ಹೊನ್ನಾವರ ಅ. 04 : ಹೊನ್ನಾವರ ಮಂಕಿ ಮೂಲದ ಸದ್ಯ ಬಾಗಲಕೋಟದಲ್ಲಿ ಕೆವಿಜಿ ಬ್ಯಾಂಕ್ ರೀಜನಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೇವಿದಾಸ ಚಿಕ್ಕರಮನೆ ಮತ್ತು ಅವರ ಪತ್ನಿ ಸ್ವಾತಿ ಚಿಕ್ಕರಮನೆ ಇವರ ಮೇಲೆ ನಿನ್ನೆ ರಾತ್ರಿ ಪ್ರಾಣಾಂತಿಕ ಹಲ್ಲೆ ಮಾಡಲಾಗಿದೆ.
ಇಂದು ಬೆಳಿಗ್ಗೆ ಮಾಮೂಲಿನಂತೆ ಅವರ ಭಾವ ಡಾ. ರಾಜೇಶ ಕಿಣಿ ದಂಪತಿಗಳು ಫೋನ್ ಮಾಡಿದಾಗ ಆ ಕಡೆಯಿಂದ ಪ್ರತಿಕ್ರಿಯೆ ಬರದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಿಕ್ಕರಮನೆ ದಂಪತಿಗಳು ಕಂಡುಬಂದರು.

ಕೂಡಲೇ ಪೋಲೀಸರಿಗೆ ಮತ್ತು ಸಂಬಂಧಿಸಿದವರಿಗೆ ತಿಳಿಸಲಾಯಿತು. ಚಿಕಿತ್ಸೆಯ ನಂತರ ದೇವಿದಾಸ ಚಿಕ್ಕರಮನೆಯವರಿಗೆ ಪ್ರಜ್ಞೆ ಬಂದಿದ್ದು ಅವರ ಮಡದಿಗೆ ಪ್ರಜ್ಞೆ ಬಂದಿಲ್ಲ. ಚಿಕ್ಕರಮನೆ ಇವರು ಹೊನ್ನಾವರ ಸಹಿತ ಹಲವು ಕಡೆ ಕೆವಿಜಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿ ಸದ್ಯ ಬಾಗಲಕೋಟದಲ್ಲಿದ್ದರು.
ಮೂರು ತಿಂಗಳ ಹಿಂದಷ್ಟೆ ಮಗಳ ಮದುವೆ ಮಾಡಿದ್ದರು. ಮನೆಯಲ್ಲಿರುವ ನಗನಾಣ್ಯ ದೋಚಲೆಂದೋ ಅಥವಾ ಇನ್ನಾವುದೋ ಕಾರಣಕ್ಕೋ ದುಷ್ಕರ್ಮಿಗಳು ಇಬ್ಬರೇ ಇರುವ ಈ ಮನೆ ಹೊಕ್ಕಿ ಗಂಭೀರ ಅಪರಾಧ ಮಾಡಿದ್ದು ಕಾರಣ ತಿಳಿದು ಬರಬೇಕಿದೆ. ಚಿಕ್ಕರಮನೆಯವರು ಹೋದಲೆಲ್ಲಾ ಸಜ್ಜನ ಬ್ಯಾಂಕರ್ ಆಗಿ ಹೆಸರುಗಳಿಸಿದ್ದರು.
ಹೊನ್ನಾವರ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;
ಗ್ರುಪ್ ಸೇರಲು ಈ ಲಿಂಕ್ ಒತ್ತಿhttps://chat.whatsapp.com/G9SxG7l3Wo36m72c85bSOA
Leave a Comment