ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ ಇದರ ಆಶ್ರಯದಲ್ಲಿ ಸಂಗೀತ ವಿದ್ಯಾರ್ಥಿಗಳಿಗೆ ಮೂರು ದಿನಗಳ ಸಂಗೀತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದನ್ನು ಪದ್ಮಶ್ರೀ ಸಂಗೀತ ಸಮ್ರಾಟ ಪಂ| ಅಜಯ ಚಕ್ರವರ್ತಿ ಕಲ್ಕತ್ತಾ ಅವರ ಶಿಷ್ಯರಾದ ವಿದ್ವಾನ್ ಗುರುದತ್ತ ಏ.ಕೆ.ಕಲ್ಕತ್ತಾ ನಡೆಸಿಕೊಡಲಿದ್ದಾರೆ. ಇದರಲ್ಲಿ ಅವರು ಧ್ವನಿಯ ಏರಿಳಿತ, ಸಾಹಿತ್ಯ ಭಾವ, ರಾಗಮಂಡನೆ, ಆಲಾಪ, ತಾನ್ಗಳು ಸುಗಮ ಸಂಗೀತ ಹಾಗೂ ಗಾಯನದಲ್ಲಿ ಎದುರಾಗುವ ಸಮಸ್ಯೆಗಳು, ತಾಳ-ಲಯಗಳ ಕುರಿತು
ಕಾರ್ಯಾಗಾರ ನಡೆಸಿ ಕೊಡುವುದರ ಜೊತೆಗೆ ಪ್ರಾತ್ಯಕ್ಷಿಕೆಯನ್ನೂ ಮಾಡಿ ತೋರಿಸಲಿದ್ದಾರೆ. ಈ ಶಿಬಿರವು ಉಚಿತವಾಗಿದ್ದು ಸಂಗೀತ ವಿದ್ಯಾರ್ಥಿಗಳು ಆಸಕ್ತರು, ಸಂಗೀತ ಅಭಿಮಾನಿಗಳು ಪಾಲ್ಗೊಳ್ಳಬಹುದು. ಇದು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಏ11, 12, 13 ರಂದು ಬೆಳಿಗ್ಗೆ 9.30ರಿಂದ 1.00 ಘಂಟೆಯವರೆಗೆ ನಡೆಯಲಿದ್ದು ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ‘ರಾಗಶ್ರೀ’ ಕಾರ್ಯದರ್ಶಿ ವಿದ್ವಾನ್ ಎನ್.ಜಿ. ಹೆಗಡೆ, ಕಪ್ಪೆಕೇರಿ ಹಾಗೂ ರಾಗಶ್ರೀ ಅಧ್ಯಕ್ಷ ವಿದ್ವಾನ್ ಶಿವಾನಂದ ಭಟ್ಟ, ಹಡಿನಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8762329779, 9482559998 ಸಂಪರ್ಕಿಸಿರಿ.
Leave a Comment