ಹೊನ್ನಾವರ: ಮೀನು ಮಾರ್ಕೆಟ್ ಅವ್ಯವರ್ಸಥೆಯ ಬಗ್ಗೆ ಮೀನುಗಾರರು ನಡೆಸುವ ಹೋರಾಟಕ್ಕೆ ಕರುನಾಡು ವಿಜಯ ಸೇನೆ ಬೆಂಬಲ ನೀಡಲಿದೆ ಎಂದು ಸಂಘಟನೆಯ ಪ್ರಮುಖರಾದ ವಿನೋದ ನಾಯ್ಕ ರಾಯಲಕೇರಿ ತಿಳಿಸಿದ್ದಾರೆ.
ಪ್ರತಿಭಟನಾ ನಿರತ ಮಹಿಳೆಯರೊಂದಿಗೆ ಅವ್ಯವಸ್ಥೆಯನ್ನು ವಿಕ್ಷಿಸಿದ ಬಳಿಕ ಬೆಂಬಲ ಸೂಚಿಸಿ ಮಾತನಾಡಿದ ಅವರು ಹೊನ್ನಾವರ ಮೀನುಗಾರರರಿಗೆ ರಕ್ಷಣೆ ಇಲ್ಲದಂತಾಗಿದೆ. ತಾಲೂಕಿನ ಮಂಕಿ, ಹಳದೀಪುರ, ಕರ್ಕಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದೆ. ಆದರೆ ತಾಲೂಕ ಮಾರ್ಕೆಟ್ ಮಾತ್ರ ದುರವಸ್ಥೆಯಿಂದ ಕೂಡಿದೆ. ಇದು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಕಣ್ಣಿಗೆ ಕಾನುವುದಿಲ್ಲವಾ? ಬೇರೆ ಹಣ ಬೇಡ ಇವರು ಕಳೆದ 6 ವರ್ಷದಲ್ಲಿ 12 ಲಕ್ಷಕ್ಕೂ ಅಧಿಕ ಹಣ ತೆರಿಗೆ ತುಂಬಿದ್ದಾರೆ. ಅವರ ಹಣವನ್ನು ಅದೇ ಸ್ಥಳಕ್ಕೆ ಹಾಕಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿದರು. 15 ದಿನದೊಳಗೆ ಸಮಸ್ಯೆ ಬಗೆಹರಿಸಲು ಮುಂದಾಗದೇ ಹೋದಲ್ಲಿ ಪಟ್ಟಣ ಪಂಚಾಯತಿ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವಿನಾಯಕ ಆಚಾರಿ, ಶ್ರೀರಾಮ ಹೊನ್ನಾವರ, ಧನಂಜಯ ನಾಯ್ಕ ಮತ್ತಿತರರು ಹಾಜರಿದ್ದರು.
Leave a Comment