ಹೊನ್ನಾವರ: ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ಮ್ರತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ.
ಒಕಾದಿಂದ ಎರ್ನಾಕುಲಂ ಹೋಗಲು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ರೈಲು ಚಲಿಸುತ್ತಿದ್ದ ವೇಳೆ ರೈಲಿನ ಮುಂಬಾಗಕ್ಕೆ ಸಿಲುಕಿದ ಪರಿಣಾಮ ತಲೆಯ ಹಿಂಬದಿಗೆ ರೈಲಿನ ಕಬ್ಬಣದ ರಾಡ್ ತಗುಲಿ ಬಾಯಿಂದ ಹೊರ ಬಂದಿದೆ. ಎರಡು ಕಾಲು ತುಂಡಾಗಿ ತೀವೃ ರಕ್ತಸ್ರಾವವಾಗಿದೆ. ಮೃತದೇಹ ರೈಲಿನ ಮುಂಬಾಗಕ್ಕೆ ಸಿಲುಕಿಕೊಂಡಿದ್ದು ಕರ್ಕಿ ರೈಲ್ವೆ ನಿಲ್ದಾಣದ ಸಮೀಪಿಸುವ ವೇಳೆ ಸಾರ್ವಜನಿಕರಿಗೆ ವಿಷಯ ತಿಳಿದಿದೆ.ಮೃತಪಟ್ಟ ವಿದ್ಯಾರ್ಥಿಯನ್ನು ತಾಲೂಕಿನ ಹಳದಿಪುರದ ಕುದಬೈಲ್ ನಿವಾಸಿ 16 ವರ್ಷ ಪ್ರಾಯದ ವಿಜೇತ ರಾಮದಾಸ ನಾಯ್ಕ ಎಂದು ಗುರುತಿಸಲಾಗಿದೆ.ಮೃತನಾದ ವಿಜೇತ್ ಇತನು ಕರ್ಕಿಯ ಗುರುಕುಲ ಫ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಎಸ್.ಎಸ್.ಎಲ್.ಸಿ ಫಲಿತಾಂಶ ಮಂಗಳವಾರ ಪ್ರಕಟವಾಗುವ ಹಿನ್ನಲೆಯಲ್ಲಿ ಪರೀಕ್ಷಾ ಫಲಿತಾಂಶಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೊನ್ನಾವರ ಪೊಲೀಸರು ಸ್ಥಳಕ್ಕೆ ಭೇsÉಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment