ಹೊನ್ನಾವರ : ಹಸಿರು ಅಭಿಯಾನ ಕಾರ್ಯಕ್ರಮವನ್ನು ಶ್ರೀ ರಾಮಕ್ಷತ್ರೀಯ ಯುವಕ ಸಂಘ (ರಿ) ಹೊನ್ನಾವರ ಹಾಗೂ ಅರಣ್ಯ ಇಲಾಖೆ ಇವರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮಕ್ಕೆ ಹೊನ್ನಾವರ ತಹಸೀಲ್ದಾರ್ರಾದ ವಿ.ಆರ್.ಗೌಡ ಬಂದರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ನಾಗರತ್ನ ಉಲ್ಲಾಸ ಕೊನೇರಿ, ತಾರಾ ನಾಯ್ಕ, ಮೇಧಾ ನಾಯ್ಕ, ಅಜಾದ ಅಣ್ಣೀಗೆರಿ ಹಾಗೂ ರಾಮಕ್ಷತ್ರೀಯ ಯುವಕ ಸಂಘದ ಅಧ್ಯಕ್ಷ ಉಲ್ಲಾಸ ಗೋವಿಂದ ನಾಯ್ಕ, ಸದಸ್ಯರಾದ ಶ್ರೀಕಾಂತ ನಾಯ್ಕ, ಉಲ್ಲಾಸ ಕೊನೇರಿ, ಸುಧಾಕರ ನಾಯ್ಕ, ಮತ್ತು ಅರಣ್ಯ ಅಧಿಕಾರಿ ಸಿಬ್ಬಂದಿಗಳು, ಕರಾವಳಿ ಕಾವಲುಪಡೆ ಸಿಬ್ಬಂದಿಗಳು ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.
Leave a Comment