ಹೊನ್ನಾವರ :
ಹಡಿಬಾಳಿನ ರಾಗಶ್ರೀ ಸಂಸ್ಥೆ ವಿದ್ಯಾರ್ಥಿಗಳು ಭಾಸ್ಕೇರಿ ವೆಂಕಟರಮಣ ದೇವಸ್ಥಾನದಲ್ಲಿ ವ್ಯಾಸ ಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ ನಡೆಸಿದರು. ಹಿರಿಯ ಸಂಗೀತಗಾರ ಡಾ| ಅಶೋಕ ಹುಗ್ಗಣ್ಣವರ ಇವರಿಂದ ಶಾಸ್ತ್ರೀಯ ಸಂಗೀತ ನಡೆಯಿತು.
ಮೈಸೂರಿನ ನಿವೃತ್ತ ಸಂಸ್ಕøತ ಪ್ರಾಧ್ಯಾಪಕ ಮಂಜುನಾಥ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ಗುರು ಮತ್ತು ಗುರಿಯಿಲ್ಲದೇ ಯಾವ ವಿದ್ಯೆಯೂ ಸಾಧಿಸದು. ಸಂಗೀತ ಗುರು ಪರಂಪರೆಯಿಂದ ಬರುವ ವಿದ್ಯೆ, ಸಂಗೀತ-ಸಾಹಿತ್ಯ ಕಲೆ ಗೊತ್ತಿರದವರು ಪಶು ಸಮಾನ ಎಂದಿದೆ ಶಾಸ್ತ್ರ ಮನುಷ್ಯನ ಜೀವನ ನೆಮ್ಮದಿಯಿಂದ ಕಳೆದು ಸುಖದ ಅಂತ್ಯಕ್ಕಾಗಿ ಸಂಗೀತ ಸಾಹಿತ್ಯ ಕಲೆಗಳು ಅಗತ್ಯ. ಇದನ್ನು ನಂಬಿದರೆ ಆತ್ಮ ಸಾಕ್ಷಾತ್ಕಾರವಾಗುತ್ತದೆ. ಅಂತಹ ಪರಂಪರೆಯನ್ನು ರಕ್ಷಿಸಿ ಬೆಳಗುವಲ್ಲಿ ರಾಗಶ್ರೀ ಉತ್ತಮ ಕೆಲಸ ಮಾಡಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಗೀತ ವಿದ್ವಾಂಸ ಪ್ರೊ| ಶಂಭು ಭಟ್ಟ ಮಾತನಾಡಿ ಕಲೆಗೆ ಬದುಕಿನಲ್ಲಿ ಮಹತ್ವದ ಸ್ಥಾನವಿದೆ. ಭೌತಿಕವಾದ ಯಾವ ಸಂಪತ್ತಿನಿಂದ ದೊರೆಯದ ಸಂತೋಷ ಸಂಗೀತಾದಿ ಕಲೆಗಳಿಂದ ದೊರೆಯುತ್ತದೆ ಎಂದರು.
ರಾಗಶ್ರೀ ವಿದ್ಯಾರ್ಥಿಗಳು ತಮ್ಮ ಗಉರು ಶಿವಾನಂದ ಭಟ್ಟ ಮತ್ತು ಎನ್.ಜಿ. ಹೆಗಡೆ ಕಪ್ಪೇಕೆರೆ ಇವರನ್ನು ಗೌರವಿಸಿದರು. ಡಾ| ಅಶೋಕ ಹುಗ್ಗಣ್ಣವರ ಇವರನ್ನು ಶಿವಾನಂದ ಭಟ್ಟ ಮತ್ತು ಹಿರಿಯ ತಬಲಾ ಕಲಾವಿದ ಎನ್.ಎಸ್. ಹೆಗಡೆ ಇವರನ್ನು ಎನ್.ಜಿ. ಹೆಗಡೆ ಗೌರವಿಸಿದರು.
ವಿದ್ಯಾರ್ಥಿ ವಿನಾಯಕ ಭಟ್ಟ ಸ್ವಾಗತಿಸಿದರು. ಶಿವಾನಂದ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಸಂಗೀತಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅಶೋಕ ಹುಗ್ಗಣ್ಣವರ ಮೇಘ ಮತ್ತು ಭೈರವಿಯನ್ನು ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಎನ್.ಜಿ. ಹೆಗಡೆ ಮತ್ತು ಎನ್. ಎಸ್ ಹೆಗಡೆ ಹಾರ್ಮೋನಿಯಂನಲ್ಲಿ ಹರಿಶ್ಚಂದ್ರ ನಾಯ್ಕ ಮತ್ತು ತಂಬೂರಾದಲ್ಲಿ ವಿಶ್ವೇಶ್ವರ ಭಟ್ಟ ಸಾಥ ನೀಡಿದರು.
Leave a Comment