ಕಾರವಾರ:
ಭೂಸೇನೆ, ವಾಯು ಸೇನೆ, ನೌಕಾನೆಲೆ, ಕರಾವಳಿ ಕಾವಲು ಪಡೆ ಹಾಗೂ ತಟರಕ್ಷಕಾ ಪಡೆಯವರು ಕದಂಬ ನೌಕಾನೆಲೆ ಹಾಗೂ ರವಿಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಶುಕ್ರವಾರ ಸುನಾಮಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ನಡೆಸಿದರು. 1500ಕ್ಕೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಬಳಸುವ ವಿಧಾನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಕರಾವಳಿ ಕಾರುಣ್ಯ ಎಂಬ ಹೆಸರಿನಡಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಸುನಾಮಿಯಂತಹ ಪೃಕೃತಿ ವಿಕೋಪದ ಸನ್ನಿವೇಶಗಳಲ್ಲಿ ಕೈಗೊಳ್ಳಬೇಕಾದ ತುರ್ತು ಪರಿಸ್ಥಿತಿಗಳ ಕುರಿತು ತಿಳುವಳಿಕೆ ಮೂಡಿಸಿದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಣಕು ಕಾರ್ಯಾಚರಣೆ ನಡೆಸಲಾಗಿದ್ದು, ಮೂರು ದಿನಗಳ ಕಾಲ ನಡೆಯಲಿದೆ. ಪ್ರಧಾನ ಮಂತ್ರಿ ಸಲಹೆ ಮೇರೆಗೆ ಇದನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ಕಚೇರಿ ಸೂಚನೆ ಮೇರೆಗೆ ಈ ಕಾರ್ಯಾಚರಣೆ ಶುರುವಾಗಿದೆ. ಅಪಾಯದ ಸನ್ನಿವೇಶಗಳು ಎದುರಾದಾಗ ಅಲ್ಲಿಗೆ ಧಾವಿಸುವ ಸಿಬ್ಬಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ, ನಂತರ ಊಟ ವಸತಿ ಒದಗಿಸಲಾಗುತ್ತದೆ. ನಂತರ ಬಟ್ಟೆಗಳನ್ನು ಪೂರೈಸಲಾಗುತ್ತದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಹುಲ್ ಸಿನಾ: ತಿಳಿಸಿದರು. ಪಶ್ಚಿಮ ಕರಾವಳಿ ತೀರ ಪ್ರದೇಶದಲ್ಲಿ ಶುಕ್ರವಾರ ಸುನಾಮಿ ಉಂಟಾದಾಗ ಕರಾವಳಿ ಜನರ ಜೀವರಕ್ಷಣೆಯ ಕಾರ್ಯ ನಿಭಾಯಿಸುವ ಬಗ್ಗೆ ಅಧಿಕಾರಿಗಳು ತರಭೇತಿ ಪಡೆದರು. ಸುನಾಮಿ ಅಣಕು ಕಾರ್ಯಚರಣೆ ಪ್ರಾತ್ಯಕ್ಷಿತೆಯನ್ನು ಕದಂಬ ನೌಕಾ ನೆಲೆಯಲ್ಲಿ ನಡೆಸಿ ಸುನಾಮಿಯಲ್ಲಿ ಸಿಲುಕಿಕೊಂಡಿದ್ದ 19 ಜನರ ಜೀವವನ್ನು ಭಾರತೀಯ ವಾಯುಸೇನಾದ ಡೋನಿಯರ ಏರ್ಕ್ರಾಫ್ಟ ಮೂಲಕ ರಕ್ಷಿಸಲಾಯಿತು. ನಂತರ ಜೇಮಿನಿ ಕ್ರಾಫ್ಟ ಮೂಲಕ 20 ಜನರ ಜೀವರಕ್ಷಣೆಯೊಂದಿಗೆ ಸುನಾಮಿ ಆರ್ಭಟಕ್ಕೆ ಸಿಲುಕಿ ಸಾವಿಗಿಡಾದವರ ಶವಗಳನ್ನು ತೀರಕ್ಕೆ ತಂದು ಸಂ¨ಂಧಿಸಿದ ಸಂಭಂದಿಗಳಿಗೆ ನೌಕಾ ದಳ ಸಿಬ್ಬಂದಿಗಳು ಹಸ್ತಾಂತರಿಸಿದರು. ಭಾರತೀಯ ವಾಯುಸೇನಾದ ಚೇತನ ಹೆಲಿಕ್ಯಾಪ್ಟರ್ ಮೂಲಕ ಸಮುದ್ರದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಮೇಲೆಕೆತ್ತಿ ರಕ್ಷಿಸಲಾಯಿತು. ಐ.ಎನ್.ಎಸ್ ತಿಲಾಂಚಲ್ ಹಡಗು ಪ್ರತಿ ಗಂಟೆಗೆ 60 ಕೀ.ಮಿ ವೇಗದಲ್ಲಿ ಚಲಿಸಿ ಸಂಕಷ್ಟಕ್ಕೊಳಕ್ಕಾದ ಸಂತ್ರಸ್ತರನ್ನು ರಕ್ಷಿಸಿತು. ಸುನಾಮಿ ರಕ್ಷಣಾ ಕಾಯಾಚರಣೆಯ ವಿಕ್ಷಣೆಯನ್ನು ಹಿರಿಯ ಅಡ್ಮಿರಲ್ ಕೆ.ಜೆ.ಕುಮಾರ. ಕರ್ನಾಟಕ ನೌಕಾ ಪ್ರದೇಶದ ಫ್ಲ್ಯಾಗ್ ಆಫೀಸರ್, ಭಾರತದ ವಿವಿಧ ಭಾಗಗಳಿಂದ ಮತ್ತು ಭಾಂಗ್ಲಾದೇಶ, ಮಿಯಾನ್ಮಾರ್, ಮಾಲ್ಡಿವ್ ಹಾಗೂ ಶ್ರೀಲಂಕಾ ದೇಶಗಳಿಂದ ಬಂದಿz ರಕ್ಷನಾ À್ದ ಪ್ರತಿನಿದಿಗಳು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿ.ಇ.ಒ ಎಲ್ ಚಂದ್ರಶೇಖರ ನಾಯಕ. ಅಪರ ಜಿಲ್ಲಾಧೀಕಾರಿ ಹೆಚ್. ಪ್ರಸನ್ನ, ವಿಕ್ಷಿಸಿದರು.
ಕರಾವಳಿ ಕಾರುಣ್ಯ ಎಂಬ ಸುನಾಮಿ ಅಣಕು ಕಾಯಾಚರಣೆಯ ಪ್ರಯುಕ್ತ ರವಿಂದ್ರನಾಥ ಕಡ;ಲ ತೀರದಲ್ಲೂ ಸಹ ಸುನಾಮಿ ಕಾರ್ಯಾಚರಣೆ ನಡೆಸಲು ವಿವಿಧ ಮಳಿಗೆಗಳಾದ ತುರ್ತು ಚಿಕಿತ್ಸಾ ಘಟಕ, ವೌದ್ಯಾಧಿಕಾರಿಗಳ ತಂಡ, ಪ್ರಥಮ ಚಿಕಿತ್ಸೆ, ಸಂಚಾರಿ ಪ್ರಯೋಗಾಲಯ, ಮಹಿಳಾ ಸಂತ್ರಸ್ತರ ವಾರ್ಡ, ಪುರುಷ ಸಂತ್ರಸ್ತರ ವಾರ್ಡ, ಪಡಿತರ ವಿತರಣೆ ದಾಸ್ತಾನು, ಅಡುಗೆ ಮನೆ ಮಾಹಿತಿ ಸಂಪರ್ಕ ಕೇಂದ್ರ ಹಾಕಲಾಗಿತ್ತು. ಈ ಮಳಿಗೆಗಳು 2ಸಾವೀರ ಸಂತ್ರಸ್ತರನ್ನು 7ದಿನವರೆಗೆ ಸೇವೆ ಒದಗಿಸುವ ಸಾಮತ್ರ್ಯ ಹೊಂದಿದ್ದವು. ಎನ.ಸಿ.ಸಿ. ಶಿಬಿರಾರ್ಥಿಗಳು ಸಂತ್ರಸ್ತರಿಗೆ ವೈದ್ಯರಿಂದ ತುರ್ತು ಚಿಕಿತ್ಸೆ ಕೊಡಿಸುವ ಪ್ರಾತ್ಯಕ್ಷಿತೆಯನ್ನು ಪ್ರಸ್ತುತಪಡಿಸಿದರು.
Leave a Comment