ಹೊನ್ನಾವರ : ಪಟ್ಟಣದ ಬಾಂದೇಹಳ್ಳದಲ್ಲಿ ಬೀಗ ಹಾಕಿದ್ದ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಮಾಂಗಲ್ಯ ಸರ ಮತ್ತು ನಗದು ಹಣವನ್ನು ೨೦೧೪ರ ಅಗಸ್ಟ ೪ ಕಳ್ಳತನವಾಗಿತ್ತು.
ಆಗಿನ ವೃತ್ತ ನಿರೀಕ್ಷಕರಾದ ಮಂಜುನಾಥ ಎಂ. ಮತ್ತು ಚೆಲುವರಾಜು ಬಿ. ರವರು ಹೊನ್ನಾವರ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಲಯಕ್ಕೆ ವರದಿ ಸಲ್ಲಿಸಿದ್ದರು.
ಆರೋಪಿತರಾದ ಹುಬ್ಬಳ್ಳಿ ಮೂಲದಸಂಜಯ, ಚಂದ್ರಶೇಖರ ಕೆಲ್ಲೋಡಿ, ಅಂಕೋಲಾದ ಆನಂದ ನಾರಾಯಣ ನಾಯ್ಕ ಇವರ ವಿರುದ್ದ ದೋಷಾರೊಪಣೆ ಸಲ್ಲಿಸಿಸಲಾಗಿತ್ತು . ಈ ಪ್ರಕರಣದಲ್ಲಿ 1ನೇ ಆರೋಪಿಗೆ ಈ ಹಿಂದೆಯೆ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿತ್ತು. 2ನೇ ಆರೋಪಿತನ ವಿರುದ್ಧ ಈಗ ಪ್ರಕರಣ ನಡೆದು ಸಾಬೀತಾಗಿದ್ದು 3ನೇ ಆರೋಪಿ ಗೈರು ಹಾಜರಾಗಿದ್ದರಿಂದ 3ನೇ ಆರೋಪಿತನ ಮೇಲೆ ಪ್ರತ್ಯೇಕ ಪ್ರಕರಣವು ದಾಖಲಾಗಿದೆ.
ಈ ಪ್ರಕರಣದ ವಿಚಾರಣೆಯನ್ನು ನಡೆಸಿದ ಹೊನ್ನಾವರದ ಹಿರಿಯ ಸಿವಿಲ್ ಮತ್ತು ಜೆ. ಎಂ. ಎಫ್. ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಜಿ. ಯವರು ಪ್ರಕರಣದ 2ನೇ ಆರೋಪಿ ಸಂಜು ಸಂಜಯ, ಚಂದ್ರಶೇಖರ ಕೆಲ್ಲೋಡಿ, ಆರೋಪಿತನ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು 3 ವರ್ಷಗಳ ಜೈಲು ಶಿಕ್ಷೆ ಮತ್ತು 5 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡ ತುಂಬಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಕಾಲ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪನ್ನು ನೀಡಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ವೆಂಕಟೇಶ ಕೆ. ಗೌಡ ಈ ಪ್ರಕರಣವನ್ನು ವಾದಿಸಿದ್ದರು.
Leave a Comment