ಕಾರವಾರ:
ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಕಾರವಾರ ಇವರು ಜುಲೈ 19 ರಿಂದ ರಿಂದ 25 ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಜುಲೈ 19 ರಂದು ಬೆಳಗ್ಗೆ 11.30 ಗಂಟೆಯಿಂದ ಮ.1ಗಂ.ರವರೆಗೆ ಜೋಯಿಡಾ ಮತ್ತು ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 12.30 ಗಂಟೆಯವರೆಗೆ ಕುಮಟಾ ಪ್ರವಾಸ ಮಂದಿರ, ಜುಲೈ 20 ರಂದು ಬೆಳಗ್ಗೆ 11.ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಅಂಕೋಲಾ ಮತ್ತು ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಶಿರಸಿ ಪ್ರವಾಸಿ ಮಂದಿರ, ಜುಲೈ 21 ರಂದು ಬೆಳಗ್ಗೆ11.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಭಟ್ಕಳ ಮತ್ತು ಮುಂಡಗೋಡ ಪ್ರವಾಸಿ ಮಂದಿರ ಜುಲೈ 22 ರಂದು ಬೆಳಗ್ಗೆ 11.30.ರಿಂದ ಮಧ್ಯಾಹ್ನ 12.30 ವರೆಗೆ ಸಿದ್ದಾಪುರ ಮತ್ತು ಹೊನ್ನಾವರ ಪ್ರವಾಸಿ ಮಂದಿರ, ಜುಲೈ 24 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಯಲ್ಲಾಪುರ ಹಾಗೂ ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಹಳಿಯಾಳ ಪ್ರವಾಸಿ ಮಂದಿರ, ಜುಲೈ 25 ರಂದು ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಕಾರವಾರ ಪೊಲೀಸ್ ಅಧಿಕ್ಷಕರ ಕಚೇರಿಯಲ್ಲಿ ಅಹವಾಲು ಸ್ವೀಕರಿಸುವರು.
ಅನಾಮದೇಯ ಅರ್ಜಿಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾದ್ಯವಾಗದಿರುವ ಕಾರಣ ಅರ್ಜಿದಾರರು ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ತಪ್ಪದೇ ನಮೂದಿಸಿ ಅರ್ಜಿ ಸಲ್ಲಿಸಲು ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಕಾರವಾರ ಕೋರಿದ್ದಾರೆ.
Leave a Comment