ಹೊನ್ನಾವರ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕಳೆದ ಹಲವು ತಿಂಗಳುಳಿಂದ ಪ್ರಭಾರಿ ಆಗಿ ಕತ್ಯರ್ವ ನಿರ್ವಹಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ನೇಮಕಾತಿ ಅಂತಿಮಗೊಳ್ಳುವ ಮೂಲಕ ಅಶೋಕ ಭಜಂತ್ರಿಯವರುsಸೋಮವಾರ ಅಧಿಕಾರ ಸ್ವಿಕರಿಸಿದರು.
ಕಳೆದ 6 ತಿಂಗಳಿಗೂ ಹೆಚ್ಚಿನ ಸಮಯದಿಂದ ತೆರವಾದ ಸ್ಥಾನವನ್ನು ಪ್ರಭಾರಿಯಾಗಿ ಜಿ.ಎಲ್.ನಾಯ್ಕ ನಿಭಾಯಿಸುತ್ತಿದ್ದರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅಶೋಕ ಭಜಂತ್ರಿ ಮಾತನಾಡಿ ಜಿಲ್ಲೆಯಲ್ಲಿ ಉತ್ತಮ ಶಿಕ್ಷಕರಿಂದ ಕೂಡಿರುವ ತಾಲೂಕ ಎನ್ನುವ ಹೆಮ್ಮೆ ಇದೆ. ಅಲ್ಲದೇ ಶೈಕ್ಷಣಿಕ ಹಾಗೂ ಸಹಪಠ್ಯ ವಿಭಾಗದಲ್ಲಿ ತಾಲೂಕಿನ ಸಾಧನೆ ಉತ್ತಮವಾಗಿದ್ದು ಮುಂದೆಯೂ ಅದಕ್ಕೆ ಪೋತ್ಸಾಹ ನೀಡಲಿದ್ದೇನೆ. ಹಾಗೂ ಶೈಕ್ಷಣಿಕ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ ಪರಿಹಾರ ಕಂಡುಕೊಳ್ಳುತ್ತೇನೆ. ಜನಪ್ರತಿನಿಧಿಗಳ, ಶಿಕ್ಷಕರ, ಸಾರ್ವಜನಿಕರ ಸಹಕಾರದೊಂದಿಗೆ ತಾಲೂಕಿನ ಮಕ್ಕಳು ಇನ್ನೂ ಹೆಚ್ಚಿನ ಸಾಧನೆ ಮಾಡಲು ಬೇಕಾದ ಸಹಕಾರ ನೀಡುತ್ತೇನೆ. ಈ ಹಿಂದೆ ನವಲಗುಂದಲ್ಲಿ ಕಾರ್ಯನಿರ್ವಹಿಸಿರುದರಿಂದ ಅನುಭವವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಲವು ದಿನದಿಂದ ತೆರವಾಗಿದ್ದ ಹುದ್ದೆ ಭರ್ತಿಯಾದರೂ ಶಿಕ್ಷಣಾಧಿಕಾರಿ ಗ್ರಾಮದ ಸಮಸ್ಯೆ ಅರಿಯಲು ಗ್ರಾಮಂತರ ಪ್ರದೇಶದ ಶಾಲೆಯ ಸ್ಥಿತಿಗತಿ ತಿಳಿಯಲು ಸರ್ಕಾರಿ ಜೀಪ್ ವ್ಯವಸ್ಥೆ ಇಲ್ಲದೇ ಪರದಾಟ ಮುಂದುವರೆದಿದ್ದು ಜನಪ್ರತಿನಿದಿಗಳು ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕಿದೆ. ಮುಂದಿನ ದಿನದಲ್ಲಾದರೂ ಈ ಸಮಸ್ಯೆ ಬಗೆಹರಿಯಲಿದೆಯಾ ಎನ್ನುವುದು ಕಾದು ನೋಡಬೇಕಿದೆ.
Leave a Comment