ಹೊನ್ನಾವರ:
ಧರ್ಮಸ್ಥಳದ ಬಳಿಯ ರಾಮಕ್ಷೇತ್ರದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜುಲೈ 9 ರಂದು ನಡೆಯುವ ಗುರುಪೂರ್ಣಿಮೆ ಆಚರಣೆಗೆ ತಾಲೂಕಿನ ಭಕ್ತರು ಪಾಲ್ಗೊಳ್ಳಬೇಕು ಎಂದು ಶ್ರೀರಾಮಕ್ಷೇತ್ರ ಸೇವಾ ಸಮಿತಿಯ ತಾಲೂಕಾ ಅಧ್ಯಕ್ಷ ಎಂ.ಜಿ. ನಾಯ್ಕ ಕೋರಿದ್ದಾರೆ.
ಪಟ್ಟಣದ ನಾಮಧಾರಿ ವಿದ್ಯಾರ್ಥಿ ನಿಲಯ ಕಟ್ಟಡದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಿಂದ 25 ಕ್ಕಿಂತಲೂ ಹೆಚ್ಚು ವಾಹನಗಳಲ್ಲಿ ಭಕ್ತರು ಸ್ವ ಇಚ್ಚೆಯಿಂದ ತೆರಳಿ ಭಾಗವಹಿಸುವರು ಎಂದು ಎಂದು ತಿಳಿಸಿದರು.
ಎಲ್ಲ ಪರಂಪರಾಗತ ಗುರುಗಳನ್ನು ನೆನಪಿಸಿಕೊಳ್ಳುವ ದಿನ ಗುರುಪೂರ್ಣಿಮೆ. ಶ್ರೀ ರಾಮಕ್ಷೇತ್ರ ಮಠದಲ್ಲಿ 50 ವರ್ಷಗಳಿಂದ ಆಚರಿಸಿಕೊಂಡು ಬರಲಾಗಿದೆ. ಹಿಂದಿನ ಗುರುಗಳಾದ ಶ್ರೀ ಆತ್ಮಾನಂದ ಸರಸ್ವತೀ ಸ್ವಾಮೀಜಿಯವರು ನಡೆಸಿಕೊಂಡು ಬಂದಿದ್ದು ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿಯವರು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು.
ವ್ಯಾಸ ಪೂರ್ಣಿಮೆಗೆ ನಾಮಧಾರಿ ಸಮಾಜವಲ್ಲದೇ ಉಳಿದ ಸಮಾಜದ ಭಕ್ತರೂ ಪಾಲ್ಗೊಳ್ಳಬೇಕು ಎಂದು ಕೋರದರು.
ಶ್ರೀರಾಮಕ್ಷೇತ್ರ ಮಠ 9 ಮಠಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಅದರ ಭಾಗವಾಗಿ ಹರಿದ್ವಾರದಲ್ಲಿ ಒಂದು ಮಠವನ್ನು ನಿರ್ಮಿಸಲಾಗುತ್ತಿದೆ. ಭಟ್ಕಳ ತಾಲೂಕಿನ ಕರಿಕಲ್ ಬಳಿ ಧ್ಯಾನಮಂದಿರವನ್ನು ನಿರ್ಮಿಸಲಾಗುತ್ತದೆ. ಹೊನ್ನಾವರ ತಾಲೂಕಿನಲ್ಲಿಯೂ ನಿರ್ಮಿಸಲು ಯೋಜಿಸಲಾಗಿದೆ. ಮೂಲಮಠ ಧರ್ಮಸ್ಥಳದ ಬಳಿಯ ರಾಮಕ್ಷೇತ್ರದಲ್ಲಿದೆ ಎಂದು ತಿಳಿಸಿದರು.
ತಾಲೂಕಾ ರಾಮಕ್ಷೇತ್ರ ಸೇವಾ ಸಮಿತಿಯ ಹಿರಿಯ ಉಪಾಧ್ಯಕ್ಷ ಆರ್. ಎಂ. ನಾಯ್ಕ ಮಾತನಾಡಿ ರಾಮಕ್ಷೇತ್ರದಲ್ಲಿ ಎಲ್ಲ ಸಮಾಜದ ಬಡಮಕ್ಕಳಿಗಾಗಿ ಉಚಿತ ಶಿಕ್ಷಣ ನೀಡುವ ವಸತಿ ಶಾಲೆಯನ್ನು ಶ್ರೀಗಳು ನಡೆಸುತ್ತಿದ್ದು ಸಂಸ್ಕಾರಯುತ ಶಿಕ್ಷಣವನ್ನು ನೀಡಲಾಗುತ್ತಿದೆ. ಸ್ವತಃ ಶ್ರೀಗಳೇ ಯೋಗ, ಧ್ಯಾನವನ್ನು ಮಕ್ಕಳಿಗೆ ಹೇಳಿಕೊಡುತ್ತಾರೆ. ಇಲ್ಲಿ 150 ಮಕ್ಕಳಿಗೆ ಕಲಿಯುತ್ತಿದ್ದಾರೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ಟಿ. ನಾಯ್ಕ ಸ್ವಾಗತಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ವಾಮನ ಎಸ್. ನಾಯ್ಕ, ಬಾಲಚಂದ್ರ ನಾಯ್ಕ, ತುಕಾರಾಮ ನಾಯ್ಕ, ಆರ್. ಪಿ. ನಾಯ್ಕ, ರಾಮಪ್ಪ ನಾಯ್ಕ, ಲಂಬೋದರ ನಾಯ್ಕ, ಗಜಾನನ ನಾಯ್ಕ, ನಾಗೇಶ ನಾಯ್ಕ, ಸೀತಾರಾಮ ನಾಯ್ಕ, ಈಶ್ವರ ನಾಯ್ಕ, ಶೇಖರ ನಾಯ್ಕ, ಜಗದೀಶ ನಾಯ್ಕ, ವಿನಾಯಕ ನಾಯ್ಕ, ಸತೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
Leave a Comment