ಹೊನ್ನಾವರ;
ಶನಿವಾರ ಸಂತೆಗೆ ವ್ಯಾಪಾರಕ್ಕೆ ಹೋದಾಗ 29 ಗ್ರಾಂ ತೂಕದ ಅಂದಾಜು 1 ಲಕ್ಷ ರೂಪಾಯಿ ಬೆಲೆ ಬಾಳುವ ಮಂಗಳಸೂತ್ರದಂತಹ ಚಿನ್ನದ ಸರವನ್ನು ರಾಘವೇಂದ್ರ ಹೊನ್ನಪ್ಪ ನಾಯ್ಕ ಎಂಬುವವರು ಪೋಲಿಸ್ ತಾಬಾ ಒಪ್ಪಿಸಿದ್ದಾರೆ.
ಇವರು ಕುಮಟಾ ತಾಲೂಕಿನ ವನ್ನಳ್ಳಿಯ ರಾಘವೇಂದ್ರ ನಾಯ್ಕ ಹೊನ್ನಾವರದಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡಿದ್ದು ಸಂತೆಗೆ ಹೋದಾಗ ಚಿನ್ನದ ಸರ ಸಿಕ್ಕಿದ್ದು ಇದನ್ನು ಯಾರದೆಂದು ಕೇಳಿ ಸಂತೆ ಇಡೀ ತಿರುಗಾಡಿದ್ದಾನೆ ಎರಡು ದಿನ ತಮ್ಮಲ್ಲಿ ಇಟ್ಟುಕೊಂಡು ಯಾರಾದರು ಬರಬಹುದು ಎಂದು ಕಾದಿದ್ದಾರೆ. ಅವರ ವಕೀಲ ಎಸ್.ಎಮ್.ಭಟ್ (ಕಟ್ಟೆ) ಇವರ ಸಲಹೆಯಂತೆ ಅವರ ಜೊತೆ ಹೋಗಿ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಸರ ನಾಪತ್ತೆಯಾದ ಯಾವ ದೂರು ದಾಖಲಾಗಿಲ್ಲ. ರಾಘವೇಂದ್ರ ನಾಯ್ಕ ಇವರ ಪ್ರಾಮಾಣಿಕತೆ ಅಭಿನಂದನೆಗೆ ಅರ್ಹವೆನಿಸಿದ್ದಾರೆ.
Leave a Comment