ಹೊನ್ನಾವರ: ಬಿರು ಬಿಸಿಲಿನಿಂದಾಗಿ ದೇಶಾದ್ಯಂತ ಬರಗಾಲ ಪರಿಸ್ಥಿತಿ ಉಂಟಾಗಿರುವುದರಿಂದ ವರುಣ ದೇವನ ಆಗಮನಕ್ಕಾಗಿ ಹಾಗೂ ದೇಶದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು ಸಮಸ್ತ ಲೋಕ ಕಲ್ಯಾಣಾರ್ಥವಾಗಿ ಪಟ್ಟಣದ ಶ್ರೀರಾಮ ಮಂದಿರದಲ್ಲಿ ಜಿ.ಎಸ್. ಬಿ ಸಮಾಜ ಬಾಂಧವರಿಂದ ವಿಶೇಷ ಪೂಜೆ ನಡೆಯಿತು.
ಸಂಜೆ 5 ಗಂಟೆಯಿಂದ ಶ್ರೀ ವಿಷ್ಣುಸಹಸ್ರನಾಮದಿಂದ ದೇವರಿಗೆ ಅಷ್ಟೋತ್ತರ ಶತಾರತಿ, ವಿಶೇಷ ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ನೂರಾರು ಭಕ್ತರು ಕಾರ್ಯಕ್ರಮದ ಪಾಲ್ಗೊಂಡರು. ಉಮೇಶ ಶ್ರೀನಿವಾಸ ಕಾಮತ್, ರಘು ಪೈ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Leave a Comment