ಹೊನ್ನಾವರ:
ರಕ್ತದಾನ ಮಾಡುವವರು ಜೀವ ರಕ್ಷಕರು. ರಕ್ತದಾನ ಮಾಡಲು ಹಣ ಬೇಕಿಲ್ಲ, ಹೃದಯವಂತಿಕೆ ಬೇಕು ಎಂದು ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಹೇಳಿದರು.
ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಬಿಜೆಪಿ ತಾಲೂಕಾ ಮಂಡಲದ ಆಶ್ರಯದಲ್ಲಿ ತಾಲೂಕಾ ಆಸ್ಪತ್ರೆ, ಕುಮಟಾದ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಕ್ತ ದಾನ ಮಾಡಿದವರಿಗೆ ಹೊಸ ರಕ್ತ ಉತ್ಪನ್ನವಾಗುತ್ತದೆ. ಪಡೆದವರಿಗೆ ಜೀವ ರಕ್ಷಣೆಯಾಗುತ್ತದೆ. ರಕ್ತದಾನ ಕೊಟ್ಟವರಿಗೆ, ಪಡೆದವರಿಗೆ ಇಬ್ಬರಿಗೂ ಪ್ರಯೋಜನ ಎಂದರು.
ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ಅಪಘಾತದಂತಹ ಸಂದರ್ಭಗಳಲ್ಲಿ ರಕ್ತ ಸಿಗದೇ ಅನೇಕರು ದಾರಿ ಮಧ್ಯೆ ಜೀವ ಕಳೆದುಕೊಂಡಿದ್ದಾರೆ. ರಕ್ತದಾನ ಮಹತ್ವದ್ದು. ಯುವಜನರು ರಕ್ತದಾನ ಮಾಡಲು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಜಿಲ್ಲಾ ಶಿಶು ಅಭಿವೃದ್ದಿ ಇಲಾಖಾಕಾರಿ ಡಾ. ಶರದ್ ನಾಯ್ಕ ಮಾತನಾಡಿ ಹೆರಿಗೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ರಕ್ತ ಸಿಗದೇ ಮೃತಪಟ್ಟ ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.. ಅನೇಕರು ಕ್ಯಾಂಪ್ಗಳನ್ನು ಮಾಡಿದಾಗ ರಕ್ತ ಕೊಡಲು ಮುಂದೆ ಬರುವುದಿಲ್ಲ. ಕಾಲೇಜುಗಳಲ್ಲಿ ಕ್ಯಾಂಪ್ ಮಾಡಿದಾಗಲೂ ವಿದ್ಯಾರ್ಥಿಗಳು ರಕ್ತ ಕೊಡಲು ಮುಂದೆ ಬರುವುದು ಕಡಿಮೆ. ರಕ್ತದಾನ ಮಾಡಿ ಮೊದಲೇ ಸಂಗ್ರಹ ಇಟ್ಟುಕೊಂಡರೆ ಅನುಕೂಲ ಎಂದರು.
ತುರ್ತು ಸಮಯದಲ್ಲಿ ಮಾತ್ರ ರಕ್ತ ಕೊಡುವುದಕ್ಕಿಂತ ಶಿಬಿರಗಳಲ್ಲಿ ರಕ್ತದಾನ ಮಾಡಿ ರಕ್ತ ಸಂಗ್ರಹ ಇಟ್ಟುಕೊಳ್ಳುವಂತೆ ಮಾಡಿ ಅನೇಕರ ಜೀವ ಉಳಿಸುವ ಪ್ರಯತ್ನ ಮಾಡೋಣ ಎಂದರು.
ಯಾರು ರಕ್ತ ಕೊಡಲು ಅರ್ಹರು?: ಕುಮಟಾ ಬ್ಲಡ್ ಬ್ಯಾಂಕ್ ಅಕಾರಿ ಡಾ. ಎಂ.ಕೆ. ನಾಯ್ಕ ಮಾತನಾಡಿ 18 ರಿಂದ 60 ವರ್ಷದ ವರೆಗಿನವವರು, 45 ಕೆಜಿಗಿಂತ ಹೆಚ್ಚನ ತೂಕ ಇದ್ದವರು ರಕ್ತ ಕೊಡಬಹದು. ಆರೋಗ್ಯವಂತರಾಗಿರಬೇಕು. ಯಾವುದೇ ಸೋಂಕು ರೋಗಗಳು ಇರಬಾರದು. ಬಿಪಿ, ಸಕ್ಕರೆ ಖಾಯಿಲೆ. ಹೃದಯದ ಸಮಸ್ಯೆ ಇದ್ದವರು ಆಗಬಾರದು ಎಂದರು.
ರಕ್ತದ ಗುಂಪನ್ನು ಮೊದಲೇ ತಿಳಿದಿಟ್ಟುಕೊಂಡರೆ ಅನುಕೂಲ. ಪಾಸಿಟಿವ್ ಗುಂಪಿನ ರಕ್ತಗಳು ಹೆಚ್ಚು ಅಗತ್ಯವಾಗಿವೆ ಎಂದರು.
ತಾಲೂಕಾ ವೈದ್ಯಾಕಾರಿ ಉಷಾ ಹಾಸ್ಯಗಾರ ಸ್ವಾಗತಿಸಿದರು. ಆಡಳಿತ ವೈದ್ಯಾಕಾರಿ ಡಾ. ರಾಜೇಶ ಕಿಣಿ ವಂದಿಸಿದರು. ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನೋದ ನಾಯ್ಕ ರಾಯಲಕೇರಿ, ಜಿ.ಪಂ. ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ. ಗಣಪತಿ ಗೌಡ ಚಿತ್ತಾರ, ಕರ್ಕಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಮೊಗೇರ ಮತ್ತಿತರರು ಉಪಸ್ಥಿತರಿದ್ದರು.
Leave a Comment