ನಮ್ಮ ಪ್ರತಿಯೊಂದು ಆಚರಣೆಯಲ್ಲೂ ಒಂದು ಕಾರಣವಿರುತ್ತದೆ ಎಂಬುದು ಸುಳ್ಳಲ್ಲ.ಎಲ್ಲಾ ಧಾರ್ಮಿಕ ಆಚರಣೆಯಲ್ಲೂ ಆಧ್ಯಾತ್ಮ ಮತ್ತು ವೈಜ್ಞಾನಿಕವಾದ ಕಾರಣವಿದೆ. ಧಾರ್ಮಿಕ ಆಚರಣೆಗಳಿಂದ ನಮಗೆ ನಂಬಿಕೆ ಮತ್ತು ಆರೋಗ್ಯ ಎರಡು ದೊರೆಯುತ್ತದೆ. ನಮ್ಮ ಆಚರಣೆಯಲ್ಲಿ ಬೆಳ್ಳಿಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲುಗುವವರೆಗೂ ಆಚರಣೆಗಳಿವೆ,ಆರೋಗ್ಯವು ಇವೆ.
ನಾವು ಬೆಳ್ಳಿಗ್ಗೆ ಸೂರ್ಯೋದಯ ಸಮಯದಲ್ಲಿ ಏಳಬೇಕು ಎನ್ನುತ್ತಾರೆ.ನಾವು ಆ ಸಮಯದಲ್ಲಿ ಏಳುವುದರಿಂದ ಸೂರ್ಯನ ಅಮೂಲ್ಯವಾದ ವಿಟಮಿನ್ D ದೊರೆಯುವುದರ ಜೊತೆಗೆ ಸೂರ್ಯ ನಮಸ್ಕರದಂತ ಯೋಗಾಸನಗಳನ್ನು ಮಾಡುವುದರಿಂದ ಸೂರ್ಯನ ಅನುಗ್ರಹ ಮತ್ತು ದೇಹದ ಆರೋಗ್ಯ ಪ್ರಾಪ್ತಿಯಾಗುತ್ತದೆ.ನಾವು ಬೆಳ್ಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವುದು ತಪ್ಪು ಏಕೆಂದರೆ ಬಾಯಿಯಲ್ಲಿರುವ ರೋಗಾಣುಗಳು ಹೊಟ್ಟೆಗೆ ಹೋಗುತ್ತದೆ. ಎದ್ದ ತಕ್ಷಣ ಸ್ನಾನ ಮಾಡಿ, ನಮ್ಮನು ನಾವು ಶುಚಿಯಾಗಿಸಿ ದೇವರ ಪೂಜೆ ಮಾಡಬೇಕು.
ತುಳಸಿ ಗಿಡ, ಅರಳಿ ಮರವನ್ನು ಸುತ್ತುವುದು ಒಂದು ಧಾರ್ಮಿಕ ಆಚರಣೆ. ಹೀಗೆ ಮಾಡುವುದರಿಂದ ನಮಗೆ ಆಕ್ಸಿಜನ್ ಪ್ರಮಾಣ ಅಧಿಕವಾಗಿ ದೊರೆಯುತ್ತದೆ ಮತ್ತು ನಮ್ಮ ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.ನಾವು ಅಂಗಳವನ್ನು ಸಗಣಿ ಹಾಕಿ ತೊಳೆಯುವುದು ಏಕೆ ಎಂದು ತಿಳಿದಿದೆಯೇ? ಸಗಣಿಯಲ್ಲಿ ಔಷದಿ ಗುಣಗಳಿವೆ. ಅದು ಅಂಗಳದಲ್ಲಿರುವ ಕಿಟಾಣುಗಳನ್ನು ಕೊಲ್ಲುತ್ತದೆ ಮತ್ತು ಅಂಗಳ ಸ್ವಚ್ಛ ಶುಚಿಯಾಗಿರುತ್ತದೆ.
ಮುಸ್ಸಂಜೆ ವೇಳೆಯಲ್ಲಿ ದೇವರಿಗೆ ದೀಪ ಹಚ್ಚಿ ಜಪ ತಪಗಳನ್ನು ಮಾಡುತ್ತಾರೆ. ದೀಪ ಹಚ್ಚಿ ಧ್ಯಾನ ಮಾಡುವುದರಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಮತ್ತು ಮನಸ್ಸಿನ ಚಂಚಲತೆ ನಿಲ್ಲುತ್ತದೆ. ಊಟಕ್ಕೆ ಕುಳಿತಾಗ ಮಾತನಾಡದೆ ಊಟ ಮಾಡಬೇಕು. ಆಧ್ಯಾತ್ಮವಾಗಿ ನೋಡಿದಲ್ಲಿ,ಇದು ಅನ್ನಪೂರ್ಣೇಶ್ವರಿಗೆ ನೀಡುವ ಗೌರವ. ವೈಜ್ಞಾನಿಕವಾಗಿ ನೋಡಿದಲ್ಲಿ,ನಾವು ಊಟ ಮಾಡುವಾಗ ಮತನಾಡಿದಲ್ಲಿ ಅದು ಅನ್ನನಾಳ ತೊರೆದು ಬೇರೆಡೆ ಹೋಗಬಹುದಾಗಿರುತ್ತದೆ.
ಆದರೆ ಈ ಆಚರಣೆಗಳು ಈಗ ಪಾಲನೆ ಮಾಡುವುದು ಕಡಿಮೆಯಾಗಿದೆ.ನಾವು ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ.ಇಂತಹ ಹಲವಾರು ಆಚರಣೆಗಳನ್ನು ಪಾಲನೆ ಮಾಡುವುದರಿಂದ ನಮ್ಮ ಆರೋಗ್ಯ ಮಾನಸಿಕವಾಗಿ ಮತ್ತು ದೈಹಿಕವಾಗಿ ಅತ್ಯುತ್ತಮವಾಗಿರುತ್ತದೆ.ಈಗಿನ ಪರಿಸರದಲ್ಲಿ ನಮ್ಮ ಆರೋಗ್ಯ ಕಾಯ್ದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.
Leave a Comment