• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಣಕು ಕಾರ್ಯಾಚರಣೆ

May 19, 2017 by Sachin Hegde Leave a Comment

ಕಾರವಾರ:

ಭೂಸೇನೆ, ವಾಯು ಸೇನೆ, ನೌಕಾನೆಲೆ, ಕರಾವಳಿ ಕಾವಲು ಪಡೆ ಹಾಗೂ ತಟರಕ್ಷಕಾ ಪಡೆಯವರು ಕದಂಬ ನೌಕಾನೆಲೆ ಹಾಗೂ ರವಿಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಶುಕ್ರವಾರ ಸುನಾಮಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ನಡೆಸಿದರು. 1500ಕ್ಕೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಬಳಸುವ ವಿಧಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕರಾವಳಿ ಕಾರುಣ್ಯ ಎಂಬ ಹೆಸರಿನಡಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಸುನಾಮಿಯಂತಹ ಪೃಕೃತಿ ವಿಕೋಪದ ಸನ್ನಿವೇಶಗಳಲ್ಲಿ ಕೈಗೊಳ್ಳಬೇಕಾದ ತುರ್ತು ಪರಿಸ್ಥಿತಿಗಳ ಕುರಿತು ತಿಳುವಳಿಕೆ ಮೂಡಿಸಿದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಣಕು ಕಾರ್ಯಾಚರಣೆ ನಡೆಸಲಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಪ್ರಧಾನ ಮಂತ್ರಿ ಸಲಹೆ ಮೇರೆಗೆ ಇದನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಕಚೇರಿ ಸೂಚನೆ ಮೇರೆಗೆ ಈ ಕಾರ್ಯಾಚರಣೆ ಶುರುವಾಗಿದೆ. ಅಪಾಯದ ಸನ್ನಿವೇಶಗಳು ಎದುರಾದಾಗ ಅಲ್ಲಿಗೆ ಧಾವಿಸುವ ಸಿಬ್ಬಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ನಂತರ ಊಟ ವಸತಿ ಒದಗಿಸಲಾಗುತ್ತದೆ. ನಂತರ ಬಟ್ಟೆಗಳನ್ನು ಪೂರೈಸಲಾಗುತ್ತದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹುಲ್ ಸಿನಾ: ತಿಳಿಸಿದರು. ಪಶ್ಚಿಮ ಕರಾವಳಿ ತೀರ ಪ್ರದೇಶದಲ್ಲಿ ಶುಕ್ರವಾರ ಸುನಾಮಿ ಉಂಟಾದಾಗ ಕರಾವಳಿ ಜನರ ಜೀವರಕ್ಷಣೆಯ ಕಾರ್ಯ ನಿಭಾಯಿಸುವ ಬಗ್ಗೆ ಅಧಿಕಾರಿಗಳು ತರಭೇತಿ ಪಡೆದರು. ಸುನಾಮಿ ಅಣಕು ಕಾರ್ಯಚರಣೆ ಪ್ರಾತ್ಯಕ್ಷಿತೆಯನ್ನು ಕದಂಬ ನೌಕಾ ನೆಲೆಯಲ್ಲಿ ನಡೆಸಿ ಸುನಾಮಿಯಲ್ಲಿ ಸಿಲುಕಿಕೊಂಡಿದ್ದ 19 ಜನರ ಜೀವವನ್ನು ಭಾರತೀಯ ವಾಯುಸೇನಾದ ಡೋನಿಯರ ಏರ್‍ಕ್ರಾಫ್ಟ ಮೂಲಕ ರಕ್ಷಿಸಲಾಯಿತು. ನಂತರ ಜೇಮಿನಿ ಕ್ರಾಫ್ಟ ಮೂಲಕ 20 ಜನರ ಜೀವರಕ್ಷಣೆಯೊಂದಿಗೆ ಸುನಾಮಿ ಆರ್ಭಟಕ್ಕೆ ಸಿಲುಕಿ ಸಾವಿಗಿಡಾದವರ ಶವಗಳನ್ನು ತೀರಕ್ಕೆ ತಂದು ಸಂ¨ಂಧಿಸಿದ ಸಂಭಂದಿಗಳಿಗೆ ನೌಕಾ ದಳ ಸಿಬ್ಬಂದಿಗಳು ಹಸ್ತಾಂತರಿಸಿದರು. ಭಾರತೀಯ ವಾಯುಸೇನಾದ ಚೇತನ ಹೆಲಿಕ್ಯಾಪ್ಟರ್ ಮೂಲಕ ಸಮುದ್ರದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮೇಲೆಕೆತ್ತಿ ರಕ್ಷಿಸಲಾಯಿತು. ಐ.ಎನ್.ಎಸ್ ತಿಲಾಂಚಲ್ ಹಡಗು ಪ್ರತಿ ಗಂಟೆಗೆ 60 ಕೀ.ಮಿ ವೇಗದಲ್ಲಿ ಚಲಿಸಿ ಸಂಕಷ್ಟಕ್ಕೊಳಕ್ಕಾದ ಸಂತ್ರಸ್ತರನ್ನು ರಕ್ಷಿಸಿತು. ಸುನಾಮಿ ರಕ್ಷಣಾ ಕಾಯಾಚರಣೆಯ ವಿಕ್ಷಣೆಯನ್ನು ಹಿರಿಯ ಅಡ್ಮಿರಲ್ ಕೆ.ಜೆ.ಕುಮಾರ. ಕರ್ನಾಟಕ ನೌಕಾ ಪ್ರದೇಶದ ಫ್ಲ್ಯಾಗ್ ಆಫೀಸರ್, ಭಾರತದ ವಿವಿಧ ಭಾಗಗಳಿಂದ ಮತ್ತು ಭಾಂಗ್ಲಾದೇಶ, ಮಿಯಾನ್ಮಾರ್, ಮಾಲ್ಡಿವ್ ಹಾಗೂ ಶ್ರೀಲಂಕಾ ದೇಶಗಳಿಂದ ಬಂದಿz ರಕ್ಷನಾ À್ದ ಪ್ರತಿನಿದಿಗಳು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿ.ಇ.ಒ ಎಲ್ ಚಂದ್ರಶೇಖರ ನಾಯಕ. ಅಪರ ಜಿಲ್ಲಾಧೀಕಾರಿ ಹೆಚ್. ಪ್ರಸನ್ನ, ವಿಕ್ಷಿಸಿದರು.
ಕರಾವಳಿ ಕಾರುಣ್ಯ ಎಂಬ ಸುನಾಮಿ ಅಣಕು ಕಾಯಾಚರಣೆಯ ಪ್ರಯುಕ್ತ ರವಿಂದ್ರನಾಥ ಕಡ;ಲ ತೀರದಲ್ಲೂ ಸಹ ಸುನಾಮಿ ಕಾರ್ಯಾಚರಣೆ ನಡೆಸಲು ವಿವಿಧ ಮಳಿಗೆಗಳಾದ ತುರ್ತು ಚಿಕಿತ್ಸಾ ಘಟಕ, ವೌದ್ಯಾಧಿಕಾರಿಗಳ ತಂಡ, ಪ್ರಥಮ ಚಿಕಿತ್ಸೆ, ಸಂಚಾರಿ ಪ್ರಯೋಗಾಲಯ, ಮಹಿಳಾ ಸಂತ್ರಸ್ತರ ವಾರ್ಡ, ಪುರುಷ ಸಂತ್ರಸ್ತರ ವಾರ್ಡ, ಪಡಿತರ ವಿತರಣೆ ದಾಸ್ತಾನು, ಅಡುಗೆ ಮನೆ ಮಾಹಿತಿ ಸಂಪರ್ಕ ಕೇಂದ್ರ ಹಾಕಲಾಗಿತ್ತು. ಈ ಮಳಿಗೆಗಳು 2ಸಾವೀರ ಸಂತ್ರಸ್ತರನ್ನು 7ದಿನವರೆಗೆ ಸೇವೆ ಒದಗಿಸುವ ಸಾಮತ್ರ್ಯ ಹೊಂದಿದ್ದವು. ಎನ.ಸಿ.ಸಿ. ಶಿಬಿರಾರ್ಥಿಗಳು ಸಂತ್ರಸ್ತರಿಗೆ ವೈದ್ಯರಿಂದ ತುರ್ತು ಚಿಕಿತ್ಸೆ ಕೊಡಿಸುವ ಪ್ರಾತ್ಯಕ್ಷಿತೆಯನ್ನು ಪ್ರಸ್ತುತಪಡಿಸಿದರು.

watermarked H19 KAR02B watermarked H19 KAR02

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, National News Tagged With: army, helicopter, Karwar, ಅಣಕು, ಕಡಲತೀರ, ಕದಂಬ ನೌಕಾನೆಲೆ, ಕರಾವಳಿ ಕಾವಲು ಪಡೆ, ಕಾರವಾರ, ಕಾರ್ಯಾಚರಣೆ, ಜೀವರಕ್ಷಣೆ, ತಿಲಾಂಚಲ್ ಹಡಗು, ನೌಕಾ ನೆಲೆ, ನೌಕಾನೆಲೆ, ಪ್ರಧಾನ ಮಂತ್ರಿ, ಭೂಸೇನೆ, ರವಿಂದ್ರನಾಥ ಟ್ಯಾಗೋರ, ವಾಯು ಸೇನೆ, ಸುನಾಮಿ, ಹಾಗೂ, ಹೆಲಿಕ್ಯಾಪ್ಟರ್

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...