ದಾಂಡೇಲಿ :
ಕಳೆದ ಹಲವಾರು ವರ್ಷಗಳಿಂದ ವಿವಿಧ ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಉತ್ತರಕನ್ನಡ ಜಿಲ್ಲೆ ಹಾಗೂ ಬೆಂಗಳೂರಿನ ಜಯದೇವ ಹೃದೋಗ ಆಸ್ಪತ್ರೆ ಇವರ ಸಹಯೋಗದೊಂದಿಗೆ ಮೇ: 20 ರಂದು ಶನಿವಾರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಹಳಿಯಾಳ ತಾಲೂಕಿನ ಸಾಂಬ್ರಾಣಿಯಲ್ಲಿರುವ ಶ್ರೀ.ಸತ್ಯಸಾಯಿ ಗ್ರಾಮ ಸೇವಾ ಕೇಂದ್ರ ಇಲ್ಲಿ ಉಚಿತ ಹೃದೋಗ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೃದಯ ರೋಗದ ಪ್ರಮುಖ ಲಕ್ಷಣಗಳಾದ ಎದೆ ನೋವು, ಎದೆ ಬಡಿತ, ಹೆಚ್ಚು ಮೈ ಬೆವರು, ಉಸಿರಾಡಲು ತೊಂದರೆ, ಕಣ್ಣು ಕತ್ತಲೆ ಕಟ್ಟುವುದು, ತಲೆ ಸುತ್ತು, ಪ್ರಜ್ಞೆ ತಪ್ಪುವುದು, ಆಯಾಸ ಮತ್ತು ಎದೆಯುಸಿರು, ಮಧುಮೇಹ, ಥೈರಾಯ್ಡ್ ಕಾಯಿಲೆ, ಕೊಲೆಸ್ಟ್ರಾಲ್ ಕಾಯಿಲೆ ಇರುವಂತಹ ವ್ಯಕ್ತಿಗಳು ಸಹ ಈ ಶಿಬಿರÀದಲ್ಲಿ ಭಾಗವಹಿಸಬಹುದಾಗಿದ್ದು, ವಿಶೇಷ ಕಾಯಿಲೆ ಇರುವವರು ವೈದ್ಯಕೀಯ ವರದಿ ಇದ್ದಲ್ಲಿ ತರಬೇಕು ಹಾಗೂ ಚಿಕಿತ್ಸೆಗೆ ಬರುವವರು ಒಬ್ಬ ಸಹಾಯಕನನ್ನು ಕರೆ ತರಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Leave a Comment