ಹೊನ್ನಾವರ : ತಾಲೂಕಿನ ಮಂಕಿ,ಕೆಳಗಿನೂರು, ಮುಗಳಿ, ಕಳಸನಮೋಟೆ, ಕಾಸರಕೋಡ, ಆಡುಕಳ ದಬ್ಬೋಡ, ಚಿತ್ತಾರ ಮುಂತಾದ ಗ್ರಾಮಗಳಲ್ಲಿ ಮನೆ ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದ ಡಾ. ವಿಶ್ವನಾಥ ಶೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಲ್ಕು ದಶಕಗಳ ಹಿಂದೆ ದೂರದ ಉಡುಪಿಯಿಂದ ಬಂದು ಮಂಕಿಯಲ್ಲಿ ನೆಲೆಸಿ ಹಗಲಿರುಳು ಪರಿವಿಲ್ಲದೇ ಜನರ ಖಾಯಿಲೆಗಳಿಗೆ ಔಷಧಿ ನೀಡುತ್ತಾ ಬಂದಿದ್ದರು.
ಇತ್ತೀಚಿಗೆ ಅನಾರೋಗ್ಯದಿಂದ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ದುರದೃಷ್ಟವಶಾತ್ ಚಿಕಿತ್ಸೆಗೆ ಸ್ಪಂದಿಸದ ಅವರ ಮೆದುಳು ನಿಷ್ಕ್ರಿಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಜೀವಿತದ ಬಹುಕಾಲವನ್ನು ಮಂಕಿಯಲ್ಲಿಯೇ ಕಳೆದಿದ್ದರೂ ಡಾ.ವಿಶ್ವನಾಥ ಶೆಟ್ಟಿ ಅವರ ಕುಟುಂಬ ಇಂದಿಗೂ ಉಡುಪಿಯಲ್ಲಿಯೇ ವಾಸ್ತವ್ಯವಿದೆ.
ಅವರ ಮಗ ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉನ್ನತ ವೈದ್ಯರಾಗಿದ್ದರೆ ಮಗಳು ಅಮೇರಿಕಾದಲ್ಲಿರುವ ಮಾಹಿತಿ ಲಭ್ಯವಾಗಿದೆ. ಮಗಳು ಅಮೇರಿಕಾದಿಂದ ಮರಳುವವರೆಗೂ ಡಾ.ವಿಶ್ವನಾಥ ಶೆಟ್ಟಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಮುಂದುವರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವೈದ್ಯರ ಆರೊಗ್ಯ ಚೇತರಿಸಿಕೊಳ್ಳಲಿ ಎಂದು ತಾಲೂಕಿನ ವಿವಿಧ ಗ್ರಾಮಸ್ಥರು ಆಶಿಸುತ್ತಿದ್ದಾರೆ.
Leave a Comment