ಒಂದು ಬಂಗಡೆ ಮೀನು 4 ರಿಂದ 5 ಲಕ್ಷ ಮೊಟ್ಟೆ ಇಡುತ್ತದೆ ಆದರೆ ಮೀನುಗಾರರು ಗ್ರಾಹಕರ ಬೇಡಿಕೆ ಹಾಗೂ ಹಣದಾಸೆಗೆ ಅವಧಿಗೆ ಮುಂಚೆ ಅದನ್ನು ಮಾರುಕಟ್ಟೆಗೆ ತರುತ್ತಾರೆ ಆ ಕೆಲಸವನ್ನು ನಮ್ಮ ಮೀನುಗಾರರು ಮಾಡಬಾರದು ಎಂದು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಹೊನ್ನಾವರ ತಾಲೂಕ ಪಂಚಾಯತ ಸಭಾಭವನದಲ್ಲಿ ಮೀನುಗಾರ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ಬಲೆ ವಿತರಣೆ ನೇರವೇರಸಿದ ಬಳಿಕ ಶಾಸಕರು ಮಾತನಾಡಿ ಮೀನಿನ ಸಂತತಿ ಉಳಿಸಲು ಸರ್ಕಾರ ಹಲವು ಕಾರ್ಯಕ್ರಮ ಕೈಗೆತ್ತಿಕೊಳ್ಳುತ್ತಿದ್ದು ಅದರಲ್ಲೂ ಮೀನುಗಾರರಿಗೆ ನೆರವಾಗಲು ಬಲೆ ವಿತರಣೆ ಮಾಡುತ್ತಿದೆ. ಬಲೆಯ ಗುಣಮಟ್ಟ ಒಳ್ಳೆಯದಿದ್ದು ತಪ್ಪು ಗ್ರಹಿಕೆ ಬೇಡ. ಸಂತತಿ ಹೆಚ್ಚಳ ಹಾಗೂ ಸುರಕ್ಷತೆಗೆ ಸರ್ಕಾರ ಹಾಗೂ ಅಧಿಕಾರಿಗಳಿಗಿಂತ ಹೆಚ್ಚಿನ ಮಾಹಿತಿ ಮೀನುಗಾರರ ಬಳಿ ಇದೆ. ಅದನ್ನು ಪಾಲಿಸುವ ಕೆಲಸ ಮಾಡಬೇಕು. 2 ತಿಂಗಳ ಕಾಲ ಮೀನಿನ ಸಂತಾನೊತ್ಪತ್ತಿಗಾಗಿ ಆಳ ಸಮುದ್ರದ ಮೀನುಗಾರಿಕೆ ನೀಷೇದ ಹೆರಿದ್ದು ಆ ನಿಯಮವನ್ನು ಪ್ರತಿಯೊಬ್ಬ ಮೀನುಗಾರರು ಪಾಲಿಸಬೇಕು. ವರ್ಷದಿಂದ ವರ್ಷಕ್ಕೆ ಮೀನಿನ ಬೇಡಿಕೆ ಹೆಚ್ಚುತ್ತಿದೆ ಆದರೆ ಮೀನು ಕಡಿಮೆ ಸಿಗುತ್ತಿದೆ. ಇದರಿಂದ ಮೀನುಗಾರರು ಜೀವನ ನಡೆಸಲು ಕಷ್ಟಸಾಧ್ಯವಾಗುತ್ತಿದೆ ಆದರೆ ಮಾನಸಿಕವಾಗಿ ಸದೃಡವಾಗಿ ಸರ್ಕಾರ ನೀಡುವ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಅಲ್ಲದೇ ಮೀನುಗಾರಿಕಾ ಇಲಾಖೆಯಿಂದ ತುಳಸಿನಗರ, ಉದ್ಯಮನಗರ ರಸ್ತೆಯನ್ನು 1 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ನಂತರ ಮಂಜೂರಾದ 45 ಬಲೆಗಳಲ್ಲಿ ಕುಮುಟಾ ಕ್ಷೇತ್ರವ್ಯಾಪ್ತಿಯ 15 ಮೀನುಗಾರಿಗೆ ಬಲೆ ವಿತರಣೆ ನಡೆಸಿದರು. ಇದೇ ಸಂದರ್ಭದಲ್ಲಿ ರಿರ್ಚಡ್ ಗೊನ್ಸಾಲಿಸ್ ಎನ್ನುವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 62.300 ಮೊತ್ತದ ಚೆಕ್ ವಿತರಣೆ ನೇರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಕಾಂತ ಮೋಗೇರ, ಸುರೇಶ ಶೆಟ್ಟಿ, ಟಿ.ಎಸ್.ಹೆಗಡೆ, ಪಟ್ಟಣ ಪಂಚಾಯತ ಸದಸ್ಯರಾದ ಶಿವರಾಜ ಮೇಸ್ತ, ನಾಗರಾಜ ಭಟ್, ಸವಿತಾ ಮೇಸ್ತ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸುಬ್ರಹ್ಮಣ್ಯ ಶಾಸ್ತ್ರಿ ಮಿನುಗಾರಿಕಾ ಇಲಾಖೆಯ ಅಧಿಕಾರಿಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Leave a Comment