ಹಳಿಯಾಳ:- ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ) ಒಳಗೆ ನುಗ್ಗಿ ಉಗ್ರರ ಅಡಗು ತಾಣಗಳು ಹಾಗೂ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೆನೆ ನಡೆಸಿದ ದಾಳಿಯನ್ನು ಬೆಂಬಲಿಸಿ ಹಳಿಯಾಳ ಪಟ್ಟಣದಲ್ಲಿ ದೇಶಭಕ್ತರಿಂದ ಪಟಾಕಿ ಸಿಡಿಸಿ-ಸಿಹಿ ಹಂಚಿ ವಿಜಯೋತ್ಸವ- ಸಂಭ್ರಮಾಚರಣೆ ಮಾಡಲಾಯಿತು.
ವಿಶ್ವಹಿಂದೂ ಪರಿಷತ್, ಭಜರಂಗದಳ, ಆರ್.ಎಸ್.ಎಸ್, ಹಿಂದೂ ಜಾಗರಣ ವೇದಿಕೆ, ರಾಮಸೇನೆ- ಬಿಜೆಪಿ ಪಕ್ಷದವರು- ಸಾರ್ವಜನೀಕರು ಹೀಗೆ ಪಟ್ಟಣದ ಹಲವಾರು ಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ದೇಶದ ಪರ ಘೋಷಣೆಗಳನ್ನು ಮೊಳಗಿಸಿ ಪಟಾಕಿಗಳನ್ನು ಸಿಡಿಸಿ -ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಅನಿಲ ಮುತ್ನಾಳೆ, ವಿಲಾಸ ಯಡವಿ, ಪ್ರದೀಪ ಹಿರೆಕರ, ಉಮೇಶ ದೇಶಪಾಂಡೆ, ರಾಕೇಶ ಬಾಂದೋಡಕರ, ಉಲ್ಲಾಸ ಬಿಡಿಕರ, ಸಿದ್ದು ಶೇಟ್ಟಿ, ವಿಜಯ ಬೋಬಾಟಿ, ರಾಜು ಹಳ್ಳೂಕರ, ನಾಗರಾಜ, ಅರುಣ ಮಹೇಂದ್ರಕರ, ಅನಿಲ ಗಿರಿ, ಮೋಹನ ಮಾವಳಂಗಿ, ಪವನ ಮೊದಲಾದವರು ಇದ್ದರು.
Leave a Comment