ಹೊನ್ನಾವರ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ – ಸಂಸ್ಕೃತ ಭಾರತೀ ಸಹಯೋಗದಲ್ಲಿ ಗೇರಸೊಪ್ಪ ಬಂಗಾರಮಕ್ಕಿಯಲ್ಲಿ ಸಂಸ್ಕೃತ ಶಿಕ್ಷಕರ ರಾಜ್ಯ ಮಟ್ಟದ ಪುನಶ್ಚೇತನ ಸಂಸ್ಕೃತ ಭಾಷಾ ಬೋಧನಾ ವರ್ಗ 24-07-2019 ರಿಂದ 1-08-2019 ರ ತನಕ ನಡೆಯಲಿದೆ. 24-07-2019 ಬುಧವಾರ ಬೆಳಿಗ್ಗೆ 10. ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ವಿಶ್ರಾಂತ ಕುಲಪತಿಗಳು ಬಹುಶ್ರತ ವಿದ್ವಾಂಸರೂ ಆದ ಪ್ರೊ ಮಲ್ಲೆಪುರಂ ವೆಂಕಟೇಶ ಉದ್ಘಾಟಿಸಲಿದ್ದಾರೆ. ಪರಮ ಪೂಜ್ಯ ಮಾರುತಿ ಗುರೂಜಿಯವರ ಬಂಗಾರಮಕ್ಕಿ ಹಾಗೂ ಹುಕ್ಕೇರಿ ಗುರು ಶಾಂತೇಶ್ವರ ಸಂಸ್ಥಾನದ ಪರಮ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಇವರು ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಸಂಸ್ಕೃತ ಭಾರತೀಯ ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ವಿಶ್ರಾಂತ ಪ್ರಾಚಾರ್ಯ ವಿದ್ವಾನ್ ವಿ.ಜಿ ಹೆಗಡೆ ಗುಡ್ಗೆ ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ಗಿರಿಶ್ಚಂದ್ರ ವಹಿಸುವರು.
ಇದೇ ಸಂದರ್ಭದಲ್ಲಿ ಡಾ|| ಭಾರತಿ ಹೆಗಡೆ ಗುಡ್ಗೆ ಧಾರವಾಡ ಇವರು ರಚಿಸಿದ ಉಪನಿಷತ್ ಕಥಾಗಾರ ಪುಸ್ತಕದ ಲೋಕಾರ್ಪಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಂಸ್ಕೃತ ಭಾರತೀ ಶಿಕ್ಷಣ ಪ್ರಮುಖರು ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯದ ಬೇರೆ ಬೇರೆ ಭಾಗಗಳಿಂದ 170 ಕ್ಕೂ ಹೆಚ್ಚು ಶಿಕ್ಷಕರು ವಿಶೇಷ ತರಭೇತಿ ಪಡೆಯಲು ಭಾಗವಹಿಸಲಿದ್ದಾರೆ
ಈ ಕಾರ್ಯಕ್ರಮವನ್ನು ಸಂಯೋಜಿಸಿದ ಡಾ|| ಪ್ರಕಾಶ ಪಾಗೋಜಿ ನಿರ್ದೇಶಕರು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment