ಕಾರವಾರ:
ಕುಮಟಾದ ಹಿರೆಗುತ್ತಿಯಲ್ಲಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ದೂರು ದಾಖಲಿಸಿದರು ಯಾವುದೇ ಕ್ರಮವಾಗಿಲ್ಲ. ಆದರೆ ಇದೀಗ ಅದೇ ಪೊಲೀಸರು ಮತ್ತೆ ಮನೆಗೆ ಬಂದು ದೂರು ವಾಪಸ್ಸ್ ಪಡೆಯುವಂತೆ ಪಿಡಿಸುತ್ತಿದ್ದು, ಜತೆಗೆ ಜೀವಬೇದರಿಕೆ ಕೂಡ ಹಾಕಿದ್ದಾರೆ ಎಂದು ಆರೋಪಿಸಿ ಹಲ್ಲೆಗೋಳಗಾದ ಕುಟುಂಬದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬುಧವಾರ ದೂರು ನೀಡಿದ್ದಾರೆ.
ಟ್ರಾಫಿಕ್ ಪೊಲೀಸರಾದ ಮೋಹನ್ ಗೌಡ ಮತ್ತು ನಿತ್ಯ ಎಂಬುವವರು ಅಪರಿಚಿತ ಮೂವರ ಜತೆ ಮೇ. 13 ರಂದು ಬೆಳಿಗ್ಗೆ 3. 10ರ ಸುಮಾರಿಗೆ ಮನೆಗೆ ಬಂದು ತಮ್ಮ ವಿರುದ್ಧ ನೀಡಿದ ದೂರನ್ನು ವಾಪಸ್ಸ್ ಪಡೆಯುವಂತೆ ಒತ್ತಾಯಿಸಿದರು. ಇದನ್ನು ನಿರಾಕರಿಸಿದಾಗ ನಮಗೆ ಬೆದರಿಕೆ ಒಡ್ಡಿ, ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರೆ ಅಲ್ಲಿ ಎನ್ಸಿ ದಾಖಲಿಸಿದ್ದಾರೆ ಎಂದು ಪ್ರಸ್ತಾಪಿಸಿದ್ದಾರೆ ಎಂದರು. ಪ್ರಕರಣವನ್ನು ಪೋಲಿಸರು ವಿನಾಃ ಕಾರಣ ವಿಳಂಭ ಮಾಡುತ್ತಿದ್ದಾರೆ. ದೂರು ದಾಖಲಿಸಲು ತೆಳಿದಾಗ ನಮ್ಮ ಮೇಲೆ ಒತ್ತಡ ಹಾಕಿ ಸತಾಯಿಸಲಾಗಿದೆ. ಆದರೆ ಇದೀಗ ಆರೋಪಿಗಳು ಪೊಲೀಸರ ಮುಂದೆ ಹಾಜರಾದರು ಅವರನ್ನು ಬಂಧಿಸದೆ ಮುಚ್ಚಳಿಕೆ ಬರೆಸಿಕೊಂಡು ಬಿಡಲಾಗಿದೆ. ಅಲ್ಲದೆ ಕುಮಟಾ ಸಿಪಿಐ ಹಾಗೂ ಗೋಕರ್ಣದ ಪಿಎಸ್ಐ ತಪ್ಪಿತಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ತನಿಖಾಧಿಕಾರಿಯನ್ನು ಬದಲಿಸಬೇಕು. ಹಿರೆಗುತ್ತಿ ಪೊಲೀಸ್ ಠಾಣೆಯಲ್ಲಿರುವ ಸಿಸಿಟಿವಿ ಪುಟೇಜ್ ಪರಿಶೀಲಿಸಬೇಕು. ಜತೆಗೆ ತಮ್ಮ ಮೊಬೈಲ್ನ ಹೊರ ಹಾಗೂ ಒಳ ಬಂದ ಕರೆಗಳನ್ನು ಸಾಕ್ಷ್ಯಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸ್ ಇಲಾಖೆಯ 100 ಸಹಾಯವಾಣಿಯ ಸಿಬ್ಬಂದಿಗಳಿಗೆ ದೂರು ನೀಡಿದರೆ ಅವರು ಆರೋಪಿತರಿಗೆ ಮಾಹಿತಿ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ತಪ್ಪಿತಸ್ಥ ಇತರ ಅಧಿಕಾರಿಗಳನ್ನು ಕೂಡಲೇ ಬಂದಿಸಬೇಕು. ಪೊಲೀಸ್ ದೂರು ದಾಖಲಿಸಿಕೊಳ್ಳದ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪೊಲೀಸರು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುತ್ತಿದ್ದು, ನಮ್ಮ ಕುಟುಂಬಕ್ಕೆ ಜೀವ ಬೇದರಿಕೆ ಒಡ್ಡಿದ್ದಾರೆ. ಪ್ರಕರಣವನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
Leave a Comment