ಕಾರವಾರ:
ನಿರಂತರ ಸಾಧನೆ ಮಾಡುವದರ ಮೂಲಕ ದೇಹವನ್ನು ಸಮತೋಲನಕ್ಕೆ ತಂದುಕೊಳ್ಳಬಹುದು ಎಂದು ದೊಡ್ಡಬಳ್ಳಾಪುರ ಆಶ್ರಮದ ಸ್ವಾಮಿ ಧ್ಯಾನಾನಂದಜೀ ಹೇಳಿದರು.
ಕಾರವಾರದ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ನಿಂದ ನಗರದ ಬಾಡ ನ್ಯೂ ಹೈಸ್ಕೂಲ್ ಆವರಣದಲ್ಲಿ ಮೇ 5 ರಿಂದ ಆಯೋಜಿಸಿದ್ದ 25 ದಿನಗಳ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ನೀಡಿದರು.
ಸೀಮಿತವಾಗಿ ಹಾಗೂ ಹೆಚ್ಚು ಅಗೆದು ಆಹಾರ ಸೇವಿಸಬೇಕು. ರಾತ್ರಿ ಮಲಗುವ ಮೊದಲು ಅರ್ಧ ಪುಟದಷ್ಟಾದರೂ ಓದಬೇಕು. ಪ್ರತಿದಿನ ಕನಿಷ್ಠ ಅರ್ಧ ಗಂಟೆ ಧ್ಯಾನ ಮಾಡಬೇಕು. ಇದರಿಂದ ದೇಹ ಹಾಗೂ ಮನಸ್ಸು ಸಮತೋಲನಕ್ಕೆ ಬರುತ್ತದೆ. ಜತೆಗೆ ನಿಮ್ಮ ಸುತ್ತಲಿನ ಜನರಿಗೆ ಯೋಗ ತರಬೇತಿ ನೀಡಿ ಎಂದು ಕರೆ ನೀಡಿದರು. ಕೆಡಿಎ ಅಧ್ಯಕ್ಷ ಸಂದೀಪ ತಳೇಕರ್ ಅತಿಥಿಯಾಗಿ ಆಗಮಿಸಿ ಮಾತನಾಡಿ, ಯೋಗಕ್ಕೆ ಯಾವುದೇ ಧರ್ಮವಿಲ್ಲ. ಅದೊಂದು ಜೀವನ ಕಲೆ ಎಂದರು. ಪ್ರೀಮಿಯರ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಶಿವಾನಂದ ಕಾಮತ್ ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಶ್ರೀನಾಥ ಗೌಡ, ಮಂಡಲ ಪ್ರಭಾರಿ ಪ್ರಶಾಂತ ರೇವಣಕರ್, ಜಿಲ್ಲಾ ಮಹಿಳಾ ಪ್ರಭಾರಿ ಯಮುನಾ ರಾಯ್ಕರ್ ವೇದಿಕೆಯಲ್ಲಿದ್ದರು.
ಪ್ರಶಿಕ್ಷಣಾರ್ಥಿ ಪೂರ್ಣಿಮಾ ಕಾರ್ಯಕ್ರಮ ನಿರ್ವಹಿಸಿದರು. ಎಸಿಎಫ್ ಮಂಜುನಾಥ ನಾವಿ ಭಕ್ತಿಗೀತೆ ಹಾಡಿದರು
Leave a Comment