ಯಲ್ಲಾಪುರ:
ತಾಲೂಕಿನ ಬಾರೆ-ಚಿನ್ನಾಪುರ ರಸ್ತೆಯ ಪಕ್ಕ ಜಿಯೊ ಕಂಪನಿಯ ಕೇಬಲ್ ಅಳವಡಿಸಲೆಂದು ತೆಗೆದ ಕಾಲುವೆಯನ್ನು ಸರಿಯಾಗಿ ಮುಚ್ಚದ ಪರಿಣಾಮ ಮಳೆಯ ದೆಸೆಯಿಂದಾಗಿ ಆ ಕಾಲುವೆ ತೆರೆದುಕೊಂಡಿದೆ. ಇದು ವಾಹನ ಸವಾರರಿಗೆ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ.
ಕಳೆದ ೩-೪ ತಿಂಗಳುಗಳ ಹಿಂದೆ ಬಾರೆ-ಚಿನ್ನಾಪುರ ರಸ್ತೆಯ ಮಗ್ಗುಲಲ್ಲೇ ಕಾಲುವೆ ತೆಗೆದು ಜಿಯೊ ಕಂಪನಿಯ ಕೇಬಲ್ ಅಳವಡಿಸಲಾಗಿತ್ತು. ನಂತರ ಆ ಕಾಲುವೆಯನ್ನು ಮುಚ್ಚಲಾಗಿತ್ತು. ಆದರೆ ಮಳೆಯ ಪರಿಣಾಮ ಚಿನ್ನಾಪುರದಿಂದ ಬಾರೆಯವರೆಗೆ ರಸ್ತೆಯ ಪಕ್ಕದಲ್ಲಿ ಕಾಲುವೆ ಬಹುತೇಕ ಎಲ್ಲ ಕಡೆ ಕುಸಿದು, ತೆರೆದುಕೊಂಡಿದೆ. ಮೊದಲೇ ಕಿರಿದಾದ ಹಾಗೂ ಹೆಚ್ಚಿನ ತಿರುವುಗಳಿಂದ ಕೂಡಿದ ಈ ರಸ್ತೆಯ ಪಕ್ಕದಲ್ಲೇ ಕೆಬಲ್ ಕಾಲುವೆ ಹಾದು ಹೋಗಿದೆ. ಕಾಲುವೆ ಕುಸಿದಿರುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಎರಡು ವಾಹನಗಳು ಏಕಕಾಲಕ್ಕೆ ಬಂದಾಗ ವಾಹನಗಳು ರಸ್ತೆ ಬಿಟ್ಟು ಕೆಳಗೆ ಇಳಿಯುವ ಅನಿವಾರ್ಯತೆ ಎದುರಾಗುತ್ತದೆ. ಹಾಗೇನಾದರೂ ವಾಹನವನ್ನು ರಸ್ತೆ ಬಿಟ್ಟು ಕೆಳಕ್ಕಿಳಿಸಿದಲ್ಲಿ ಕಾಲುವೆಯೊಳಗೆ ಚಕ್ರ ಹೂತು ಬೀಳುವುದು ಖಚಿತ. ಕಾಲುವೆ ಕೆಸರಲ್ಲಿ ವಾಹನ ಹೂತರೆ ಕ್ರೇನ್ ಬಳಸಿಯೇ ಮೇಲಕ್ಕೆತ್ತಬೇಕು. ಈಗಿನ್ನೂ ಮಳೆಗಾಲ ಆರಂಭವಷ್ಟೇ, ಈಗಲೇ ಕೆಲವು ವಾಹನ ಸವಾರರು ಕಾಲುವೆಯಿಂದಾಗಿ ಅಪಾಯ ಅನುಭವಿಸಿದ ಘಟನೆಗಳು ನಡೆದಿವೆ. ಇದರಿಂದಾಗಿ ಆತಂಕಗೊಳ್ಳುವAತಾಗಿದ್ದು, ಇನ್ನು ಮಳೆ ಜೋರಾದಲ್ಲಿ ಇದರಿಂದ ಇನ್ನಷ್ಟು ಅಪಘಾತಗಳು ಸಂಭವಿಸುವ ಅಪಾಯವಿದೆ.
ಜಿಯೊ ಕಂಪನಿಯವರು ಕೇಬಲ್ ಅಳವಡಿಸಿ, ಕಾಲುವೆ ಮುಚ್ಚಿ ಹೋಗಿದ್ದು, ನಂತರ ಉಂಟಾದ ಈ ಅವಾಂತರದ ಕುರಿತು ತಲೆಕೆಡಿಸಿಕೊಂಡಿಲ್ಲ. ಲೋಕೋಪಯೋಗಿ ಇಲಾಖೆಗೆ ಸಂಬAಧಿಸಿದ ರಸ್ತೆ ಇದಾಗಿದ್ದು, ಅವರು ಜಿಯೋದವರಿಗೆ ಈ ಸಮಸ್ಯೆ ಪರಿಹರಿಸಲು ಸೂಚನೆ ನೀಡಬೇಕು. ತಕ್ಷಣ ಕಾಲುವೆಯನ್ನು ಸರಿಪಡಿಸಿ ಅಪಾಯ ಸಂಭವಿಸದAತೆ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Leave a Comment