ಹೊನ್ನಾವರ :
ಮಲಬಾರಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ನೀರು ಒದಗಿಸಿ ಕೊಡುವ ನಿಟ್ಟಿನಲ್ಲಿ ‘ಆದರ್ಶ’ಸ್ವ ಸಹಾಯ ಸಂಘ ಮಲಬಾರಕೇರಿ,ಕಾಸರಕೋಡ ಇವರು ಯುರೇಕಾ ಪೋರ್ಬ್ಸ ಕಂಪನಿಯು ಅಕ್ವಾಗಾರ್ಡನ್ನು ದೇಣಿಗೆಯಾಗಿ ನೀಡಿದರುÀ. ಅಂಗನವಾಡಿಗೆ ಸೀಲಿಂಗ್ ಪ್ಯಾನ್ ನೀಡಿದರು.
.ಸಭೆಯಲ್ಲಿ ಆದರ್ಶ ಸ್ವ ಸಹಾಯ ಸಂಘದ ಅಧ್ಯಕ್ಷ ಕೆ.ರಾಮಚಂದ್ರನ್,ಕಾರ್ಯದಶಿಗಳಾದ ಮಹಮದ್ ರಫೀಕ್, ನಾರಾಯಣ ಭಟ್ಟ, ರಾಜೇಶ ಗೌಡ, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಸಂಘದ ಕಾರ್ಯಕಲಾಪಗಳನ್ನು ತಿಳಿಸಿದರು.
ಮುಖ್ಯ ಅತಿಥಿ ರವೀಂದ್ರ ಶೆಟ್ಟಿ, ಆದರ್ಶ ಸ್ವ ಸಹಾಯ ಸಂಘದ ಕಾರ್ಯವನ್ನು ಶ್ಲಾಘಿಸಿದರು. ಎಸ್.ಡಿ.ಎಮ.ಸಿ.ಅಧ್ಯಕ್ಷ ರಾಮಚಂದ್ರ ಮೇಸ್ತ ಅಧ್ಯಕ್ಷತೆ ವಹಿಸಿದರು. .ವಾಟರ್ ಫಿಲ್ಟರ್ ಕೊಡುಗೆ ನೀಡಿದ್ದಕ್ಕಾಗಿ ಇಲಾಖಾ ವತಿಯಿಂದ ಆಭಿನಂದನ ಪತ್ರವನ್ನು ಮುಖ್ಯಶಿಕ್ಷಕರು ಆದರ್ಶ ಸ್ವ ಸಹಾಯ ಸಂಘಕ್ಕೆ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಕೆಲವು ದಿನಗಳ ಹಿಂದೆ ಶಾಲೆಗೆ ಗ್ರ್ಯಾಂಡರ್ ಒಂದನ್ನು ದೇಣಿಗೆ ನೀಡಿದ ಮಲಬಾರಕೇರಿಯಲ್ಲಿ ಕಾಕಾ ಸಾಹೇಬರೆಂದೇ ಗುರುತಿಸಲ್ಪಡುವ ಅಬ್ದುಲ್ ಖಾದರ್ ಅವರಿಗೂ ಅಭಿನಂದನೆ ಸಲ್ಲಿಸಲಾಯಿತು
.ಮುಖ್ಯ ಶಿಕ್ಷಕÀ ಉಮೇಶ ಭಾಗ್ವತ ಸ್ವಾಗತಿಸಿದರು. .ಪ್ರಕಾಶ ಕುಮಟಾಕರ ಶಿಕ್ಷಕ ಕಾರ್ಯಕ್ರಮ ನಿರೂಪಿಸಿದರು. À .ಪ್ರಕಾಶ ಕುಮಟಾಕರ ವಂದಿಸಿದರು.
Leave a Comment