ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಯಂತ್ರವನ್ನು ಕಾರವಾರದ ಬೀಚ್ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.ರವೀಂದ್ರನಾಥ್ ಕಡಲತೀರದ ಸ್ವಚ್ಛತೆಗಾಗಿ ಬೀಚ್ ಟೆಕ್ 2000 ವಿಶೇಷ ಯಂತ್ರವನ್ನು ತರಲಾಗಿದೆ. ಮಯೂರವರ್ಮ ವೇದಿಕೆ ಹಿಂಭಾಗದಲ್ಲಿ ಸೋಮವಾರ ಯಂತ್ರದ ಬಿಡಿಭಾಗಗಳನ್ನು ಜೋಡಿಸಿ ಸಜ್ಜುಗೊಳಿಸಲಾಗಿದೆ.ಯಂತ್ರವು ಕಾರ್ಯಾಚರಣೆಗೆ ಸಂಪೂರ್ಣವಾಗಿ ಸಿದ್ಧವಾಗಿದ್ದುಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆಯವರು ಜಿಲ್ಲಾ ಕೇಂದ್ರಕ್ಕೆ ಆಗಮಿಸಿದಾಗ ಇದನ್ನು ಉದ್ಘಾಟಿಸಲಾಗುತ್ತದೆ, ರಾಜ್ಯದ ಉಡುಪಿ ಜಿಲ್ಲೆಯ ನಂತರ ಉತ್ತರಕನ್ನಡದ ಕಾರವಾರ ತೀರಕ್ಕೆ ಸಿಗುತ್ತಿರುವುದು ಇದೇ ಮೊದಲು.ಈ ಬೀಚ್ಟ್ಯಾಕ್ 2000 ಯಂತ್ರವನ್ನು ಎಳೆಯಲು ಟರ್ಬೋ ಕಂಪನಿಯ ಟ್ರ್ಯಾಕ್ಟರ್ನ್ನು ಇದಕ್ಕೆ ಜೋಡಿಸಲಾಗಿದೆ. ಈ ಯಂತ್ರದ ಒಟ್ಟು ಮೌಲ್ಯ 75 ಲಕ್ಷ ರೂ.ಗಳಾಗಿದೆ.ತೀರದಲ್ಲಿನ ಪ್ಲಾಸ್ಟಿಕ್, ಕಸ, ಕಡ್ಡಿ ಸೇರಿದಂತೆ ಇತರೆ ಕಸವನ್ನು ತೆಗೆಯುತ್ತದೆ. ಮಣ್ಣನ್ನು ಗಾಳಿಸಿ ಕಸಕಡ್ಡಿಗಳನ್ನು ಬೇರ್ಪಡಿಸುವ ವಿಶೇಷತೆ ಯಂತ್ರದ್ದಾಗಿದೆ.ಯಂತ್ರದ ನಿರ್ವಹಣೆಗೆ ಒಬ್ಬ ಚಾಲಕ ಮತ್ತು ಒಬ್ಬ ಸಹಾಯಕನನ್ನು ಈಗಾಗಲೇ ಜಿಲ್ಲಾಡಳಿತ ನೇಮಕ ಮಾಡಿಕೊಂಡಿದೆ. ಯಂತ್ರವನ್ನು ಉಪಯೋಗಿಸುವ ಕುರಿತು ಕಂಪನಿಯ ಎಂಜಿನೀಯರ್ಗಳು ಚಾಲಕರಿಗೆ ತರಬೇತಿ ನೀಡಲಿದ್ದಾರೆ.ಯಂತ್ರವು ಕಾರ್ಯಾರಂಭ ಮಾಡಿದಾಗ ನಗರದ ರವೀಂದ್ರನಾಥ್ ಟ್ಯಾಗೋರ್ ಬೀಚ್ ಮಾತ್ರವಲ್ಲದೇ ಜಿಲ್ಲೆಯ ಇತರೆ ಪ್ರಮುಖ ಬೀಚ್ಗಳಾದ ಮುರ್ಡೇಶ್ವರ ಹಾಗೂ ಗೋಕರ್ಣ ಬೀಚ್ಗಳಲ್ಲೂ ವಾರದಲ್ಲಿ ಇಂತಿಷ್ಟು ದಿನ ಸ್ವಚ್ಛತೆಗೆ ಕಳಿಸಲಾಗುತ್ತದೆ.
Leave a Comment