ಹೊನ್ನಾವರ: ತಾಲೂಕಿನ ಅರೇ ಅಂಗಡಿ ಸಾಲ್ಕೋಡದಲ್ಲಿ ಮಂಗಳವಾರ ವ್ಯಕ್ತಿಯೊರ್ವ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ರು ದಾಳಿ ನಡೆಸಿದ್ದು ಆರೋಪಿ ಪರಾರಿಯಾಗಿದ್ದು ಅಕ್ರಮ ಸರಾಯಿ ವಶಕ್ಕೆ ಪಡೆದಿದ್ದಾರೆ.
ಪರಾರಿಯಾದ ಆರೋಪಿತ ವ್ಯಕ್ತಿ ಅರೇ ಅಂಗಡಿ ಸಾಲ್ಕೋಡದ ನಿವಾಸಿ ನಾಗರಾಜ ವೆಂಕಟೇಶ ದೇವಲಾಪುರ ಎಂದು ಗುರುತಿಸಲಾಗಿದೆ. ಇತ ಅರೇ ಅಂಗಡಿ ಗ್ರಾಮದಲ್ಲಿ ಹೈಸ್ಕೂಲ್ ಎದುರಿಗೆ ಇರುವ ತನ್ನ ಶೆಡ್ಡು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಯಾವದೇ ಪಾಸ್ ,ಪರ್ಮಿಟ್ ಇಲ್ಲದೆ ಒಟ್ಟು 4,901 ರೂಪಾಯಿ ಮೌಲ್ಯದ ಸಾರಾಯಿಗಳನ್ನು ಕೇಸರಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಕೊಂಡು ಅನಧಿಕೃತವಾಗಿ ತನ್ನ ಅನ್ಯಾಯದ ಲಾಭ ಗೋಸ್ಕರ ಮಾರಾಟ ಮಾಡುತ್ತಿದ್ದಾಗ ದಾಳಿಯ ಕಾಲಕ್ಕೆ ಓಡಿ ತಪ್ಪಿಸಿ ಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment