ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕಾ ಗ್ರಾಮ ಅಕ್ರಮ ಚಟುವಟಿಕೆಗಳಿಂದ ಹಾಳಾಗುತ್ತಿದೆ. ಅಕ್ರಮ ಸರಾಯಿ ಹಾಗೂ ಮಟಕಾ ದಂದೆ ಇಲ್ಲಿ ಮಿತಿ ಮೀರಿದೆ. ಇಲ್ಲಿನ ಮಜರೆ-2ದಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ ಕೆಡುತ್ತಿದೆ. ಹೀಗಾಗಿ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಜಿಲ್ಲಾಡಳಿತಕ್ಕೆ ಮಂಗಳವಾರ ದೂರು ಸಲ್ಲಿಸಿದರು. ಖಾರ್ವಿ ಸಮಾಜದ ಮೀನುಗಾರರ ಹೆಚ್ಚಾಗಿರುವ ಈ ಊರಿನಲ್ಲಿ ಕೂಲಿ ಮಾಡಿ ಬದುಕುವ ಜನರೇ … [Read more...] about ಅಕ್ರಮ ಸರಾಯಿ ಮಾರಾಟ – ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಮಹಿಳೆಯರು
Karwar News
ಪ್ರಸಿದ್ಧ ಶ್ರೀ ವಿಠಲ್ ರುಖುಮಾಯಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ನ.2ರಂದು
Àಕಾರವಾರ: ಪುರಾಣ ಪ್ರಸಿದ್ಧ ಶ್ರೀ ವಿಠಲ್ ರುಖುಮಾಯಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ನ.2ರಂದು ನಡೆಯಲಿದೆ. ಈ ದೇವಸ್ಥಾನವು ಸುಮಾರು ನಾಲ್ಕು ಶತಮಾನಕ್ಕೂ ಹೆಚ್ಚು ಹಳೆಯದಾಗಿದ್ದು ಮಹಾರಾಷ್ಟ್ರದ ಪಂಡರಪುರದ ವಿಶೇಷತೆ ಹೊಂದಿದೆ. ಕಾರ್ತಿಕ ಮಾಸದ ಸಂದರ್ಭದಲ್ಲಿ ವಿಶೇಷ ಜಾತ್ರೆ ನೆರವೇರುತ್ತವೆ. ಕಳೆದ ಎರಡು ವರ್ಷಗಳಿಂದ ಈ ಉತ್ಸವಕ್ಕೆ ಭಜನೆ ಹಾಗೂ ದಿಂಡಿ ಉತ್ಸವ ಎಂದು ಪ್ರಶದ್ಧಿ ಪಡೆದಿದ್ದು ಜಾತ್ರೋತ್ಸವದ ಒಂದು ವಾರದ ಪೂರ್ವದಲ್ಲಿ ಗೋವಾದ ಪ್ರಸಿದ್ಧ ಸಂಗೀತಕಾರ ಬಾಬು … [Read more...] about ಪ್ರಸಿದ್ಧ ಶ್ರೀ ವಿಠಲ್ ರುಖುಮಾಯಿ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ನ.2ರಂದು
ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಮಡಿವಾಳ ಸಂಘದವರಿಂದ ಪ್ರತಿಭಟನೆ
ಕಾರವಾರ: ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಸಮುದಾಯದ ಪ್ರಮುಖರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ತಮ್ಮ ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸಿದರು. ಅಗಸ, ರಜಕ, ಪರಿಟ ಎಂದು ಗುರುತಿಸಿಕೊಂಡಿರುವ ಮಡಿವಾಳ ಸಮುದಾಯವೂ ಕರ್ನಾಟಕದಲ್ಲಿ ಸುಮಾರು 15 ಲಕ್ಷ ಜನ ಸಂಖ್ಯೆಯನ್ನು ಹೊಂದಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದೂಳಿದವರೇ ಹೆಚ್ಚಿರುವ … [Read more...] about ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಮಡಿವಾಳ ಸಂಘದವರಿಂದ ಪ್ರತಿಭಟನೆ
ದುಡಿಯುವ ಜನರ ಹಕ್ಕುಗಳ ಮೇಲೆ ದಬ್ಬಾಳಿಕೆ ನಡೆಯುವದನ್ನು ಖಂಡಿಸಿ ; ರಾಷ್ಟ್ರಪತಿಗಳಿಗೆ ಮನವಿ
ಕಾರವಾರ: ದುಡಿಯುವ ಜನರ ಹಕ್ಕುಗಳ ಮೇಲೆ ದಬ್ಬಾಳಿಕೆ ನಡೆಯುವದನ್ನು ಖಂಡಿಸಿ ಜನ ಏಕತಾ ಜನ ಅಧಿಕಾರ ಆಂದೋಲನದವರು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪ್ರಮುಖ 26 ಅಂಶಗಳ ಬೇಡಿಕೆಯನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಿರುವ ಆಂದೋಲನದವರು, ಜನರ ಐಕ್ಯತೆಯ ಮೇಲೆ ನಡೆಯುವ ದಾಳಿಯನ್ನು ಖಂಡಿಸಿದರು. ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಬಲಪಡಿಸಬೇಕು. ಸರಕುಗಳ ಬೆಲೆಯಲ್ಲಿ ಜೂಜಾಟ ತಪ್ಪಿಸಿ ಬೆಲೆ ಏರಿಕೆ ತಡೆಯಬೇಕು ಎಂದು ಆಗ್ರಹಿಸಿದರು. … [Read more...] about ದುಡಿಯುವ ಜನರ ಹಕ್ಕುಗಳ ಮೇಲೆ ದಬ್ಬಾಳಿಕೆ ನಡೆಯುವದನ್ನು ಖಂಡಿಸಿ ; ರಾಷ್ಟ್ರಪತಿಗಳಿಗೆ ಮನವಿ
ನೂತನವಾಗಿ ಸಂಗೀತ ತರಗತಿ ಆರಂಭ
ಕಾರವಾರ: ನಗರದ ಹೈ ಚರ್ಚ ರಸ್ತೆಯಲ್ಲಿ ನೂತನವಾಗಿ ಸಂಗೀತ ತರಗತಿಯನ್ನು ಆರಂಭಿಸಲಾಗಿದೆ. ಸೋಮವಾರ ಸಂಜೆ ಗಾಯಕಿ ಲತಾ ಹೆಗಡೆ ಸಂಗೀತ ತರಗತಿಯನ್ನು ಉದ್ಘಾಟಿಸಿದರು. ಇದಕ್ಕೂ ಮೊದಲು ಶಾರದಾ ಪೂಜೆ ನಡೆಯಿತು. ನಂತರ ಲತಾ ಹೆಗಡೆ ತಂಡದವರಿಂದ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು. ಗಾಯಕರಾದ ಗೌರಿಶ್ ಯಾಜಿ, ತಬಾಲಾ ವಾದಕ ಭಾರ್ಗವ ಹೆಗಡೆ ಭಾಗವಹಿಸಿದ್ದರು. ಪ್ರಮುಖರಾದ ಶ್ಯಾಮಲಾ ಭಟ್ಟ, ಪಿ.ಎಸ್. ಭಟ್ಟ, ಮಾರುತಿ ಕಮಾತ್, ಅಶೋಕ ಶೆಟ್ಟಿ ಕಾರ್ಯಕ್ರಮದಲ್ಲಿದ್ದರು. … [Read more...] about ನೂತನವಾಗಿ ಸಂಗೀತ ತರಗತಿ ಆರಂಭ



