• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಸ್ವಯಂ ಪ್ರೇರಣೆಯಿಂದ ರಸ್ತೆ ದುರಸ್ಥಿ ಮಾಡಿದ ಗ್ರಾಮಸ್ಥರು

December 2, 2020 by Lakshmikant Gowda Leave a Comment

ಜನಪ್ರತಿನಿಧಗಳ ಕಣ್ತೆರೆಸುವುದಕ್ಕೆ, ಮಾಡಬೇಕಾದ ಕೆಲಸ ಮಾಡದ ಕಾರಣಕ್ಕೆ ನಿಮ್ಮಿಂದಾಗದ ಕೆಲಸ ನಾವೇ ಮಾಡಿಕೊಂಡೆವು ಎಂದು ಸ್ವಾಭಿಮಾನದ ಹೇಳಿಕೆ ನೀಡಿ ಸಂಬಂಧಿಸಿದವರಿಗೆ ಮುಜುಗರ ಹುಟ್ಟಿಸುವುದಕ್ಕೆ ಹವಣಿಸುವ ಜನರ ನಡುವೆ ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ ರಸ್ತೆಯನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ದುರಸ್ಥಿ ಮಾಡಿಕೊಂಡಿದ್ದು ಈ ಕೆಲಸ ಮಾಡಿಲ್ಲ ಎಂದು ಯಾರ ಮೇಲೂ ಗೂಬೆ ಕೂರಿಸುವುದಿಲ್ಲ ನಮ್ಮದು ಕೇವಲ ಸ್ವಯಂ ಪ್ರೇರಣೆಯ ಕೆಲಸವಷ್ಟೇ ಇದರಲ್ಲಿ ಬೇರೆ ಯಾವುದೇ ಕಾರಣಗಳು ಇಲ್ಲ ಎನ್ನುವ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ ರವಾನಿಸಿದ್ದಾರೆ.


ಗ್ರಾಮಪಂಚಾಯತ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಹಿಂದಿನ ಐದು ವರ್ಷದ ಅವಧಿಯಲ್ಲಿ ಸರ್ಕಾರದ ಅನುದಾನದಲ್ಲಿ ಕೆಲಸ ಮಾಡಿಸಲಾಗದ ಕಡೆಯೆಲ್ಲಾ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗುವ ಹಾಲಿಗಳು ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸಿಕೊಡುವ ನಾಟಕ ಶುರುವಿಟ್ಟುಕೊಂಡಿದ್ದಾರೆ. ಇನ್ನು ಕೆಲವೆಡೆ ಹಿಂದಿನ ಸದಸ್ಯರಿಗೆ ಟಾಂಗ್ ಕೊಡುವ ಉದ್ದೇಶಕ್ಕೆ ಮಾಜಿ ಸದಸ್ಯರ ವಿರುದ್ಧ ಜನಾಭಿಪ್ರಾಯ ಮೂಡಿಸುವುದಕ್ಕೆ ಎಲ್ಲೆಲ್ಲಿ ಕೆಲಸವಾಗಬೇಕಿತ್ತು ಎನ್ನುವುದನ್ನು ನೆನಪಿಸುವ ಮೂಲಕ ತಾನು ಸಮರ್ಥ ಅಭ್ಯರ್ಥಿ ಎನ್ನುವುದನ್ನು ಬಿಂಬಿಸಿಕೊಳ್ಳುವುದಕ್ಕೆ ಹಾಳಾದ ರಸ್ತೆ, ಬೀದಿ ದೀಪ, ಕಾಲು ಸಂಕ, ಕೆರೆ ಕಟ್ಟೆ ಮುಂತಾದವುಗಳನ್ನು ಬಳಸಿಕೊಳ್ಳುತ್ತಿರುವುದೂ ಕಂಡುಬರುತ್ತಿದೆ. ಆದರೆ ಇದಾವುದರ ರಗಳೆಯೇ ಬೇಡ ಮಳೆಗಾಲದಲ್ಲಿ ಹಾಳಾಗಿದ್ದ ನಮ್ಮೂರಿನ ರಸ್ತೆಯನ್ನು ನಾವೇ ದುರಸ್ಥಿ ಮಾಡಿಕೊಳ್ಳುತ್ತೇವೆ.

ನಾವು ಸ್ಥಳಿಯ ಗ್ರಾಮಪಂಚಾಯತ ಮೇಲಾಗಲಿ,ತಾಲೂಕಾ ಪಂಚಾಯತ, ಜಿಲ್ಲಾಪಂಚಾಯತ ಅಥವಾ ಶಾಸಕರು ಸಹಿತ ಯಾರ ಮೇಲೂ ಗೂಬೆ ಕೂರಿಸುವುದಿಲ್ಲ. ಸೇವೆಯ ಉದ್ದೇಶಕ್ಕಾಗಿ ಈ ಕೆಲಸ ಮಾಡುತ್ತಿರುವುದೇ ಹೊರತ ವಿವಾದವನ್ನು ಸೃಷ್ಟಿಸುವ ಮನಸ್ಸಿಲ್ಲ ಎಂದಿರುವುದು ಗ್ರಾಮಸ್ಥರ ವಿಶಾಲ ಮನಸ್ಸಿಗೆ ಸಾಕ್ಷಿಯಾಗಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News, Trending, ಅಂಕಣಗಳು Tagged With: Dilapidated road, foot sink, government grants, Hebbarnakare, kadle road, play started, pond, self esteem statement during the past five years, street lamp, the road is a villager, work at own expense, ಕಡ್ಲೆ ಗ್ರಾಮದ ಹೆಬ್ಬಾರ್ನಕೆರೆ ಕೂಡ, ಕಾಲು ಸಂಕ, ಕೆರೆ ಕಟ್ಟೆ, ನಾಟಕ ಶುರುವಿಟ್ಟು, ಬೀದಿ ದೀಪ, ರಸ್ತೆಯನ್ನು ಗ್ರಾಮಸ್ಥರೇ, ಸಂಬಂಧಿಸಿದವರಿಗೆ ಮುಜುಗರ, ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸಿಕೊಡುವ, ಸ್ವಯಂ ಪ್ರೇರಣೆಯಿಂದ ದುರಸ್ಥಿ, ಸ್ವಾಭಿಮಾನದ ಹೇಳಿಕೆ, ಹವಣಿಸುವ ಜನರ, ಹಾಳಾದ ರಸ್ತೆ, ಹಿಂದಿನ ಐದು ವರ್ಷದ ಅವಧಿಯಲ್ಲಿ ಸರ್ಕಾರದ ಅನುದಾನ

Explore More:

Lakshmikant Gowda

About Lakshmikant Gowda

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 919,920 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಬೆಳ್ಳಕ್ಕಿ ಬೆಡಗು

January 21, 2021 By Lakshmikant Gowda

ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರ ನಡುವೆ ಸಂಪನ್ನಗೊಂಡ: ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ

January 21, 2021 By bkl news

“ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ

January 20, 2021 By Lakshmikant Gowda

ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ

January 19, 2021 By bkl news

ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ

January 19, 2021 By Vishwanath Shetty

ದತ್ತಾತ್ರೇಯ ನಾರಾಯಣ ಭಟ್ಟ ನಿದನ

January 18, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.