ಹೊನ್ನಾವರ; ಕಾಂಗ್ರೇಸ್ ಜೆಡಿಎಸ್ ಮೈತ್ರಿ ಪಕ್ಷದ ಪ್ರಚಾರಸಭೆ ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ನಡೆಯಿತು. ಜಿಲ್ಲೆಯ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿದಂತೆ ಮೀನುಗಾರರ ಸಾಲ ಮನ್ನಕ್ಕಾಗಿ ಸಂಸತ್ತನಲ್ಲಿ ಒಮ್ಮೆಯು ದ್ವನಿ ಎತ್ತಲಿಲ್ಲ. ಕ್ಷೇತ್ರದಲ್ಲಿ ಕೈಗಾರಿಕೆ, ಬಂದರು, ಪ್ರವಾಸೋದ್ಯಮ ಅಭಿವ್ರದ್ದಿಗಾಗಿ ಒಮ್ಮೆಯು ಪಾರ್ಲಿಮೆಂಟ್ನಲ್ಲಿ ಮಾತನಾಡಿಲ್ಲ. ಹಿಂದೂ ಯುವಕರಿಗಾಗಿ ಉದ್ಯೋಗ ಸೃಷ್ಠಿಗÉ ಕಾರ್ಯಕ್ರಮ ಕೈಗೊಳ್ಳಲಿಲ್ಲ. ಮುಸ್ಲಿಂ ಯುವಕರು ಉದ್ಯೋಗಕ್ಕಾಗಿ ಮುಸ್ಲಿಂ ದೆಶಕ್ಕೆ ಹೋಗುತ್ತಾರೆ. ಕ್ರೈಸ್ತರು ಯುವಕರು ಕ್ರೈಸ್ತ ರಾಷ್ಟ್ರಗಳಿಗೆ ಹೋಗುತ್ತಾರೆ. ಆದರೆ ಹಿಂದೂ ಯುವಕರಿಗೆ ಭಾರತ-ನೇಪಾಳ ಮಾತ್ರ ಸೀಮಿತವಾಗಿದೆ. ಯುವಕರಿಗೆ ಶಕ್ತಿ ನೀಡಬೇಕಾದ ಕೆಲಸ ಮಾಡಿಲ್ಲ. 25 ವರ್ಷಗಳಲ್ಲಿ ಕ್ಷೇತ್ರ ಅಭಿವ್ರದ್ದಿ ಕಂಡಿಲ್ಲ. ಕಾಂಗ್ರೆಸ್ 60ವರ್ಷ ಮಾಡಿದ್ದ ಅಭಿವ್ರದ್ದಿ ಮತ್ತು ಬಿಜೆಪಿ 5 ವರ್ಷಗಳ ಅಭಿವ್ರದ್ದಿ ನೋಡಿದರೆ ತಿಳಿಯುತ್ತದೆ. ಮೋದಿಯವರು 5 ವರ್ಷದಲ್ಲಿ ಬಂಗಾರದ ರಸ್ತೆ ಮಾಡಿದ್ದಾರಾ? ಬ್ರಹತ್ ಕಾಂಪ್ಲೆಕ್ಸ್ ಕಟ್ಟಿದ್ದಾರಾ? ಮೋದಿ ಫೋಟೋ ತೋರಿಸಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾನೆ ಅನಂತ ಕುಮಾರ್ ಹೆಗಡೆ. ಅವನಿಗೆ ನಾಲಿಗೆಯೆ ಆಸ್ತಿ. ಸಂಸ್ಕಾರ ಸಂಸ್ಕ್ರತಿಯ ಬಗ್ಗೆ ಪಾಠ ಮಾಡುವ ಅವಶ್ಯಕತೆ ನಮಗೆ ಬೇಕಾಗಿಲ್ಲ ಹಿಂದೂಳಿದ ವರ್ಗದವರೆ ಇತನಿಗೆ ಪಾಠ ಕಲಿಸುವ ಪರಿಸ್ಥಿತಿ ಬಂದೊದಗಿದೆ. ಇತ ಹಿಂದೂ ಯುವಕರಿಗಾಗಿ ಎನನ್ನು ಮಾಡಿಲ್ಲ. ಕೇಸರಿ ಬಾವುಟ ನಾಮ ನೀಡಿ ನಾಮ ಹಾಕಿದ್ದು ಬಿಟ್ಟರೆ ಒರ್ವ ಹಿಂದೂ ಯುವಕನಿಗು ಉದ್ಯೋಗ ನೀಡಿಲ್ಲ ಎಂದು ಕೆಂಡ ಕಾರಿದರು. ಈ ಬಾರಿ ಬದಲಾವಣೆಗಾಗಿ, ಜಿಲ್ಲೆಗೆ ನ್ಯಾಯ ಒದಗಿಸುವ ಸಲುವಾಗಿ ಈ ಬಾರಿ ನನಗೆ ಅವಕಾಶÀ ನೀಡಿ ಎಂದರು. ಕಳೆದ 25 ವರ್ಷ ಭಾಷಣದಲ್ಲೆ ಮರಳು ಮಾಡಿದ್ದಾರೆ. ಅಭಿವ್ರದ್ದಿ ಶೂನ್ಯ. ಇವರು ಕೆಂದ್ರ ಸಚಿವರಾಗಿದ್ದರು ಕೂಡಾ ಜಿಲ್ಲೆಯ ಅಭಿವ್ರದ್ದಿ ಕುರಿತು ಗಮನ ಹರಿಸಿಲ್ಲ. ಜಾತಿ ಧರ್ಮಗಳ ನಡುವೆ ಬೆಂಕಿಯಿಟ್ಟು ಬೆಳೆಬೆಯಿಸಿಕೊಳ್ಳುತ್ತಿದ್ದಾನೆ. ಜೈನ ಧರ್ಮದ ಕುರಿತು ಕೆಟ್ಟದಾಗಿ ಮಾತನಾಡಿದ್ದಾರೆ. ಧರ್ಮ ರಕ್ಷಣೆ ಎಂದು ಮಾತನಾಡುವ ಇವರು ಹಿಂಧೂಗಳಿಗು ಎನು ಮಾಡಿಲ್ಲ ಎಂದು ಕಾಂಗ್ರೆಸ್ -ಜೆ.ಡಿ.ಎಸ್ ಮೈತ್ರಿ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿಕಾರಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೋನರೆಡ್ಡಿ, ಮಾಜಿ ಶಾಸಕ ಮಂಕಾಳ ವೈದ್ಯ,ತಾಲೂಕ ಅಧ್ಯಕ್ಷ ಸುಬ್ರಾಯ ನಾಯ್ಕ, ಗೋವಿಂದ ಗೌಡ, ಜಗದೀಪ ತೇಂಗೇರಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Leave a Comment