ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ದಶಕಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ಇಸ್ವತ್ತು ಸರಳಿಕರಣದ ಬಗ್ಗೆ ಒತ್ತಾಯಿಸಿದ ಶಾಸಕದಿನಕರ ಶೆಟ್ಟಿ ನಮ್ಮ ಉತ್ತರಕನ್ನಡ ಜಿಲ್ಲೆ ಭೌಗೋಲಿಕವಾಗಿ ಸಮುದ್ರ ನದಿ ಅರಣ್ಯ ಭೂಮಿ ಸ್ವಲ್ಪ ಜನವಸತಿ ಪ್ರದೇಶದಿಂದ ಕೂಡಿದೆ ಇಲ್ಲಿ ಎಕರೆಗಟ್ಟಲೆ ಜಾಗಕ್ಕಿಂತ ತುಂಡು ಭೂಮಿಬಹೊಂದಿರುವವರ ಸಂಖ್ಯೆ ಬಹಳಷ್ಟಿದೆ ಈ ಮಧ್ಯೆ ಇಲ್ಲಿನ ನಿವಾಸಿಗಳು ಜಾಗಖರೀದಿ ಹಾಗೂ ಮಾರಾಟ ಮಾಡಲು ಇಸ್ವತ್ತು ಸಮಸ್ಯೆ ಆಗಿದೆ ಕಳೆದ ಹಲವು ವರ್ಷದಿಂದ ಸಮಸ್ಯೆಯಾಗಿಯೇ ಕಾಡುತ್ತಿದೆ. ಈ ಹಿಂದೆ ಸಮಸ್ಯೆ ಬಗ್ಗೆ ಸಮಿಶ್ರ ಸರ್ಕಾರದ ಅವಧಿಯಲ್ಲಿ ಗಮನಸೆಳೆದರೂ ಸಮಸ್ಯೆ ಬಗೆಹರಿಸುತ್ತೆವೆ ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಪ್ರಸಾರವಾಯಿತು. ಆದರೆ ಸಮಸ್ಯೆ ಬಗೆಹರಿದಿಲ್ಲ ಈಗಲಾದರೂ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದಾಗ ಕಂದಾಯ ಸಚೀವರು ಅಧಿಕಾರಿಗಳೊಂದಿಗೆ ಸಮಸ್ಯೆ ಬಗೆಹರಿಸುದಾಗಿ ತಿಳಿಸಿದರು. ಜಿಲ್ಲೆಯ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಪ್ರಶ್ನಿಸಿ ಬಗೆಹರಿಸಲು ಮುಂದಾಗುತ್ತಿರುವುದು ಜಿಲ್ಲೆಯ ಅಭಿವೃದ್ದಿಗೆ ಪೂರಕ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Leave a Comment