ಜೆ. ಡಿ. ನಾಯ್ಕ ಅಭಿಮಾನಿ ಸಂಘದ ಆಶ್ರಯದಲ್ಲಿ ಭಟ್ಕಳದಲ್ಲಿ ಸಪ್ಟಂಬರ್ 24 ರಂದು ನಡೆಯಲಿರುವ ನಾಗರಿಕ ಸೇವೆಗಳು ಗಗನ ಕುಸುಮವಲ್ಲ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಹೊನ್ನಾವರ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವವಂತೆ ತಿಳುವಳಿಕೆ ನೀಡಲು ಪೂರ್ವಭಾವಿ ಸಭೆ ಡ್ರೀಮ್ ಟೀಮ್ ಹೊನ್ನಾವರ, ಲಯನ್ಸ್, ರೋಟರಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ನಡೆಯಿತು.
ಜೆ.ಡಿ.ನಾಯ್ಕ ಅಭಿಮಾನಿ ಸಂಘದ ಅಧ್ಯಕ್ಷ ನಾಗೇಶ ದೇವಾಡಿಗ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಷ: ಇಂಜನಿಯರ್ ಆಗಬೇಕು.ಡಾಕ್ಟರ್ ಆಗಬೇಕು ಎಂದು ಮಕ್ಕಳು ಚಿಕ್ಕವರಿದ್ದಾಗಲೇ ತಲೆಯಲ್ಲಿ ತುಂಬಲಾಗುತ್ತದೆ. ಆದರೆ ಐಎಎಸ್, ಐಪಿಎಸ್, ಐಆರ್ಎಸ್, ಐಎಫ್ಎಸ್ ನಂತಹ ನಾಗರಿಕ ಸೇವಾ ಶಿಕ್ಷಣದ ಬಗ್ಗೆ ಗಮನ ಕೊಡುವುದಿಲ್ಲ. ವಿದ್ಯಾರ್ಥಿಗಳನ್ನು ನಾಗರಿಕ ಸೇವಾ ಶಿಕ್ಷಣಕ್ಕೆ ಆಸಕ್ತಿ ವಹಿಸುವಂತೆ ಪ್ರೋತ್ಸಾಹಿಸುವ ದೃಷ್ಠಿಯಿಂದ 20 ಜನ ಐಎಎಸ್, ಐಪಿಎಸ್, ಐಆರ್ಎಸ್, ಐಎಫ್ಎಸ್ ಅಧಿಕಾರಿಗಳನ್ನು ಕರೆಯಿಸಿ ಅವರ ಮೂಲಕ ಮಾರ್ಗದರ್ಶನ, ತರಬೇತಿ ಸಂವಾದ ನಡೆಸಲು ಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸಪ್ಟಂಬರ್ 24 ರಂದು ನಡೆಯಲಿರುವ ನಾಗರಿಕ ಸೇವಾ ಕಾರ್ಯಾಗಾರದಲ್ಲಿ ಉಡುಪಿ, ದ.ಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ 2000 ಆಕಾಂಕ್ಷೆಗಳಿಗೆ ಪ್ರವೇಶವನ್ನು ಕಲ್ಪಿಸಲಾಗುವುದು. ಉಚಿತ ನೋಂದಣಿ ಹಾಗೂ ಊಟೋಪಚಾರ ವ್ಯವಸ್ಥೆ ಇದ್ದು, ಈ ಕಾರ್ಯಾಗಾರದಲ್ಲಿ ದೇಶದ ಪ್ರಮುಖ ಐಎಎಸ್, ಐಪಿಎಸ್, ಐಎಫ್ಎಸ್ನ 20 ಪ್ರತಿಷ್ಠಿತ ಅಧಿಕಾರಿಗಳು ಉಪನ್ಯಾಸ ನೀಡಲಿದ್ದಾರೆ. ಇದರಲ್ಲಿ 200 ಶ್ರೇಯಾಂಕಿತರನ್ನು ಆಯ್ಕೆಗೊಳಿಸಿ ವಿವಿಧ ಆಕೆಡೆಮಿಗಳ ಮೂಲಕ ತರಬೇತಿ ವ್ಯವಸ್ಥೆ ಕಲ್ಪಿಸಲಾಗುವುದು ತಿಳಿಸಿದರು.
ಜಿ.ಜಿ.ಶಂಕರ ಮಾತನಾಡಿ ಉತ್ತರ ಕನ್ನಡ ಜಿಲ್ಲೆ ಹಾಗೂ ಹೊನ್ನಾವರ ತಾಲೂಕಿನಲ್ಲಿ ಶೈಕ್ಷಣಿಕವಾಗಿ ರಾಜ್ಯಮಟ್ಟದ ಶ್ರೇಯಾಂಕ ಪಡೆಯುವಂತಹ ಪ್ರತಿಭೆಗಳಿದ್ದರೂ ಕೇವಲ ವೈದಕೀಯ ಹಾಗೂ ತಾಂತ್ರಿಕ ಕ್ಷೇತ್ರಗಳ ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದಾರೆ. ದೇಶದ ಅತ್ಯುತ್ತಮ ನಾಗರಿಕ ಸೇವಾ ಶಿಕ್ಷಣ ಪಡೆಯುವ ಆರ್ಹತೆ ಇದ್ದರೂ ಆ ಕುರಿತು ಸರಿಯಾದ ತಿಳುವಳಿಕೆ, ಮಾರ್ಗದರ್ಶನ ಹಾಗೂ ತರಬೇತಿಯಿಂದ ವಂಚಿತರಾಗಿದ್ದಾರೆ. ಬೇರೆ ಜಿಲ್ಲೆ ಹಾಗೂ ರಾಜ್ಯಕ್ಕೆ ಹೋಲಿಸಿದರೆ ತುಂ¨ ಹಿಂದೆ ಉಳಿದಿದ್ದೇವೆ ಎಂದರು.
ಪ್ರೌಢಶಿಕ್ಷಣ ಹಂತದಲ್ಲಿ ಅವರನ್ನು ಅಣಿಗೊಳಿಸಿದರೆ ನಮ್ಮ ತಾಲೂಕಿನಲ್ಲೂ ಪ್ರತಿವರ್ಷ ಒಂದೆರಡು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಆಗಲು ಸಾಧ್ಯ. ಇಂತಹ ಪೂರಕ ಅವಕಾಶಗಳನ್ನು ಕಲ್ಪಿಸಬೇಕಿದೆ. ಡ್ರೀಮ್ ಟೀಮ್ ಹೊನ್ನಾವರ ಈ ದಿಶೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಜೆ.ಡಿ.ಎನ್. ಅಭಿಮಾನಿ ಬಳಗದಿಂದ ನಡೆಸುವ ನಾಗರಿಕ ಸೇವಾ ತರಬೇತಿ, ಕಾರ್ಯಾಗಾರ ನಮ್ಮ ತಾಲೂಕಿನ ವಿದ್ಯಾರ್ಥಿಗಳಿಗೆ ಸಹಕಾರವಾಗಲಿದೆ ಎಂದರು.
ವೇದಿಕೆಯಲ್ಲಿ ರೋಟರಿ ಕ್ಲಬ್ನ ಅಧ್ಯಕ್ಷ ಅನಂತಮೂರ್ತಿ ಶಾಸ್ತ್ರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಿ.ಡಿ.ಮಡಿವಾಳ, ಎಸ್ಡಿಎಂ ಕಾಲೇಜಿನ ಪ್ರಾಚಾರ್ಯ ಪ್ರೊ. ಎಸ್. ಎಸ್. ಹೆಗಡೆ. ಪ್ರೋ. ಜಿ. ಪಿ. ಹೆಗಡೆ, ಉದ್ಯಮಿ ಜೆ. ಟಿ. ಪೈ ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ವಂದಿಸಿದರು. ಪ್ರೊ. ರಾಜು ಮಾಳಗಿಮನೆ ಮತ್ತಿತರರು ಉಪಸ್ಥಿತರಿದ್ದರು. ಡ್ರೀಮ್ ಟೀಮ್ ಸದಸ್ಯರಾದ ಉಪನ್ಯಾಸಕ ರಾಜು ಮಾಳಗಿಮನೆ, ಸುರೇಶ ಹೊನ್ನಾವರ, ಕಿರಣ ಹೊನ್ನಾವರಕರ ಉಪಸ್ಥಿತರಿದ್ದರು.
ಎಸ್ಡಿಎಂ ಕಾಲೇಜಿನಲ್ಲಿ: ಡ್ರೀಮ್ ಟೀಮ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಎಸ್ಡಿಎಂ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜುಲೈ 15 ರಂದು ಬೆಳಿಗ್ಗೆ 9.30. ಗಂಟೆಗೆ ವಿದ್ಯಾರ್ಥಿಗಳಿಗಾಗಿ, ಹಾಗೂ ನಾಗರಿಕ ಸೇವಾ ಅಕಾಂಕ್ಷಿಗಳಿಗಾಗಿ ಮಾರ್ಗದರ್ಶನ, ತರಬೇತಿ ಮತ್ತು ಸಂವಾದ, ಭಟ್ಕಳದಲ್ಲಿ ನಡೆಯುವ ಕಾರ್ಯಾಗಾರಕ್ಕೆ ನೋಂದಣಿ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳು ಪಾಲ್ಗೊಂಡು ಮಾರ್ಗದರ್ಶನ ನೀಡುವರು ಎಂದು ಸಂಘಟಕರು ತಿಳಿಸಿದ್ದಾರೆ.
Leave a Comment