ಯಲ್ಲಾಪುರ: ಸುರಿದ ಮಹಾಮಳೆಗೆ ತಾಲೂಕಿನ ಉಮ್ಮಚಗಿಯ ಬಳಿಯ ತುಡುಗುಣಿಯಿಂದ ಸೂರಿಮನೆಯ ಸಂಪರ್ಕಕ್ಕಿದ್ದ ಏಕೈಕ ರಸ್ತೆಯೇ ತುಡುಗುಣಿ ಬ್ರಿಜ್ಜಿನ ಹತ್ತಿರ ಕುಸಿತವಾಗಿ ಕೊಚ್ಚಿಹೋಗಿತ್ತು. ಅದನ್ನು ಗಮನಿಸಿದ ಊರ ನಾಗರೀಕರು ಸುಮ್ಮನೆ ಕೈಕಟ್ಟಿ ಕೂಡದೇ ಪಂಚಾಯತದ ಸಹಕಾರದೊಂದಿಗೆ ರಸ್ತೆ ಮರುನಿರ್ಮಾಣ ಮಾಡಿ ಮಾದರಿಯಾಗಿದ್ದಾರೆ.ಗ್ರಾಮಸ್ಥರು ಸಂಪರ್ಕ ರಸ್ತೆ ಕುಸಿದರೆ ಧೃತಿಗೆಡದೇ ಒಬ್ಬರ ಮನೆಯಿಂದ ಬುಟ್ಟಿ,ಮತ್ತೊಬ್ಬರ ಮನೆಯಿಂದ ಗುದ್ದಲಿ, … [Read more...] about ಕೊಚ್ಚಿ ಹೋಗಿದ್ದ ಸೂರಿಮನೆಯ ಸಂಪರ್ಕ ರಸ್ತೆ :ಗ್ರಾಮಸ್ಥರ ಸಹಕಾರದಲ್ಲಿ ಮರು ನಿರ್ಮಾಣ
Yellapur
ಬಿಸಗೋಡಭಾಗದಲ್ಲಿ ಹುಲಿ;ಗ್ರಾಮಸ್ಥರಲ್ಲಿ ಭಯ
ಯಲ್ಲಾಪುರ: ತಾಲೂಕಿನ ಆನಗೋಡ ಗ್ರಾ.ಪಂಚಾಯತ ವ್ಯಾಪ್ತಿಯ ಬಿಸಗೋಡ, ಕೊಲ್ಯಾಳ ಭಾಗದಲ್ಲಿ ಹುಲಿ ಜಾನುವಾರುಗಳನ್ನು ಕೊಲ್ಲುತ್ತಿದ್ದು, ಸ್ಥಳೀಯರಲ್ಲಿ ಭಯ ಹೆಚ್ಚಿಸಿದೆ.ಸದಾಶಿವ ಭಟ್ಟ, ರಾಮನಾಥ ಭಟ್ಟ ಇತರರ ತೋಟದ ಬಳಿ ಮೇಯುತ್ತಿದ್ದ 3 ಆಕಳುಗಳನ್ನು ಹುಲಿ ಕೊಂದಿದೆ ಎನ್ನಲಾಗುತ್ತಿದೆ. ಎರಡು ತಿಂಗಳಿಂದ ಆನಗೋಡ ,ಗೇರಾಳ ಸಾವಗದ್ದೆ- ಬರಗದ್ದೆ, ಬಿಸಗೋಡ ಭಾಗದಲ್ಲಿ ನಾಯಿ, ದನಗಳನ್ನು ಹಿಡಿಯುತ್ತಿದೆ. ಹಗಲಿನಲ್ಲೂ ಸ್ಥಳೀಯರಿಗೆ, ಶಾಲಾ ಮಕ್ಕಳಿಗೆ ಕಾಣಿಸಿಕೊಂಡಿದ್ದು, … [Read more...] about ಬಿಸಗೋಡಭಾಗದಲ್ಲಿ ಹುಲಿ;ಗ್ರಾಮಸ್ಥರಲ್ಲಿ ಭಯ
ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು
ಯಲ್ಲಾಪುರ: ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು ಇದರಿಂದ ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಕವಿ ನಾಗೇಶ ನಾಯ್ಕ ಹೇಳಿದರು. ಅವರು ಪಟ್ಟಣದ ಜಿಲ್ಲಾ ಕೇಂದ್ರದ ಶಾಖಾ ಗ್ರಂಥಾಲಯದಲ್ಲಿ ಶನಿವಾರ ಸಂಜೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವನ್ನು ಸರಳವಾಗಿ . ಉಧ್ಘಾಟಿಸಿ ಮಾತನಾಡಿದರು.ಕಾರವಾರದ ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕ ವಿಶ್ರಾಮ ನಾಯಕ ಮಾತನಾಡಿ, ಗ್ರಂಥಾಲಯ ಸಪ್ತಾಹವು ದೇಶಾದ್ಯಂತ … [Read more...] about ಪತ್ರಿಕೆಗಳನ್ನು ಓದುವ ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು
ಜೆ.ಆರ್.ಎಫ್. ಫಲಿತಾಂಶ ಪ್ರಕಟ :ಪವಿತ್ರಮಾತಾ ಭಟ್ ಸಾಧನೆ.
ಯಲ್ಲಾಪುರ.ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ದೇಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ನವರು (ಐ.ಸಿ.ಎ.ಆರ್.) ನಡೆಸಿದ ರಾಷ್ಟ್ರ ಮಟ್ಟದ ಜೆ.ಆರ್.ಎಫ್. ಪರಿಕ್ಷಾ ಫಲಿತಾಂಶ ಮಂಗಳವಾರ ಸಂಜೆ ಪ್ರಕಟವಾಗಿದ್ದು, ಈ ಫಲಿತಾಂಶದಲ್ಲಿ ಯಲ್ಲಾಪುರ ಪಟ್ಟಣದ ಪವಿತ್ರಮಾತಾ ಭಟ್ ಅವರು ದೇಶಮಟ್ಟದಲ್ಲಿ ೩೨ ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಸ್ಯ ವಿಜ್ಞಾನ (ಪ್ಲಾಂಟ್ ಸೈನ್ಸ್) ವಿಭಾಗದಲ್ಲಿ ಇವರಿಗೆ ಈ ರ್ಯಾಂಕ್ ದೊರೆತಿದೆ. ದೇಶದ ವಿವಿದೆಡೆಯ ೩೦ … [Read more...] about ಜೆ.ಆರ್.ಎಫ್. ಫಲಿತಾಂಶ ಪ್ರಕಟ :ಪವಿತ್ರಮಾತಾ ಭಟ್ ಸಾಧನೆ.
ಇಂದಿನಿಂದ ಮಂಚಿಕೇರಿಯಲ್ಲಿ ‘ಕಾಲಚಕ್ರ’ ವಿಶೇಷ ರಂಗಪ್ರಯೋಗ
ಯಲ್ಲಾಪುರ: ತಾಲೂಕಿನ ಮಂಚೀಕೇರಿಯರಂಗ ಸಮೂಹ ಇವರ ಆಶ್ರಯದಲ್ಲಿ ರಂಗ ಪ್ರದರ್ಶನ ‘ಕಾಲ ಚಕ್ರ’ ನಾಟಕ ಪ್ರದರ್ಶನ ನ. 17 ರಿಂದ 20 ರ ವರೆಗೆ ನಡೆಯಲಿದೆ. ಮಂಚಿಕೇರಿ ಸಮೀಪದ ಜೋಗಭಟ್ರಕೇರಿಯ ‘’ ಜಿ. ಎನ್. ಶಾಸ್ತ್ರಿ ಯವರ ನಂದನಂ ಮನೆಯಲ್ಲಿ ಪ್ರತಿದಿನ ಸಂಜೆ ನಡೆಯಲಿದೆ.ನಾಟಕದ ರಚನೆಯ ಮೂಲ ಮರಾಠಿಯ ಜೈವಂತ ದಳ್ವಿಯವರಾಗಿದ್ದು, ಕನ್ನಡಕ್ಕೆ ಎಚ್. ಕೆ. ಕರ್ಕೆರಾ ಅನುವಾದಿಸಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಹುಲುಗಪ್ಪ ಕಟ್ಟಿಮನಿ ಮಾಡಲಿದ್ದು, ಸಹ … [Read more...] about ಇಂದಿನಿಂದ ಮಂಚಿಕೇರಿಯಲ್ಲಿ ‘ಕಾಲಚಕ್ರ’ ವಿಶೇಷ ರಂಗಪ್ರಯೋಗ




