ಹೊನ್ನಾವರ : ತಾಲೂಕಿನ ಅಪಘಾತವಲಯವಾಗಿ ಕುಖ್ಯಾತಿ ಗಳಿಸುತ್ತಿರುವ ಮುಗ್ವಾ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆ ತಿರುವಿನಲ್ಲಿ ಗುರುವಾರ ತಡ ರಾತ್ರಿ ಮತ್ತೊಂದು ಲಾರಿ ಮಗುಚಿಬಿದ್ದಿದೆ.
ಮೆಕ್ಕೆಜೋಳ ತುಂಬಿಕೊಂಡು ಸಾಗರ ಕಡೆಯಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿ ಪಲ್ಟಿಯಾಗಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಕ್ಕೆಜೋಳ ತುಂಬಿದ ಚೀಲಗಳು ಚೆಲ್ಲಾಪಿಲ್ಲಿಯಾಗಿದೆ. ಅಪಘಾತವಾದ ಸ್ಥಳಕ್ಕೆ ಹೊನ್ನಾವರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು.
ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗುತ್ತಿದೆ.ಕೆಲ ವರ್ಷಗಳಿಂದ ಬಾಳೆಗದ್ದೆ ತಿರುವಿನಲ್ಲಿ ಪದೇ ಪದೇ ವಾಹನ ಅಪಘಾತಕ್ಕೀಡಾಗುತ್ತಿದ್ದು ಪಲ್ಟಿಯಾಗುವ ವಾಹನಗಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.
ಅಪಘಾತಕ್ಕೆ ಚಾಲಕರ ನಿರ್ಲಕ್ಷ್ಯದ ಚಾಲನೆ ಒಂದೇ ಕಾರಣವೋ ಅಥವಾ ನಿರ್ಮಾಣವಾಗಿರುವ ರಸ್ತೆಯಲ್ಲಿಯೇ ದೋಷವಿದೆಯೋ ಎನ್ನವುದನ್ನು ಅರಿಯಲು ಮುಂದಾಗಬೇಕಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಯಾವತ್ತು ಆಸಕ್ತಿ ಬರಲಿದೆಯೋ ಅದಕ್ಕಾಗಿ ಇನ್ನೆಷ್ಟು ಅಪಘಾತಗಳು ಸಂಭವಿಸಬೇಕೋ ಎನ್ನುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಥಳಿಯರು ತಮ್ಮ ಅಸಹನೆ ಹೊರಹಾಕಿದ್ದಾರೆ.
Leave a Comment