ಹಳಿಯಾಳ:- ದಿ.23ಕ್ಕೆ ಲೋಕಸಭೆ ಚುನಾವಣೆಯ ಮತದಾನ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರದ ಕೊನೆಯ ದಿನವಾದ ಭಾನುವಾರ ಪಟ್ಟಣದಲ್ಲಿ ಬಿಜೆಪಿ ಪಕ್ಷದವರು ಚುನಾವಣಾ ಪ್ರಚಾರ ಕಾರ್ಯ ಕೈಗೊಂಡರು.
ಪ್ರಧಾನಿ ಮೊದಿಯವರ ಪೊಸ್ಟರ್, ಬಿಜೆಪಿ ಪಕ್ಷದ ಧ್ವಜ ಹಿಡಿದು ಪಟ್ಟಣದಲ್ಲೆಡೆ ಪ್ರಚಾರ ನಡೆಸಿದ ಬಿಜೆಪಿಗರು ಮೈಭಿ ಚೌಕಿದಾರ್, ಚೌಕಿದಾರ ಶೇರ ಹೈ, ಹರ ಹರ ಮೋದಿ, ಅಬ್ ಕಿ ಬಾರ್ ಫಿರಸೇ ಮೋದಿ ಸರ್ಕಾರ, ಕೇಂದ್ರಕ್ಕೆ ಮೋದಿ ಜಿಲ್ಲೆಗೆ ಅನಂತಕುಮಾರ ಹೆಗಡೆ ಹೀಗೆ ಅನೇಕ ಘೋಷಣೆಗಳೊಂದಿಗೆ ವಿಶಿಷ್ಠವಾಗಿ ಪ್ರಚಾರ ನಡೆಸಿದ ಬಿಜೆಪಿಗರು ಕೆನರಾ ಲೋಕಸಭಾ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ಮತಯಾಚನೆ ಮಾಡಿದರು.
ಬಿಜೆಪಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ ಮುತ್ನಾಳ್, ಹಳಿಯಾಳ ಉಪಾಧ್ಯಕ್ಷ ವಾಸು ಪೂಜಾರಿ, ಮುಖಂಡರಾದ ಅಪ್ಪು ಚರಂತಿಮಠ, ಸಂತೋಷ ಘಟಕಾಂಬಳೆ, ಸಂತಾನ ಸಾವಂತ, ಉದಯ ಹೂಲಿ, ಶಾಂತಾ ಹಿರೇಕರ, ಸಂಗೀತಾ ಜಾಧವ, ರೂಪಾ ಅನಿಲ ಗಿರಿ, ಯಲ್ಲಪ್ಪಾ ಹೊನ್ನೊಜಿ, ಪ್ರದೀಪ ಹಿರೆಕರ, ಉಲ್ಲಾಸ ಬಿಡಿಕರ, ವಿಲಾಸ ಯಡವಿ, ತುಕಾರಾಮ ಪಟ್ಟೇಕರ, ನಾಗರಾಜ, ಗೋಪಿ ಮೊದಲಾದವರು ಪಾಲ್ಗೋಂಡಿದ್ದರು.
ಐತಿಹಾಸಿಕ ಗೆಲುವು ದಾಖಲಿಸಲಿದ್ದಾರೆ :- ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಾದ್ಯಂತ ಮತಬೆಟೆಯಲ್ಲಿ ತೊಡಗಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ 5 ವರ್ಷದ ಅವಧಿಯಲ್ಲಿ ಜಗತ್ತೇ ಮೆಚ್ಚುವಂತೆ ಮೊದಿಜಿಯವರು ಆಡಳಿತ ನಡೆಸಿದ್ದಾರೆ. ಭ್ರಷ್ಟಾಚಾರ ಹತೋಟಿಗೆ ಬಂದಿದೆ, ಬಡವರಿಗೆ, ರೈತರಿಗೆ, ಜನಸಾಮಾನ್ಯರಿಗೆ ಸರ್ಕಾರದ ಯೋಜನೆಗಳ ಲಾಭ ನೇರವಾಗಿ ತಲುಪುತ್ತಿದೆ.
ಶತ್ರುರಾಷ್ಟ್ರಗಳು ಭಾರತವನ್ನು ಕಣ್ಣೆತ್ತಿ ನೋಡಲು ನಡುಗುವಂತಹ ಪರಿಸ್ಥಿತಿಯನ್ನು ಜಾಗತಿಕ ಮಟ್ಟದಲ್ಲಿ ಮೋದಿಜಿಯವರು ಮಾಡಿದ್ದಾರೆ. ಸ್ವಾರ್ಥ ಹಾಗೂ ಕುಟುಂಬ ರಾಜಕಾರಣ ಮಾಡದ ಮೋದಿಜಿಯವರು ದೇಶಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿದ್ದು ಈ ಬಾರಿ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿಜಿ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದ ಹೆಗಡೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಪ್ರಾಮಾಣಿಕ ಆಡಳಿತಗಾರರಾಗಿರುವ ಅನಂತಕುಮಾರ ಹೆಗಡೆ 6ನೇ ಬಾರಿಗೆ ಐತಿಹಾಸಿಕ ಗೆಲುವು ದಾಖಲಿಸಲಿದ್ದಾರೆ ಎಂದರು.
Leave a Comment