• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿಪರೀತ ತುಟ್ಟಿಯಾಯ್ತು ವಲಸೆ ಕಾರ್ಮಿಕರ ದಾರಿ ಖರ್ಚು

October 7, 2020 by Lakshmikant Gowda Leave a Comment

ಕೊರೊನಾ ಬಗ್ಗೆ ಭಯಗೊಂಡು ಲಾಕ್‍ಡೌನ್ ಜಾರಿ ಮಾಡಿದಾಗ ದೂರದ ಉತ್ತರ ಪ್ರದೇಶ, ಬಿಹಾರದಂತ ರಾಜ್ಯಗಳಿಂದ ಉದ್ಯೋಗವನ್ನರಸಿ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರು ಇಲ್ಲಿಯೇ ಸಿಕ್ಕಿಹಾಕಿಕೊಂಡು ಕೆಲಸವೂ ಇಲ್ಲದೆ ಊಟಕ್ಕೂ ಪರದಾಡಿದ ಘಟನೆಗಳು ನಡೆದಿದ್ದವು. ನಂತರ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿ ವಲಸೆ ಕಾರ್ಮಿಕರನ್ನು ಕೆಲದಿನ ಹಾಸ್ಟೆಲ್‍ಗಳಲ್ಲಿಟ್ಟು ಉಪಚರಿಸಿ ಬಸ್ಸುಗಳಲ್ಲಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಟ್ಟಿದ್ದರು.

02 06 hnr


ಇದೀಗ ಲಾಕ್‍ಡೌನ್ ಮಾರ್ಗಸೂಚಿಗಳು ಬದಲಾಗಿದ್ದು ಬಹತೇಕ ಎಲ್ಲಾ ಚಟುವಟಿಕೆಗಳು ಮೊದಲಿನಂತೆ ಪ್ರಾರಂಭವಾಗಿದೆ. ಮರಳುಗಾರಿಕೆ, ಮೀನುಗಾರಿಕೆ, ಗಾರೆ ಕೆಲಸ, ರಸ್ತೆ, ಸೇತುವೆ, ಬೃಹತ್ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಕಾರ್ಮಿಕರು ಅತ್ಯವಶ್ಯವಾಗಿದ್ದು ಗುತ್ತಿಗೆದಾರರು ಬೋಟ್ ಮಾಲಿಕರು ಬಿಹಾರಿ, ಉತ್ತರಪ್ರದೇಶ ಮುಂತಾದ ರಾಜ್ಯಗಳ ಕಾರ್ಮಿಕರನ್ನು ಸಂಫರ್ಕಿಸುವ ಪ್ರಯತ್ನದಲ್ಲಿದ್ದಾರೆ. ಕಾರ್ಮಿಕರೂ ಇಲ್ಲಿಗೆ ಬರಲು ಉತ್ಸುಕರಾಗಿದ್ದರೂ ಒಬ್ಬೊಬ್ಬ ಕಾರ್ಮಿಕನನ್ನು ಅಲ್ಲಿಂದ ಇಲ್ಲಿಗೆ ಕರೆಸಿಕೊಳ್ಳುವ ಖರ್ಚಿನ ಬಾಬ್ತು ವಿಪರೀತ ಹೆಚ್ಚಿದೆ ಎನ್ನುವ ಗೊಣಗಾಟ ಕೇಳಿಬರುತ್ತಿದೆ.
ಮೊದಲಿನಷ್ಟು ರೈಲುಗಳು ಓಡಾಡುತ್ತಿಲ್ಲವಾದ ಕಾರಣ ರೈಲಿನಲ್ಲಿ ಸೀಟ್ ಸಿಗುವುದೇ ಕಷ್ಟ ಎನ್ನುವಂತಾಗಿದೆ. ಅನಿವಾರ್ಯತೆ ಇದ್ದವರು ಖಾಸಗಿ ವಾಹನಗಳನ್ನು ಬಾಡಿಗೆ ಪಡೆದು ಕಾರ್ಮಿಕರನ್ನು ಕರೆಸಿಕೊಳ್ಳುತ್ತಿದ್ದಾರೆ. ಹಿಂದೆ ಒಬ್ಬ ಕಾರ್ಮಿಕನಿಗೆ ಒಂದೂವರೆಯಿಂದ ಎರಡು ಸಾವಿರ ಖರ್ಚಾಗುತ್ತಿತ್ತು ಆದರೆ ಈಗ ಒಬ್ಬೊಬ್ಬರಿಗೆ 7 ಸಾವಿರ ರುಪಾಯಿ ಖರ್ಚಾಗುತ್ತಿದೆ ಎಂದು ಲೆಕ್ಕ ಹೇಳುತ್ತಿದ್ದಾರೆ ಗುತ್ತಿಗೆದಾರರು ಬೋಟ್ ಮಾಲಕರು. ಲಾಕ್‍ಡೌನ್ ತೆರವಾದರೂ ಅದರ ಪರಿಣಾಮಗಳು ಮಾತ್ರ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending Tagged With: Bihar and other states in the state, bridge, buses, construction of large buildings., fishing, Migrant workers who came to the district from employment, Road, SAND, stucco, such as lighting, Uttar Pradesh, ಉತ್ತರ ಪ್ರದೇಶ, ಉದ್ಯೋಗವನ್ನರಸಿ ಜಿಲ್ಲೆಗೆ ಬಂದಿದ್ದ ವಲಸೆ ಕಾರ್ಮಿಕರು, ಗಾರೆ ಕೆಲಸ, ಪರಿಣಾಮಗಳು ಮಾತ್ರ ಒಂದೊಂದಾಗಿ ಬೆಳಕಿಗೆ, ಬಿಹಾರದಂತ ರಾಜ್ಯಗಳಿಂದ, ಬೃಹತ್ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಕಾರ್ಮಿಕರು ಅತ್ಯವಶ್ಯ, ಮರಳುಗಾರಿಕೆ, ಮೀನುಗಾರಿಕೆ, ರಸ್ತೆ, ಲಾಕ್‍ಡೌನ್ ಮಾರ್ಗಸೂಚಿಗಳು, ಸೇತುವೆ, ಹಾಸ್ಟೆಲ್‍ಗಳಲ್ಲಿಟ್ಟು ಉಪಚರಿಸಿ ಬಸ್ಸು

Explore More:

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...