ಹೊನ್ನಾವರದಲ್ಲಿ ವಿಜೃಂಬಣೆಯಿಂದ ನೇರವೇರಿತು ಶಂಕರಿ ಜಯಂತಿ ಕಾರ್ಯಕ್ರಮ .ಎರಡು ಮಠದ ಸ್ವಾಮಿಜಿಯಿಂದ ಶಂಕರ ಸ್ಮರಣೆ ಕಾರ್ಯಕ್ರಮದ ಕುರಿತು ಹರ್ಷ.
ಹೊನ್ನಾವರ ಪಟ್ಟಣದ ಕೆಳಗಿನಪಾಳ್ಯ ಕೊಂಕಣಖಾರ್ವಿ ಸಮಾಜ ಭವನದಲ್ಲಿ ಶಂಕರಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುತೈದುಯರು ಪೂರ್ಣಕುಂಭದೊಂದಿಗೆ ಶಂಕರಮೂರ್ತಿ ಹೊತ್ತಿದ್ದ ಪಲಕ್ಕಿ ಹಾಗೂ ಸ್ವಾಮಿಜಿಯವರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಕುರಿತು ಆರ್ಶಿವಚನ ನೀಡಿದ ದೈವಜ್ನ ಮಠ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಸ್ವಾಮಿಜಿ ಮಾತನಾಡಿ ಭಕ್ತಿ ಮಾರ್ಗ ಎಲ್ಲದಕ್ಕಿಂತ ಶೇಷ್ಠವಾದದು .ಆದರೆ ಇತ್ತಿಚಿನ ದಿನದಲ್ಲಿ ಮೊಬೈಲ್ ಇಂಟರ್ನೆಟ್ ವ್ಯಾಮೋಹದಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುದಾಗಲಿ ಪ್ರವಚನದಂತಹ ಕಾರ್ಯಕ್ರಮ ವಿಕ್ಷಣಗೆ ಸಮಯವಿಲ್ಲ ಎನ್ನುವ ಮಾತು ಎಲ್ಲಡೆಯಿಂದ ಕೇಳಿ ಬರುತ್ತಿದೆ. ಆದರೆ ಇರುವ ಸಮಯವನ್ನು ಧಾರ್ಮಿಕತೆಗಾಗಿ ಮೀಸಲಾಗಿಟ್ಟರೆ ಮಾನಸಿಕ ನೆಮ್ಮದಿ ಸಾಧ್ಯ. ಶಂಕಾರಾರ್ಚಯರು ತಮ್ಮ ತತ್ವವನ್ನು ಜಗತ್ತಿಗೆ ಸಾರಿದರು. ಅದು ಇಂದಿಗೂ ಆದರ್ಶಪ್ರಾಯ ಇಂದು ನಾವು ಏನನ್ನು ಅನುಭವಿಸುತ್ತೇವೆಯೋ ಅದು ಎಲ್ಲವು ಶಂಕರಾರ್ಚರ್ಯರ ನೀಡಿದ ಕೋಡುಗೆ ಅವರ ತತ್ವವನ್ನು ಪಾಲಿಸೋಣ ಎಂದು ಆರ್ಶಿವಚನ ನೀಡಿದರು.
ಹಳದಿಪುರದ ವೈಶ್ಯ ಸಮಾಜದ ಶ್ರೀ ವಾಮನಾಶ್ರಮ ಸ್ವಾಮಿಜಿ ಮಾತನಾಡಿ ಕೊಂಕಣ ಖಾರ್ವಿ ಸಮಾಜ ತಾಲೂಕಿನ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಇತರರಿಗೆ ಮಾದರಿ. ಒಂದು ಸಮಾಜ ಒಗ್ಗಟ್ಟಾಗಿದ್ದರೆ ಯಾವ ರೀತಿ ಸಮಾಜಮುಖಿ ಕಾರ್ಯಕ್ರಮ ಮಾಡಬಹುದು ಎನ್ನುವುದಕ್ಕೆ ಸಮಾಜ ಕೈಗೊಂಡ ವಿವಿಧ ಕಾರ್ಯಕ್ರಮಗಳು ಸಾಕ್ಷಿ. ಶಂಕರರು ಅಂದು ನೀಡಿದ ಮಾರ್ಗದರ್ಶನ ಇಂದಿಗೂ ಉಪಯುಕ್ತವಾದ ಕೊಡುಗೆಯನ್ನು ನೀಡುತ್ತದೆ. ಕೇವಲ ಶಂಕರ ಜಯಂತಿ ಆಚರಣೆ ಮಾಡಿದರಷ್ಟೆ ಸಾಲದು ಅವರ ಆದರ್ಶವನ್ನು ಪಾಲಿಸುವ ಮೂಲಕ ಅವರಿಗೆ ಗೌರವಿಸುವ ಕೆಲಸ ಮಾಡಬೇಕಿದೆ ಎಂದು ಆರ್ಶಿವಚನ ನಡೆಸಿದರು.
ಕೊಂಕಣ ಖಾರ್ವಿ ಸಮಾಜದ ವತಿಯಿಂದ ಸ್ವಾಮಿಜಿಯವರ ಪಾದಪೂಜೆ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷ ಶಿವರಾಜ ಮೇಸ್ತ, ಸಮಾಜದ ಮುಖಂಡರಾದ ಯೋಗೀಶ ಮೇಸ್ತ, ಸುರೇಶ ಮೇಸ್ತ, ಪತಂಜಲಿ ವೀಣಾಕರ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಎಂ.ಜಿ.ನಾಯ್ಕ, ಸ್ವಾಗತಿಸಿ ಶಿವರಾಜ ಮೇಸ್ತ ವಂದಿಸಿದರು. ಎಂ.ಡಿ.ನಾಯ್ಕ, ಪ್ರಾಸ್ತವಿಕ ಮಾತನಾಡಿ ದಿನೇಶ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
Leave a Comment