ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯ ಸುಬ್ರಾಯ ಗೌಡ ಎನ್ನುವವರಿಗೆ ಸೇರಿದ ಕೊಟ್ಟಿಗಿಗೆ ಗುರುವಾರ ಸಾಯಂಕಾಲ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಕೊಟ್ಟಿಗೆಯ ಮೇಲ್ಚಾವಣೆ ಹಾಗೂ ಅಲ್ಲಿ ಮಳೆಗಾಲಕ್ಕಾಗಿ ಸಂಗ್ರಹಿಸಿಟ್ಟ ಒಣಹುಲ್ಲು ಸಂಪೂರ್ಣ ಭಸ್ಮವಾಗಿದೆ. ಸರಿಸುಮಾರು 40ಸಾವಿರಕ್ಕೂ ಅಧಿಕ ವೆಚ್ಚದ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಿಯರ ಸಹಾಯದಿಂದ ಕೊಟ್ಟಿಗೆಯಲ್ಲಿದ್ದ 1 ಎಮ್ಮೆ ಹಾಗೂ 5 ಆಕಳುಗಳನ್ನು ರಕ್ಷಿಸಲಾಗಿದೆ, ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಇಲಾಖೆಯವರು ಸಮೀಪದ ಮನೆಗಳಿಗೆ ಬೆಂಕಿ ತಗುದಂತೆ ನಂದಿಸುವಲ್ಲಿ ಯಶ್ವಸಿಯಾದರು. ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ, ತಾಲೂಕ ಪಂಚಾಯತ ಅಧಿಕಾರಿಗಳು, ಗ್ರಾಮ ಪಂಚಾಯತ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ಒದಗಿಸುವ ಭರವಸೆ ನೀಡಿದರು.
Leave a Comment