ಹಳಿಯಾಳ ;
ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಸಮುದಾಯ ಭವನವನ್ನು ಹಳಿಯಾಳ ಪಟ್ಟಣದ ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಇಂದಿರಾನಗರದ ಮುಂದಿನ ಮೌರ್ಯ ಹೋಟೆಲ್ ಪಕ್ಕದ ನಿವೇಶನದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 9 ದಿನಗಳಿಂದ ದಲಿತ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಸಚಿವ ಆರ್.ವಿ.ದೇಶಪಾಂಡೆ ಅವರ ಭರವಸೆಯೊಂದಿಗೆ ಹಿಂದಕ್ಕೆ ಪಡೆಯಲಾಗಿದೆ.
ಹಳಿಯಾಳ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಳ ಉಧ್ಗಾಟನೆ, ಶಂಕು ಸ್ಥಾಪನೆಗೆ ಆಗಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಪಟ್ಟಣದ ರುಡಸೆಟಿಯ ಸಭಾಂಗಣದಲ್ಲಿ ಕಾಂಗ್ರೇಸ್ ಪಕ್ಷದ ದಲಿತ ಮುಖಂಡರೊಂದಿಗೆ ಅಂಬೇಡ್ಕರ ಭವನದ ಕುರಿತು ದೀರ್ಘ ಸಮಾಲೋಚನಾ ಸಭೆಯನ್ನು ನಡೆಸಿದರು ಅಲ್ಲದೇ ಸುಮಾರು 20 ಕ್ಕೂ ಅಧಿಕ ದಲಿತ ಮುಖಂಡರಿಂದ ಭವನ ಕುರಿತು ಅಭಿಪ್ರಾಯಗಳನ್ನು ಪಡೆದು, ಅಂಬೇಡ್ಕರ ಅವರು ಕೇವಲ ದಲಿತ ಸಮುದಾಯಕ್ಕೆ ಸೀಮಿತರಾಗದೇ ಅವರು ರಾಷ್ಟ್ರ ಪುರಷರಾಗಿದ್ದಾರೆ. ಭವನ ನಿರ್ಮಾಣಕ್ಕಾಗಿ ಇಗಾಗಲೇ ಸರಕಾರ ಮಟ್ಟದಲ್ಲಿ ಪ್ರಯತ್ನ ನಡೆಸಿ ಒಂದು ಕೋಟಿ ರೂಗಳನ್ನು ಸಹ ಮಂಜೂರಿ ಮಾಡಲಾಗಿದೆ. ಅಲ್ಲದೇ ಭವನ ನಿರ್ಮಾಣವನ್ನು ದಲಿತರ ಅಪೇಕ್ಷೆಯಂತೆ ಎಲ್ಲರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ನಿರ್ಮಿಸುವ ಭರವಸೆಯನ್ನು ವ್ಯಕ್ತ ಪಡಿಸಿದರು
ಸಮಿತಿ ರಚನೆ ; ಡಾ. ಅಂಬೇಡ್ಕರ ಭವನ ನಿರ್ಮಾಣದ ನಿರ್ಣಯವನ್ನು ಕೈಗೊಳ್ಳಲು 7 ಜನರ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು. ಅಲ್ಲದೇ ಸಮಿತಿಯಲ್ಲಿ ನಾಲ್ವರು ದಲಿತ ಪುರಸಭಾ ಸದಸ್ಯರು, ಓರ್ವ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮತ್ತು ಓರ್ವ ಸಂಘಟನೆಯ ಪದಾಧಿಕಾರಿಯನ್ನು ಸೇರಿಸಿ ಸಮಿತಿಗೆ ಬರುವ ಮೇ 24 ರಂದು ಚಾಲನೆ ನೀಡುಲಾಗುವುದು. ಸಮಿತಿಯು ಮತ್ತೋಮ್ಮೆ ಸ್ಥಳ ಪರಿಶೀಲನೆ ಮಾಡುವುದಲ್ಲದೇ ಅವರ ನಿರ್ಣಯವನ್ನು ಅಂತಿಮ ಎಂದು ಭಾವಿಸಿ ಮುಂದಿನ ಕೇಲವೆ ತಿಂಗಳುಗಳಲ್ಲಿ ಭವನದ ನಿರ್ಮಾಣಕ್ಕೆ ಅಂತಿಮ ತೀರ್ಮಾಣ ಕೈಗೊಳ್ಳುವ ನಿರ್ಣಯಕ್ಕೆ ಬರಲಾಯಿತು.
ಸಚಿವರ ಭರವಸೆಯಂತೆ ಕಳೆದ 9 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಸಚಿವರ ಭರವಸೆಯಂತೆ ಧರಣಿ ಹಿಂದಕ್ಕೆ ಪಡೆಯಲಾಗಿದ್ದರೂ ಸಹ ಭವನ ನಿರ್ಮಾಣದ ಯೋಜನೆ ಮಾತ್ರ ಮುಂದೂಡಲಾಗಿದೆ. ಸಚಿವರ ಭರವಸೆಯನ್ನು ಹೊತ್ತುತಂದ ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಸದಸ್ಯರಾದ ಸುರೇಶ ತಳವಾರ ಮತ್ತು ಬಾಬು ಮಾದರ ಅವರು ಧರಣಿ ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದಾಗ, ಧರಣಿಯನ್ನು ಹಿಂದಕ್ಕೆ ಪಡೆದು ಅಂಬೇಡ್ಕರ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಅಂತ್ಯ ಹಾಡಲಾಯಿತು. ನಂತರ ಶಿವಾಜಿ, ವನಶ್ರಿ, ಯಲ್ಲಾಪೂರ ನಾಕಾ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ಮತ್ತು ಮೆರವಣಿಗೆಯನ್ನು ನಡೆಸುವುದರ ಮೂಲಕ ಹೊರಾಟಗಾರರು ತಮ್ಮ ಹರ್ಷ ವ್ಯಕ್ತಪಡಿಸಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಹೋರಾಟದ ನೇತೃತ್ವವಹಿಸಿದ್ದ ಅಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಮಂಜುನಾಥ ಚಲವಾದಿ, ಈರಣ್ಣಾ ವಡ್ಡರ, ಜಯಲಕ್ಷ್ಮೀ ಚವ್ಹಾಣ, ಮಂಜುಳಾ ಮಾದರ, ಸುಮಿತ್ರಾ, ಕವಿತಾ, ರಾಜವ್ವಾ, ಸುರೇಶ ತಳವಾರ, ಬಾಬು ಮಾದರ, ಮಾರುತಿ, ಕುಮಾರ ಕಲಭಾವಿ, ಸಂತೋಷ ಘಟಕಾಂಬಳೆ, ಯಲ್ಲಪ್ಪಾ ಹೊನ್ನೋಜಿ, ಹನುಮಂತ ಚಲವಾದಿ, ಮಾರುತಿ ಕುರಿಯಾರ, ಪ್ರಕಾಶ ಗೊಡಪ್ಪನವರ, ಶ್ರೀನಿವಾಸ ಮೆಲಗರಿ, ಜ್ಞಾನೇಶ್ವರ ಗಜಾಕೋಶ, ಪೋಮಣ್ಣಾ ದಾನಪ್ಪನ್ನವರ, ಫೀಶ್ಪಪಾ ಮೇತ್ರಿ, ಆನಂದ, ಅಣ್ಣಪ್ಪಾ ವಡ್ಡರ, ರವಿ, ಈರಣ್ಣಾ ವಡ್ಡರ ಸೇರಿದಂತೆ ಎಲ್ಲಾ ಸಂಘಟನೆಯ ದಲಿತ ನಾಯಕರ ಇದ್ದರು.
Leave a Comment