ಕಾರವಾರ:
ಬಡ ಮೀನುಗಾರರೊಬ್ಬರ ಬದುಕಿಗೆ ಹಣಕಾಸು ಸಂಸ್ಥೆಯೊಂದು ಕೊಳ್ಳಿ ಇಟ್ಟಿದೆ. ಮಾಡಿದ ಸಾಲದ ಬಹುಪಾಲು ಹಣ ತೀರಿಸಿದ ನಂತರವೂ ಮೀನುಗಾರಿಕಾ ಬೋಟನ್ನು ವಶ ಪಡಿಸಿಕೊಂಡ ಸಂಸ್ಥೆ ಅದನ್ನು ನೀರಿನಲ್ಲಿ ಮುಳುಗಿಸಿ ಸಾಲಗಾರನನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಅಂಕೋಲಾದ ಶ್ರೀಧರ್ ದತ್ತಾ ಬಾನಾವಳಿಕರ ಎಂಬಾತರು ತಮ್ಮ ಬಳಿಯಲ್ಲಿದ್ದ 60 ಲಕ್ಷ ರೂ ಮೌಲ್ಯದ ಪರ್ಶಿಯನ್ ಬೋಟ ಆಧಾರದ 23 ಲಕ್ಷ ರೂ ಮೇಲೆ ಸಾಲ ಪಡೆದಿದ್ದರು. ಕಾಲಕ್ಕೆ ತಕ್ಕಂತೆ ಅದನ್ನು ತೀರಿಸುತ್ತ ಬಂದಿದ್ದು, ಈವರೆಗೆ ಬಡ್ಡಿ ಸಮೇತ ಸುಮಾರು 18 ಲಕ್ಷದಷ್ಟು ಹಣ ಪಾವತಿಸಿದ್ದರು. ಹೀಗಿರುವಾಗ ಏಕಾಏಕಿ ಮೀನುಗಾರನ ಬೋಟನ್ನು ವಶಕ್ಕೆ ಪಡೆದ ಹಣಕಾಸು ಸಂಸ್ಥೆ ಅದನ್ನು ಹಾಳು ಮಾಡಲು ಯತ್ನಿಸಿದೆ. ಕೆಸರುಗದ್ದೆ ಎಂಬಲ್ಲಿ ಅದನ್ನು ಮುಳುಗಿಸಿ ಸಾಲಗಾರಿಗೆ ನಷ್ಟ ಉಂಟು ಮಾಡಿದೆ. ಬೋಟ ಒಯ್ಯುವ ಮುನ್ನ ಕನಿಷ್ಟ ಮಟ್ಟದ ಕಾನೂನನ್ನು ಕೂಡ ಸಂಸ್ಥೆ ಪಾಲಿಸಿಲ್ಲ. ಸಾಲಗಾರರಿಗೆ ನೋಟಿಸ್ ನೀಡುವ ಕೆಲಸವನ್ನು ಮಾಡಲಿಲ್ಲ.
ಇದಾದ ನಂತರ ವಶ ಪಡಿಸಿಕೊಂಡ ಬೋಟನ್ನು ಸರಿಯಾಗಿ ನಿರ್ವಹಣೆ ಮಾಡದೇ ಅದನ್ನು ಹಾಳುಗಡೆವಲಾಗಿದೆ. ಬೋಟ್ ಮುಳುಗಿ ವಾರ ಕಳೆದರೂ ಅದನ್ನು ಮೇಲೆ ತರುವ ಪ್ರಯತ್ನ ನಡೆದಿಲ್ಲ. ಇನ್ನು . ಬೋಟಿಗೆ ಅಳವಡಿಸಿದ ಮೀನು ಹುಡುಕುವ ಕಂಪ್ಯೂಟರ್, ಜಿಪಿಎಸ್ ಹಾಗೂ ಎರಡು ಮಾದರಿಯ ಬಲೆಗಳನ್ನು ಕೂಡ ಸಂಸ್ಥೆಯವರು ವಶಕ್ಕೆ ಪಡೆಯುವದರ ಮೂಲಕ ಹಗಲು ದರೋಡೆ ನಡೆಸಿದ್ದಾರೆ. ಹೀಗಾಗಿ ಹಣಕಾಸು ಸಂಸ್ಥೆಯ ಮೇಲೆ ಕ್ರಮ ಜರುಗಿಸುವದರೊಂದಿಗೆ ತಮ್ಮ ಖಾತೆಯ ಸಾಲದ ವಿವರ ಪರಿಶೀಲಿಸಿ ನ್ಯಾಯ ಕೊಡಿಸುವಂತೆ ಮೀನುಗಾರ ಶ್ರೀಧರ್ ದತ್ತಾ ಬಾನಾವಳಿಕರ ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ.
Leave a Comment