಳ್ಳಿ, ರಾಮು ಟಿ ಮೇತ್ರಿ, ಗೋಪಾಲ ಮೇತ್ರಿ, ರಮೇಶ ಕೆಳಗಿನಮನಿ, ನಾಗಪ್ಪಾ ಇತರರು ವಹಿಸಿದ್ದರು.
dalita sangarsha samiti - sambrani are bettale padayatre

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: arebettale hike, by about 12 km, Chandrakant kadrolli, congruent beta, Dalit samiti, dalita sangarsha samiti - sambrani are bettale padayatre, demanding dismissal, Department of Forests, DY RFO conservation zone, Forest Department, Forest Inspector Shivaji Rawat, forest looting, Forest Reserve Shobha Thotta, forest tree looting, Forestry, Forests, gunnedo, Haliya Forest Many of the staff members of the Department of Forests, Protest against the Office of Conservation Forest Officers, semi-naked hike, Shamila The officer, splinter, wagons

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...