ಯಲ್ಲಾಪುರ : ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಜಿಲ್ಲೆಯ ೬ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಇ-ಸ್ವತ್ತು ಹಾಗೂ ತೆರಿಗೆ ಪರಿಷ್ಕರಣೆಯ ಕುರಿತು ತರಬೇತಿ ಕಾರ್ಯಗಾರ ನಡೆಯಿತು. ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಜಕ್ಕಪ್ಪಗೊಳ ಸಸಿಗೆ ನೀರೆರೆಯುವ ಮೂಲಕ ತರಬೇತಿಗೆ ಚಾಲನೆ ನೀಡಿದರು. ಗ್ರಾಮಾಭಿವೃದ್ಧಿ ಮತ್ತು ಪಂ. ರಾಜ್ ಆಯುಕ್ತಾಲಯದ ಉಪ ನಿರ್ದೇಶಕ ಕೆ.ಜಿ. ಜಗದೀಶ ಹಾಗೂ ತಮಕೂರು ಜಿಲ್ಲಾ ಪಂಚಾಯತ ಅಭಿವೃದ್ಧಿ … [Read more...] about ಇ-ಸ್ವತ್ತು ಹಾಗೂ ತೆರಿಗೆ ಪರಿಷ್ಕರಣೆಯ ಕುರಿತು ತರಬೇತಿ
Yellapur
ವ್ಯಕ್ತಿಗೆ ಹಾವು ಕಡಿತ
ಯಲ್ಲಾಪುರ: ತಾಲ್ಲೂಕಿನ ಬೊಂಬಡಿಕೊಪ್ಪದಲ್ಲಿ 21 ವರ್ಷದ ವ್ಯಕ್ತಿಯೊರ್ವನಿಗೆ ಹಾವೊಂದು ಮೂತ್ರ ವಿಸರ್ಜಿಸುವ ಜಾಗಕ್ಕೆ ಕಚ್ಚಿದ್ದು, ಚಿಕಿತ್ಸೆಗಾಗಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.ತಾಲ್ಲೂಕಿನ ಬೊಂಬಡಿ ಕೊಪ್ಪದಲ್ಲಿ 21 ವರ್ಷದ ವ್ಯಕ್ತಿಯೋರ್ವನು ಬಯಲಲ್ಲಿ ಕುಳಿತಿರುವಾಗ ಹುಲ್ಲಿನ ಮದ್ಯದಲ್ಲಿದ್ದ ಹಾವೊಂದು ಮರ್ಮಾನಂಗಕ್ಕೆ ಕಚ್ಚಿದ್ದು, ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದರು.ಚಿಕಿತ್ಸೆ ನೀಡಿದ ವೈದ್ಯರು … [Read more...] about ವ್ಯಕ್ತಿಗೆ ಹಾವು ಕಡಿತ
ಕಾಣೆಯಾಗಿದ್ದ ವ್ಯಕ್ತಿ, ಜೋಡುಕೆರೆಯಲ್ಲಿ ಶವವಾಗಿ ಪತ್ತೆ
ಯಲ್ಲಾಪುರ: ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಪಟ್ಟಣದ ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಮೃತ ವ್ಯಕ್ತಿಯನ್ನು ನೂತನನಗರ ಜಡ್ಡಿಯ ಜಮಾಲ್ ಸಾಬ್ ಅಮೀರಸಾಬ ಬೇಪಾರಿ (55) ಎಂದು ಗುರುತಿಸಲಾಗಿದೆ. ಸಾಲ ಹೆಚ್ಚಾದ ಕಾರಣಕ್ಕಾಗಿ ಕುಡಿಯುವ ಚಟ ರೂಢಿಸಿಕೊಂಡಿದ್ದ ಈತ, ಬೇರೆ ಬೇರೆ ರೋಗಗಳಿಂದ ಬಳಲುತ್ತಿದ್ದ. ಎಷ್ಟೇ ಔಷಧೋಪಚಾರ ಮಾಡಿದರೂ ವಾಸಿಯಾಗದೇ ಇರುವುದರಿಂದ ನೊಂದು ಮನೆಯಿಂದ ಹೊರಹೋಗಿದ್ದು, ಜೋಡುಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಪೆÇಲೀಸರು ಹಾಗೂ ಅಗ್ನಿಶಾಮಕ … [Read more...] about ಕಾಣೆಯಾಗಿದ್ದ ವ್ಯಕ್ತಿ, ಜೋಡುಕೆರೆಯಲ್ಲಿ ಶವವಾಗಿ ಪತ್ತೆ
ಯಲ್ಲಾಪುರದಲ್ಲಿ ಸಂಭ್ರಮದ ಶರನ್ನವರಾತ್ರಿ
ಯಲ್ಲಾಮರ : ವಿವಿಧ ದೇವಿ ದೇವಸ್ಥಾನಗಳಲ್ಲಿ ಶರನ್ನವರಾತ್ರಿ ಉತ್ಸವವು ಸಂಭ್ರಮ ಸಡಗರದಿಂದ ದಿಂದ ಆರಂಭವಾಗಿದೆ. ಪಟ್ಟಣದ ಗ್ರಾಮದೇವಿ ದೇವಾಲಯ,ಕಾಳಮ್ಮ ನಗರದ ಕಾಳಮ್ಮ ದೇವಸ್ಥಾನ,ಕೋಟೆ ಕರಿಯವ್ವ ದೇವಸ್ಥಾನ,ನಾಯಕನಕೆರೆ ಶಾರದಾಂಬಾ ದೇವಾಲಯ,ಕವಡಿಕೆರೆ ದುರ್ಗಾಂಬಾ ದೇವಾಲಯ, ಮುಂತಾದ ದೇವಾಲಯಗಳಲ್ಲಿ ಶರನ್ನವರಾತ್ರಿಯ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.ಸಪ್ತಶತಿ ಪಾರಾಯಣ,ಕುಂಕುಮಾರ್ಚನೆ, ಉಡಿಸೇವೆ ಮುಂತಾದವು ಗಳು ನಡೆಯುತ್ತಿದ್ದು, … [Read more...] about ಯಲ್ಲಾಪುರದಲ್ಲಿ ಸಂಭ್ರಮದ ಶರನ್ನವರಾತ್ರಿ
ಬಿಜೆಪಿ ಜನಸ್ನೇಹಿ ಪರಿವಾರವಾಗಿದೆ .
ಯಲ್ಲಾಪುರ : ರಾಜ್ಯ ಹಾಗೂ ರಾಷ್ಟç ಎರಡೂ ಕಡೆಯೂ ಆಡಳಿತ ಚುಕ್ಕಾಣಿ ಬಿಜೆಪಿ ಕೈಯಲ್ಲಿದೆ. ಆದನ್ನು ಮೋದಿಯವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಡೆಸಿಕೊಂಡು ಹೋಗಲಾಗುತ್ತಿದೆ. ಅಂತೆಯೇ ಮುಂಬರುವ ಸ್ಥಳೀಯ ಚುನಾವಣೆಯಿಂದ ಹಿಡಿದು ವಿಧಾನ ಪರಿಷತ್ ಚುನಾವಣೆಯವರೆಗೂ ಕಾರ್ಯಕರ್ತರೆಲ್ಲರೂ ಇನ್ನಷ್ಟು ಶ್ರಮ ವಹಿಸಿ, ಪಕ್ಷ ಕಟ್ಟುವ ಕಾರ್ಯ ಮಾಡಬೇಕು ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಗಿರೀಶ ಪಟೇಲ್ ತಿಳಿಸಿದರು.ಅವರು ಪಟ್ಟಣದ ಅಡಿಕೆ ಭವನದಲ್ಲಿ ಬಿಜೆಪಿ ಉತ್ತರಕನ್ನಡ … [Read more...] about ಬಿಜೆಪಿ ಜನಸ್ನೇಹಿ ಪರಿವಾರವಾಗಿದೆ .




