ಹೊನ್ನಾವರ: ಯುತ್ ಕಾಂಗ್ರೆಸ್ ವತಿಯಿಂದ ರವಿ ಕೆ.ಶೆಟ್ಟಿ ನಿವಾಸದಲ್ಲಿ ಮಂಗಲಮುಖಿಯರು ಹಾಗೂ ಆಯ್ದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾತನಾಡಿ ಕರೋನಾ ಮಹಾಯುದ್ಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಜನರ ಕಷ್ಟ ಕಾಲಕ್ಕೆ ಸಹಾಯ ಮಾಡಬೇಕು.
ಮೊದಲನೆಯ ಅಲೆಯಲ್ಲಿ ತಜ್ಞರು ಮುನ್ನೆಚ್ಚರಿಕೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೊಟ್ಟಿದರೂ ಸರ್ಕಾರ ಮಾತ್ರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ರೀತಿಯಲ್ಲಿ ಸಾವು ನೋವುಗಳು ಸಂಭವಿಸಿದೆ. ಕರೋನಾದಿಂದ ಸಾಕಷ್ಟು ಕಾರ್ಮಿಕರು, ಬಡ ಜನರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಕೆಲಸವನ್ನು ಕಳದುಕೊಂಡವರಿಗೆ ಸರಕಾರ ಕೆಲಸ ಕೊಡಿಸುವ ವ್ಯವಸ್ಥೆ ಮಾಡಬೇಕು. ಬ್ಯಾಂಕ್ ಸಾಲ ಪಾವತಿಯನ್ನು ಆರು ತಿಂಗಳ ಕಾಲ ಮುಂದೂಡಬೇಕು.
ಕೊರೋನಾ ವಿರುದ್ದ ಜನಪ್ರತಿನಿಧಿಗಳು ಹಗಲು ರಾತ್ರಿ ಹೋರಾಡುತ್ತಿದ್ದರೆ, ಜಿಲ್ಲೆಯ ಸಂಸದರು ಮಾತ್ರ ಕರೋನಾ ಸಂದರ್ಭದಲ್ಲಿ ಕಾಣೆಯಾಗಿದ್ದಾರೆ.ಜಿಲ್ಲೆಯ ಸಂಸದರು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ವತ್ತಾಯಿಸಿ ಜಿಲ್ಲೆಯ ಜನತೆಗೆ ಆಕ್ಸಿಜನ್, ಬೆಡ್, ವ್ಯಾಕ್ಸಿನೇಷನ್, ಹಾಗೂ ಮೆಡಿಸಿನ್ ವ್ಯವಸ್ಥೆ ಮಾಡಬೇಕಾಗಿತ್ತು. ಜಿಲ್ಲೆಯ ಸಂಸದರನ್ನು ಹುಡುಕಿಕೊಟ್ಟವರಿಗೆ ಯೋಗ್ಯ ಬಹುಮಾನ ನೀಡಲಾಗುವುದು. ಅದೇ ರೀತಿ ಜಿಲ್ಲೆಯ ಮಂತ್ರಿ ಸಹ ಮನೆಯ ಒಳಗಡೆ ಎರಡೆರಡು ಮಾಸ್ಕ್ ಹಾಕಿ ಕುಳಿತುಕೊಂಡಿದ್ದಾರೆ.
ಕರೋನಾದಿಂದ ಯಾರು ಸತ್ತಿಲ್ಲಾ, ಸರಿಯಾದ ಸಮಯದಲ್ಲಿ ಆಕ್ಸಿಜನ್, ಮೆಡಿಸಿನ್ ಸಿಕ್ಕಿದರೆ ಯಾವ ವ್ಯಕ್ತಿಯ ಸಾವು ಸಂಭವಿಸುತ್ತಿರಲ್ಲಿಲ್ಲಾ. ಈ ಬಗ್ಗೆ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲಾ. ಅಲ್ಲದೇ ಸರಕಾರ ವ್ಯಾಕ್ಸಿನೇಶನ್ ಹೊರದೇಶಕ್ಕೆ ರಫ್ತು ಮಾಡಿದ್ದರಿಂದ ಸಮಸ್ಯೆ ಉಂಟಾಗಿದೆ. ರಾಜ್ಯದ ಕೆಲವು ಶಾಸಕರು ಮುಖ್ಯಮಂತ್ರಿ ಬದಲಾವಣೆ ಮಾಡಲ್ಲಿಕ್ಕೆ ದೆಹಲಿ ಹೋಗಿದ್ದಾರೆ, ಕೆಲವರಂತೂ ಕಮೀಶನ್ಗೊಸ್ಕರ ಮನೆಯಲ್ಲಿ ಕುಳಿತುಕೊಂಡಿರುತ್ತಾರೆ.ಸರ್ಕಾರಕ್ಕೆ ಜನಪರ ಕಾಳಜಿ ಇಲ್ಲಾ ಎಂದು ಗಂಭೀರ ಆರೋಪ ಮಾಡಿದರು.ಕಾಂಗ್ರೇಸ್ ಕಾರ್ಯಕರ್ತರು ಶ್ರೀನಿವಾಸ್ ಇವರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕಾಂಗ್ರೇಸ್ ವಿವಿಧ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು
Leave a Comment