ದಾಂಡೇಲಿ:
ಹೆಚ್ಚಿಸಿರುವ ಕುಡಿಯುವ ನೀರಿನ ದರ ಪರಿಷ್ಕರಿಸಿ ಇಳಿಕೆ ಮಾಡುವಂತೆ ಒತ್ತಾಯಿಸಿ ಗುರುವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರಸಭೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಸಂದರ್ಭಲ್ಲಿ ದಾಂಡೇಲಿ ತಾಲೂಕು ರಚನಾ ಸಮಿತಿಯ ಕಾರ್ಯದರ್ಶಿ ಅಕ್ರಂ ಖಾನ್, ಮುಖಂಡರಾದ ಫಿರೋಜ್ ಫಿರ್ಜಾದೆ ಮುಂತಾದವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಭಟನಾ ಸ್ಥಳಕ್ಕೆ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕೆಯವರು ಪೌರಾಯುಕ್ತ ಆರ್.ವಿ, ಜತ್ತಣ್ಣ ಅವರ ಜೊತೆ ಬೇಟಿ ನೀಡಿ ಮನವಿ ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ನಾಗೇಶ ಸಾಳುಂಕಯವರು ಸರಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಆದರೆ ನಾವೂ ಸಹ ಜನರ ಪರವಾಗಿಯೇ ಇದ್ದೇವೆ ಎಂದರು. ನಗರಸಭಾ ಅಧ್ಯಕ್ಷರ ಕೊಠಡಿಯಲ್ಲಿ ಪ್ರತಿಭಟನಾ ನಿರತ ಪ್ರಮುಖರು ಹಾಗೂ ನಗರಸಭಾ ಅಧ್ಯಕ್ಷರು ಮತ್ತು ಪೌರಾಯುಕ್ತರು ಸಭೆ ನಡೆಸಿದರು. ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ನೀರಿನ ಸಮಸ್ಯೆ ಮತ್ತು ಹೆಚ್ಚುವರಿ ಕರದ ಕುರಿತಂತೆ ಹಲವು ಚರ್ಚೆಗಳು ನಡೆದವು. ನಗರಸಭಾ ಅಧ್ಯಕ್ಷರು ಮತ್ತು ಪೌರಾಯುಕ್ತರು ತಮ್ಮ ಸಮಜಾಯಿಶಿ ನೀಡಿದರು. ಈ ಸಂದರ್ಭದಲ್ಲಿ ಅಕ್ರಂ ಖಾನ್ ಮತ್ತು ಪೀರೋಜ್ ಫಿರ್ಜದೆಯವರು 120 ರೂ ಇದ್ದ ನೀರಿನ ಕರವನ್ನು ಏಕಾ ಏಕಿ 180 ರೂ ಏರಿಕೆ ಮಾಡಿದ್ದನ್ನು ಆಕ್ಷೇಪಿಸಿದರು. ಸರಕಾರದ ಆದೇಶವಮ್ಮು ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವ ಬಗ್ಗೆ, ಸಾರ್ವಜನಿಕರಿಂದ ದಂಡ ಆಕರಿಸಿರುವ ಬಗ್ಗೆ, ನಗರಸಭೆಯ ವೈಫಲ್ಯದ ಬಗ್ಗೆ ಮಾತನಾಡಿದರು. ದಿನದ 24 ಗಂಟೆ ನೀರು ಪೂರೈಕೆ ಮಾಡುಂತೆ, ಹಾಗೂ ನಗರಸಭೆಯವರೇ ಮೀಟರ ಅಳವಡಿಸಿ ನೀರು ಸರಬರಾಜು ಮಾಡುವಂತೆ ಹಾಗೂ ಬೇರೆ ನಗರಗಳಲ್ಲಿರುವಂತೆ ದಾಂಡೇಲಿಯಲ್ಲಿಯೂ ನೀರಿನ ಕರವನ್ನು ಕಡಿಮೆ ಇಡುವಂತೆ ಒತ್ತಾಯಿಸಿದರು. ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರಸಭಾ ಅಧ್ಯಕ್ಷ ಅದು ಈಗಿಂದೀಗ ಆಗುವ ಕೆಲಸವಲ್ಲ. ನಾವು ಈಗಾಗಲೇ ಹಿಂದಿನ ಸಭೆಯಲ್ಲಿ ದರ ಪರಿಷ್ಕರಣೆಯ ಬಗ್ಗೆ ಹಾಗೂ ನೀರಿನ ಕರ ಕಡಿಮೆ ಮಾಡುವ ಬಗ್ಗೆ ಠರಾಯಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೇವೆ. ಈಗಲೂ ಮತ್ತೆ ಮೇ 20 ರೊಳಗೆ ನಗರಸಭಾ ಸದಸ್ಯರ ವಿಶೇಷ ಸಭೆಯೊಂದನ್ನು ಕರೆದು ಈ ಬಗ್ಗೆ ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇನೆಂಬ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಅಕ್ರಂ ಖಾನ್, ಫಿರೋಜ್ ಫೀರ್ಜಾದೆ, ಹಿ ವಿ.ಎ. ಕೋನಾಪುರಿ, ಅಶೋಕ ಪಾಟೀಲ, ಟಿ.ಎಸ್. ನಾಯ್ಕ, ಬಲವಂತ ಬೊಮ್ನಳ್ಳಿ, ಸಿ.ಎ. ಲೋಬೋ, ಮುಜಿಬಾ ಛಬ್ಬಿ, ರೇಣುಕಾ ಬಂದಂ, ರಫಿಕ್ ಹುದ್ದಾರ, ಅಬ್ದುಲ್ ವಹಾಬ್ ಬಾಂಸುರಿ, ಗೌರೀಶ ಬಾಬ್ರೇಕರ, ಮೀನಾಕ್ಷಿ ಬಡಿಗೇರ, ರಾಜೇಸಾಬ ಕೇಸನೂರ ಮುಂತಾದವರಿದ್ದರು. ಪಿ.ಎಸ್.ಐ ಕುಮಾರ ಹಾಡಕರ ಹಾಗೂ ಸಿಬ್ಬಂದಿಗಳು ಬಂದೋಬಸ್ತ ನೀಡಿದ್ದರು.
Leave a Comment