ಹೊನ್ನಾವರ: ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮvುÀ್ತ ಸಾಂಸ್ಕøತಿಕ ಸಂಸ್ಥೆ, ಹಡಿನಬಾಳ ಇದರ ರಾಷ್ಟ್ರೀಯ ಸಂಗೀತೋತ್ಸವ ಪಂ| ಜಿ.ಆರ್.ಭಟ್ಟ, ಬಾಳೆಗz್ದÉ ಇವರ ಸಂಸ್ಮರಣೆ ಹಾಗೂ ಇವರದೇ ಹೆಸರಲ್ಲಿ ನೀಡುವ ‘ರಾಗಶ್ರೀ ಪ್ರಶಸ್ತಿ’ ಪ್ರದಾನ ಸಮಾರಂ¨Àsವು ಶ್ರೀ ವಿಷ್ಣುಮೂರ್ತಿ ದೇವಾಲಯದ ಆವಾರದಲ್ಲಿ ಏ.14ರ ಮಧ್ಯಾಹ್ನ ಮೂರು ಘಂಟೆಯಿಂದ ವಿದ್ಯಾರ್ಥಿಗಳ ಸಂಗೀತದೊಂದಿಗೆ ಆರಂಭವಾಗುವುದು.
ಸಂಜೆ 6.00 ಗಂಟೆಗೆ ಸರಿಯಾಗಿ 16ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು ಇದರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ವೇ| ಮೂ| ಶ್ರೀ ಶಿವರಾಮ ಭಟ್ಟ ಆಲೇಖ, ಕಲಾ ಪ್ರಶಸ್ತಿ ಪುರಸ್ಕøತರಾದ ಪೊ| ಎಸ್. ಶಂಭು ಭಟ್ಟ, ಕಡತೋಕಾ, ಖ್ಯಾತ ಅಂತರಾಷ್ಟ್ರೀಯ ಕಲಾವಿದರಾದ ಪಂ| ಪರಮೇಶ್ವರ ಹೆಗಡೆ, ಬೆಂಗಳೂರು, ಡಾ|| ಅಶೋಕ ಹುಗ್ಗಣ್ಣವರ, ಖ್ಯಾತ ಅಂತರಾಷ್ಟ್ರೀಯ ಸಂಗೀತ ಕಲಾವಿದರು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು ಬೆಂಗಳೂರು, ಎಸ್.ಡಿ.ಎಂ.ಕಾಲೇಜ್ ಹೊನ್ನಾವರ. ಶ್ರೀ ಮಹಾದೇವ ಸ್ವಾಮಿ ನೀಲಗೋಡ, ಶ್ರೀ ಶಿವಾನಂದ ಹೆಗಡೆ, ಕೆರೆಮೆನೆ ಕಲಾವಿದರು, ಸದಸ್ಯರು, ಕೇಂದ್ರ ಸಂಗೀತ ನಾಟಕ ಅಕಾಡೆಮಿ, ದೆಹಲಿ ಇವರು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಖ್ಯಾತ ಅಭಂಗ ಹಾಗೂ ಭಜನಾ ಕಲಾವಿದರಾದ ಶ್ರೀ ವಸಂತ ಭಟ್ಟ ಗುಂಡಿಬೈಲ್ ಇವರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಪದ್ಮಶ್ರೀ ಪಂ ಅಜಯ್ ಚಕ್ರವರ್ತಿ ಇವರ ಶಿಷ್ಯರಾದ ಗುರುದತ್ತ ಏ.ಕೆ ಕಲ್ಕತ್ತಾಇವರನ್ನು ಪುರಸ್ಕರಿಸಲಾಗುವುದು. ಪಂ| ಜಿ. ಆರ್. ಭಟ್ಟರ ಹೆಸರಿನ ರಾಗಶ್ರೀ ಪ್ರಶಸ್ತಿಯನ್ನು ಅಂತರಾಷ್ಟ್ರೀಯ ಕಲಾವಿದರಾದ ಪದ್ಮಶ್ರೀ ವೆಂಕಟೇಶ ಕುಮಾರ ಧಾರವಾಡ ಇವರಿಗೆ ನೀಡಿ ಸನ್ಮಾನಿಸಲಾಗುವುದು.
ನಂತರ 6.45ಕ್ಕೆ ಸರಿಯಾಗಿ ಪಂ| ವೆಂಕಟೇಶ ಕುಮಾರ ಧಾರವಾಡ ಅವರ ಗಾಯನ ನಡೆಯಲಿದ್ದು, ಇವರಿಗೆ ಪ್ರೊ| ಗೋಪಾಲ ಕೃಷ್ಣ ಹೆಗಡೆ ಕಲ್ಭಾಗ, ಖ್ಯಾತ ಅಂತರಾಷ್ಟ್ರೀಯ ಕಲಾವಿದರು. ಎಸ್.ಡಿ.ಎಂ.ಕಾಲೇಜ್ ಹೊನ್ನಾವರ ತಬಲಾ ಸಾಥನ್ನು ಹಾಗೂ ಡಾ| ರವೀಂದ್ರ ಕಾಟೋಟಿ ಖ್ಯಾತ ಅಂತರಾಷ್ಟ್ರೀಯ ಹಾರ್ಮೋನಿಯಂ ವಾದಕರು, ಬೆಂಗಳೂರು ಇವರು ಸಂವಾದಿನಿ ಸಾಥನ್ನು ನೀಡುವರು. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹೃದಯಿ ಸಂಗೀತಾಭಿಮಾನಿಗಳು ಬರುವಂತೆ ರಾಗಶ್ರೀ ಕಾರ್ಯದರ್ಶಿ ವಿದ್ವಾನ ಎನ್.ಜಿ. ಹೆಗಡೆ, ಕಪ್ಪೆಕೇರಿ ಹಾಗೂ ಅದ್ಯsಕ್ಷ ವಿದ್ವಾನ ಶಿವಾನಂದ ಭಟ್ಟ, ಹಡಿನಬಾಳ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
Leave a Comment